<p>ಜಗತ್ತಿನ ಸಕಲ ಜೀವರಾಶಿಯನ್ನು ಸೃಷ್ಟಿಸಿದ ದೇವರು ಮನುಷ್ಯನಿಗೊಬ್ಬನಿಗೆ ಮಾತ್ರ ಬುದ್ಧಿ-ಮನಸ್ಸುಗಳನ್ನು ಕೊಟ್ಟ. ಮಾನವ ತನ್ನ ಬುದ್ಧಿಗೆ ದುರಹಂಕಾರವನ್ನು ಮೆತ್ತಿಕೊಂಡು ಅವಿವೇಕಿಯಾದ.</p>.<p>ಮಾನವನ ಅವಿವೇಕದ ಪರಮಾವಧಿಯೇ ಸೃಷ್ಟಿಯ ತಲ್ಲಣಗಳಿಗೆ ಕಾರಣವಾಗಿದೆ. ಮನಸ್ಸೆಂಬುದು ಆಸೆಗಳ ರಾಕೆಟ್. ಅದರಲ್ಲಿ ಯಾವ ವಿಷಯ ಬಿಟ್ಟರೂ ಛಂಗನೆ ಆಕಾಶಕ್ಕೆ ಚಿಮ್ಮುತ್ತದೆ. ಅಂದರೆ ಮನಸಿನ ವೇಗೋತ್ಕರ್ಷ ಅತ್ಯದ್ಭುತ. ಕ್ಷಣಮಾತ್ರದಲ್ಲಿ ಬ್ರಹ್ಮಾಂಡವನ್ನೇ ಸುತ್ತಿ ಬರುತ್ತದೆ. ಈ ವೇಗದ ಆಸೆಗೆ ನಿಯಂತ್ರಣ ಹಾಕುವ ಬ್ರೇಕ್ ನಮ್ಮಲ್ಲಿಲ್ಲದಿದ್ದರೆ ಅನಾಹುತ ಖಚಿತ.</p>.<p>ಮನಸ್ಸಿನ ಮಂಥನವನ್ನು ಸಮುದ್ರಮಂಥನಕ್ಕೆ ಹೋಲಿಸಲಾಗುತ್ತೆ. ದೇವ-ದಾನವರು ಸಮುದ್ರವನ್ನು ಕಡೆದಾಗ ಅಮೃತವೂ ಬಂತೂ, ವಿಷವೂ ಬಂತೂ. ಹಾಗೇ ಮನಸ್ಸನ್ನು ಮಂಥಿಸಿದರೆ ಅದರಲ್ಲೂ ಒಳ್ಳೆಯದೂ ಬರುತ್ತೆ, ಕೆಟ್ಟದ್ದೂ ಬರುತ್ತೆ. ಅದಕ್ಕಾಗಿ ನಾವು ಆಗಾಗ್ಗೆ ಮನಸ್ಸನ್ನು ಜ್ಞಾನದ ಕಡೆಗೋಲಿನಿಂದ ಕಡೆಯುತ್ತಿರಬೇಕು. ಇದರಲ್ಲಿ ಉಕ್ಕಿ ಬರುವ ಒಳ್ಳೆಯದು-ಕೆಟ್ಟದ್ದು – ಎರಡನ್ನು ಸೋಸಿ ಒಳ್ಳೆಯದನ್ನು ಮನಸ್ಸಿನೊಳಗೆ ಇಟ್ಟುಕೊಂಡು, ಕೆಟ್ಟದ್ದನ್ನು ಹೊರಗೆಸೆಯಬೇಕು. ಮನಸ್ಸಿನ ಕಶ್ಮಲವನ್ನು ತೆಗೆದಷ್ಟೂ ಮನಸ್ಸು ಪರಿಶುದ್ಧವಾಗುತ್ತದೆ; ಪ್ರಶಾಂತವಾಗಿರುತ್ತದೆ. ಕೆಟ್ಟ ಮನಸ್ಸು ಯಾವಾಗಲೂ ಕುದಿಯುತ್ತಿರುತ್ತದೆ. ಈ ಕುಲುಮೆಯಲ್ಲಿ ಬರುವ ಹೊಗೆಯ ಹೆಸರೇ ಹಗೆ.</p>.<p>ದುರಂತ ಎಂದರೆ, ಮನಸ್ಸಿನ ಮಂಥನಕ್ಕೆ ಬೇಕಾದ ಒಳ್ಳೆಯ ಜ್ಞಾನದ ಕಡೆಗೋಲೇ ನಮ್ಮಲ್ಲಿಲ್ಲ. ಮನಸ್ಸನ್ನು ಕಡೆದು ಕಶ್ಮಲವನ್ನು ತೆಗೆಯುವ ವಿಧಾನವೇ ನಮಗೆ ಗೊತ್ತಿಲ್ಲ. ಇದರಿಂದಾಗಿ ಜನರ ಮನಸ್ಸುಗಳು ಪಾಪಕೂಪದಲ್ಲಿ ಮುಳುಗಿರುತ್ತವೆ. ಮನಸ್ಸಿನಲ್ಲಿ ಹುಟ್ಟುವ ಎಲ್ಲ ಕೆಟ್ಟ ವಿಚಾರಗಳು ವೈರಸ್ಗಳಂತೆ ಬಹುಬೇಗ ಅಂಟಿಕೊಳ್ಳುತ್ತವೆ.</p>.<p>ಮನಸ್ಸನ್ನು ಕೆಡಿಸುವ ಕೆಟ್ಟ ವಿಚಾರಗಳ ಕ್ರಿಮಿಗಳು ಹೆಚ್ಚು ಕಾಲ ಇದ್ದಷ್ಟೂ ಮನಸ್ಸು ರೋಗಗ್ರಸ್ತವಾಗುತ್ತದೆ. ಇದರಿಂದಾಗಿ ಮನಸ್ಸಿನ ಮೇಲೆ ಬೀರುವ ಸಣ್ಣ ದ್ವೇಷದ ವಿಚಾರಗಳೂ ವಿಕಾರರೂಪವನ್ನು ತಾಳುತ್ತವೆ. ಹೀಗಾಗಿಯೇ ಜಾತಿ-ಧರ್ಮದ ವಿದ್ವೇಷಗಳು, ದುರಹಂಕಾರ, ಹಿಂಸೆ–ಕ್ರೌರ್ಯಗಳು, ಸ್ವಾರ್ಥಪರ ವಿಚಾರಗಳು ಜಗತ್ತಿನಲ್ಲಿ ವಿಜೃಂಭಿಸುತ್ತಿವೆ. ಇಂಥ ಕೆಟ್ಟು ಹೋದ ಮನಸ್ಸುಗಳಿಗೆ ಸದ್ವಿಚಾರಗಳಾಗಲಿ, ಸತ್ಯಸಂದೇಶಗಳಾಗಲಿ ಹೊಂದುವುದಿಲ್ಲ. ಏಕೆಂದರೆ ಕೆಟ್ಟ ವಿಚಾರಗಳು ಮನಸ್ಸನ್ನು ಆ ಮಟ್ಟಿಗೆ ಹಾಳು ಮಾಡಿರುತ್ತವೆ. ಇಂಥ ಕೊಳೆತ ಮನಸ್ಸುಗಳಿಂದ ಹುಟ್ಟುವ ಅಪಾಯಕಾರಿ ಕ್ರಿಮಿಗಳು ಒಬ್ಬರಿಂದ ಒಬ್ಬರಿಗೆ ಹರಡುವ ಸಾಂಕ್ರಾಮಿಕ ಕ್ರಿಮಿಗಳು ಹೌದು.</p>.<p>ಒಬ್ಬ ಮನುಷ್ಯನನ್ನು ಅಸಹ್ಯಿಸುವ-ದ್ವೇಷಿಸುವ-ಅಸೂಯಿಸುವ ಮನಃಸ್ಥಿತಿ ಬಂದಿದೆ ಎಂದರೆ, ಆ ಮನಸ್ಸು ರೋಗಪೀಡಿತವಾಗಿದೆ ಎಂದೇ ಅರ್ಥ. ಇಂಥವರಿಂದ ದೂರ ಇದ್ದಷ್ಟು ನಮ್ಮ ಮನಸ್ಸು ಆರೋಗ್ಯಕರವಾಗಿರುತ್ತದೆ. ಮನಸ್ಸಿನ ವಿಕೃತಿಯಿಂದ ಸಮಾಜದ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನು ಅರಿತ ಋಷಿಮುನಿಗಳು ಅದರ ನಿಗ್ರಹಕ್ಕೆ ಯೋಗ–ಧ್ಯಾನದ ಮೊರೆಹೋದರು.</p>.<p>ಮನುಷ್ಯ ಎಷ್ಟೇ ಆಧುನಿಕವಾಗಿ ಬೆಳೆದರೂ ಅವನ ಕಲಹ–ದ್ವೇಷಬುದ್ಧಿಗಳು ದೇಶ-ದೇಶಗಳ ನಡುವೆ ವಿದ್ವೇಷವನ್ನು ಸೃಷ್ಟಿಸಿ, ಉನ್ಮತ್ತಗೊಳಿಸಿ ಹೊಡೆದಾಡಿಸುತ್ತಿವೆ. ಏಕೆಂದರೆ, ರೋಗಗ್ರಸ್ತ ಮನಸ್ಸಿನ ಕ್ರಿಯೆಯೇ ದ್ವೇಷ. ಇದಕ್ಕಾಗಿಯೇ ಶ್ರೀದತ್ತಪ್ರಭು, ಪ್ರತಿಯೊಬ್ಬರು ‘ಸಚ್ಚಿದಾನಂದ’ರಾಗಿರಲು ಹೇಳಿದ್ದಾರೆ. ‘ಸತ್’ ಒಳ್ಳೆಯ, ‘ಚಿತ್’ ಮನಸ್ಸು ಇದ್ದರೆ, ಅಲ್ಲಿ ‘ಆನಂದ’ವಿರುತ್ತದೆ. ಆನಂದ ಇದ್ದೆಡೆ ಸುಖ-ಶಾಂತಿ ನೆಲೆಸಿರುತ್ತದೆ ಎನ್ನುವುದು ಸೂರ್ಯನಷ್ಟೆ ಸತ್ಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಜಗತ್ತಿನ ಸಕಲ ಜೀವರಾಶಿಯನ್ನು ಸೃಷ್ಟಿಸಿದ ದೇವರು ಮನುಷ್ಯನಿಗೊಬ್ಬನಿಗೆ ಮಾತ್ರ ಬುದ್ಧಿ-ಮನಸ್ಸುಗಳನ್ನು ಕೊಟ್ಟ. ಮಾನವ ತನ್ನ ಬುದ್ಧಿಗೆ ದುರಹಂಕಾರವನ್ನು ಮೆತ್ತಿಕೊಂಡು ಅವಿವೇಕಿಯಾದ.</p>.<p>ಮಾನವನ ಅವಿವೇಕದ ಪರಮಾವಧಿಯೇ ಸೃಷ್ಟಿಯ ತಲ್ಲಣಗಳಿಗೆ ಕಾರಣವಾಗಿದೆ. ಮನಸ್ಸೆಂಬುದು ಆಸೆಗಳ ರಾಕೆಟ್. ಅದರಲ್ಲಿ ಯಾವ ವಿಷಯ ಬಿಟ್ಟರೂ ಛಂಗನೆ ಆಕಾಶಕ್ಕೆ ಚಿಮ್ಮುತ್ತದೆ. ಅಂದರೆ ಮನಸಿನ ವೇಗೋತ್ಕರ್ಷ ಅತ್ಯದ್ಭುತ. ಕ್ಷಣಮಾತ್ರದಲ್ಲಿ ಬ್ರಹ್ಮಾಂಡವನ್ನೇ ಸುತ್ತಿ ಬರುತ್ತದೆ. ಈ ವೇಗದ ಆಸೆಗೆ ನಿಯಂತ್ರಣ ಹಾಕುವ ಬ್ರೇಕ್ ನಮ್ಮಲ್ಲಿಲ್ಲದಿದ್ದರೆ ಅನಾಹುತ ಖಚಿತ.</p>.<p>ಮನಸ್ಸಿನ ಮಂಥನವನ್ನು ಸಮುದ್ರಮಂಥನಕ್ಕೆ ಹೋಲಿಸಲಾಗುತ್ತೆ. ದೇವ-ದಾನವರು ಸಮುದ್ರವನ್ನು ಕಡೆದಾಗ ಅಮೃತವೂ ಬಂತೂ, ವಿಷವೂ ಬಂತೂ. ಹಾಗೇ ಮನಸ್ಸನ್ನು ಮಂಥಿಸಿದರೆ ಅದರಲ್ಲೂ ಒಳ್ಳೆಯದೂ ಬರುತ್ತೆ, ಕೆಟ್ಟದ್ದೂ ಬರುತ್ತೆ. ಅದಕ್ಕಾಗಿ ನಾವು ಆಗಾಗ್ಗೆ ಮನಸ್ಸನ್ನು ಜ್ಞಾನದ ಕಡೆಗೋಲಿನಿಂದ ಕಡೆಯುತ್ತಿರಬೇಕು. ಇದರಲ್ಲಿ ಉಕ್ಕಿ ಬರುವ ಒಳ್ಳೆಯದು-ಕೆಟ್ಟದ್ದು – ಎರಡನ್ನು ಸೋಸಿ ಒಳ್ಳೆಯದನ್ನು ಮನಸ್ಸಿನೊಳಗೆ ಇಟ್ಟುಕೊಂಡು, ಕೆಟ್ಟದ್ದನ್ನು ಹೊರಗೆಸೆಯಬೇಕು. ಮನಸ್ಸಿನ ಕಶ್ಮಲವನ್ನು ತೆಗೆದಷ್ಟೂ ಮನಸ್ಸು ಪರಿಶುದ್ಧವಾಗುತ್ತದೆ; ಪ್ರಶಾಂತವಾಗಿರುತ್ತದೆ. ಕೆಟ್ಟ ಮನಸ್ಸು ಯಾವಾಗಲೂ ಕುದಿಯುತ್ತಿರುತ್ತದೆ. ಈ ಕುಲುಮೆಯಲ್ಲಿ ಬರುವ ಹೊಗೆಯ ಹೆಸರೇ ಹಗೆ.</p>.<p>ದುರಂತ ಎಂದರೆ, ಮನಸ್ಸಿನ ಮಂಥನಕ್ಕೆ ಬೇಕಾದ ಒಳ್ಳೆಯ ಜ್ಞಾನದ ಕಡೆಗೋಲೇ ನಮ್ಮಲ್ಲಿಲ್ಲ. ಮನಸ್ಸನ್ನು ಕಡೆದು ಕಶ್ಮಲವನ್ನು ತೆಗೆಯುವ ವಿಧಾನವೇ ನಮಗೆ ಗೊತ್ತಿಲ್ಲ. ಇದರಿಂದಾಗಿ ಜನರ ಮನಸ್ಸುಗಳು ಪಾಪಕೂಪದಲ್ಲಿ ಮುಳುಗಿರುತ್ತವೆ. ಮನಸ್ಸಿನಲ್ಲಿ ಹುಟ್ಟುವ ಎಲ್ಲ ಕೆಟ್ಟ ವಿಚಾರಗಳು ವೈರಸ್ಗಳಂತೆ ಬಹುಬೇಗ ಅಂಟಿಕೊಳ್ಳುತ್ತವೆ.</p>.<p>ಮನಸ್ಸನ್ನು ಕೆಡಿಸುವ ಕೆಟ್ಟ ವಿಚಾರಗಳ ಕ್ರಿಮಿಗಳು ಹೆಚ್ಚು ಕಾಲ ಇದ್ದಷ್ಟೂ ಮನಸ್ಸು ರೋಗಗ್ರಸ್ತವಾಗುತ್ತದೆ. ಇದರಿಂದಾಗಿ ಮನಸ್ಸಿನ ಮೇಲೆ ಬೀರುವ ಸಣ್ಣ ದ್ವೇಷದ ವಿಚಾರಗಳೂ ವಿಕಾರರೂಪವನ್ನು ತಾಳುತ್ತವೆ. ಹೀಗಾಗಿಯೇ ಜಾತಿ-ಧರ್ಮದ ವಿದ್ವೇಷಗಳು, ದುರಹಂಕಾರ, ಹಿಂಸೆ–ಕ್ರೌರ್ಯಗಳು, ಸ್ವಾರ್ಥಪರ ವಿಚಾರಗಳು ಜಗತ್ತಿನಲ್ಲಿ ವಿಜೃಂಭಿಸುತ್ತಿವೆ. ಇಂಥ ಕೆಟ್ಟು ಹೋದ ಮನಸ್ಸುಗಳಿಗೆ ಸದ್ವಿಚಾರಗಳಾಗಲಿ, ಸತ್ಯಸಂದೇಶಗಳಾಗಲಿ ಹೊಂದುವುದಿಲ್ಲ. ಏಕೆಂದರೆ ಕೆಟ್ಟ ವಿಚಾರಗಳು ಮನಸ್ಸನ್ನು ಆ ಮಟ್ಟಿಗೆ ಹಾಳು ಮಾಡಿರುತ್ತವೆ. ಇಂಥ ಕೊಳೆತ ಮನಸ್ಸುಗಳಿಂದ ಹುಟ್ಟುವ ಅಪಾಯಕಾರಿ ಕ್ರಿಮಿಗಳು ಒಬ್ಬರಿಂದ ಒಬ್ಬರಿಗೆ ಹರಡುವ ಸಾಂಕ್ರಾಮಿಕ ಕ್ರಿಮಿಗಳು ಹೌದು.</p>.<p>ಒಬ್ಬ ಮನುಷ್ಯನನ್ನು ಅಸಹ್ಯಿಸುವ-ದ್ವೇಷಿಸುವ-ಅಸೂಯಿಸುವ ಮನಃಸ್ಥಿತಿ ಬಂದಿದೆ ಎಂದರೆ, ಆ ಮನಸ್ಸು ರೋಗಪೀಡಿತವಾಗಿದೆ ಎಂದೇ ಅರ್ಥ. ಇಂಥವರಿಂದ ದೂರ ಇದ್ದಷ್ಟು ನಮ್ಮ ಮನಸ್ಸು ಆರೋಗ್ಯಕರವಾಗಿರುತ್ತದೆ. ಮನಸ್ಸಿನ ವಿಕೃತಿಯಿಂದ ಸಮಾಜದ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನು ಅರಿತ ಋಷಿಮುನಿಗಳು ಅದರ ನಿಗ್ರಹಕ್ಕೆ ಯೋಗ–ಧ್ಯಾನದ ಮೊರೆಹೋದರು.</p>.<p>ಮನುಷ್ಯ ಎಷ್ಟೇ ಆಧುನಿಕವಾಗಿ ಬೆಳೆದರೂ ಅವನ ಕಲಹ–ದ್ವೇಷಬುದ್ಧಿಗಳು ದೇಶ-ದೇಶಗಳ ನಡುವೆ ವಿದ್ವೇಷವನ್ನು ಸೃಷ್ಟಿಸಿ, ಉನ್ಮತ್ತಗೊಳಿಸಿ ಹೊಡೆದಾಡಿಸುತ್ತಿವೆ. ಏಕೆಂದರೆ, ರೋಗಗ್ರಸ್ತ ಮನಸ್ಸಿನ ಕ್ರಿಯೆಯೇ ದ್ವೇಷ. ಇದಕ್ಕಾಗಿಯೇ ಶ್ರೀದತ್ತಪ್ರಭು, ಪ್ರತಿಯೊಬ್ಬರು ‘ಸಚ್ಚಿದಾನಂದ’ರಾಗಿರಲು ಹೇಳಿದ್ದಾರೆ. ‘ಸತ್’ ಒಳ್ಳೆಯ, ‘ಚಿತ್’ ಮನಸ್ಸು ಇದ್ದರೆ, ಅಲ್ಲಿ ‘ಆನಂದ’ವಿರುತ್ತದೆ. ಆನಂದ ಇದ್ದೆಡೆ ಸುಖ-ಶಾಂತಿ ನೆಲೆಸಿರುತ್ತದೆ ಎನ್ನುವುದು ಸೂರ್ಯನಷ್ಟೆ ಸತ್ಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>