<p>ಗುರುಪ್ರದೋಷವನ್ನು ಜನವರಿ 1ರಂದು ಆಚರಿಸಲಾಗುತ್ತದೆ. ಪುರಾಣ ಕಥೆಗಳು ಹೇಳುವಂತೆ ಅಮೃತಕ್ಕಾಗಿ ಕ್ಷೀರ ಸಾಗರವನ್ನು ಕಡೆದಾಗ ವಿಷ ಹಾಗೂ ಅಮೃತ ದೊರೆಯಿತು. ಆಗ ಧ್ಯಾನಾವಸ್ಥೆಯಲ್ಲಿದ್ದ ಶಿವನು ಲೋಕವನ್ನು ವಿಷದಿಂದ ಕಾಪಾಡಲು ಎಚ್ಚರಗೊಂಡ ಕಾಲವೇ ಪ್ರದೋಷ ಕಾಲ. ಇಂದು ಸಂಜೆ 4:30 ರಿಂದ 6:30ರ ನಡುವಿನ ಸಮಯ ಪ್ರದೋಷ ಕಾಲವಾಗಿದೆ.</p><p>ಈ ದಿನ ಉಪವಾಸವಿದ್ದು, ಶಿವ ಪೂಜೆಯನ್ನು ಮಾಡಿದರೆ ಒಳಿತುಂಟಾಗುತ್ತದೆ ಎಂಬ ನಂಬಿಕೆ ಇದೆ. ಪ್ರದೋಷ ಸಮಯದಲ್ಲಿ ಪೂಜೆ ಮಾಡಿದರೆ ಸಕಲ ದೇವರುಗಳ ಅನುಗ್ರಹ ನಿಮ್ಮದಾಗಲಿದೆ. ಸೋಮವಾರ ಬರುವ ಪ್ರದೋಷವನ್ನು ಸೋಮ ಪ್ರದೋಷವೆಂದು ಗುರುವಾರ ಬರುವ ಪ್ರದೋಷವನ್ನು ಗುರುಪ್ರದೋಷವೆಂದು ಕರೆಯಲಾಗುತ್ತದೆ.</p>.ಬುಧ ಪ್ರದೋಷ ಆಚರಣೆ ಹಿಂದಿನ ಉದ್ದೇಶವೇನು? ಇಲ್ಲಿದೆ ಮಾಹಿತಿ.ಪ್ರದೋಷ ವ್ರತ ಆಚರಣೆ: ಮಹತ್ವ, ಹಿನ್ನಲೆ ಏನು? .<p><strong>ಗುರುಪ್ರದೋಷದ ಮಹತ್ವ:</strong> </p><p>ಗುರು ಪ್ರದೋಷವನ್ನು ಆಚರಣೆ ಮಾಡುವುದರಿಂದ ಪದವಿಯಲ್ಲಿ ಉನ್ನತಿ, ಸಂಪತ್ತು ಲಭಿಸಲಿದೆ. ಜಾತಕದ ಪ್ರಕಾರ ಶನಿದೋಷ ಹಾಗೂ ಸಾಡೆ ಸಾತಿಯ ಪ್ರಭಾವ ಕಡಿಮೆಯಾಗುತ್ತದೆ ಎಂಬ ನಂಬಿಕೆ ಇದೆ. </p><p>ಇಂದು ಶಿವನಿಗೆ ಪೂಜೆ ಮಾಡುವುದರಿಂದ ಮದುವೆಗೆ ಇರುವ ಅಡೆತಡೆಗಳನ್ನು ಕಡಿಮೆಯಾಗಿ ಶುಭಯೋಗ ಕೂಡಿಬರಲಿದೆ. ಈ ದಿನ ರಾಘವೇಂದ್ರ ಸ್ವಾಮಿ ಹಾಗೂ ಲಕ್ಷ್ಮೀ ವಿಗ್ರಹಗಳಿಗೆ ಅಭಿಷೇಕ ಮಾಡಿ ಪೂಜಿಸಬೇಕು. ’ಓಂ ಶ್ರೀ ಗುರು ರಾಘವೇಂದ್ರಾಯನಮಃ’ ಎನ್ನುವ ಮಂತ್ರವನ್ನು ಜಪಿಸಬೇಕು.</p><p>ಪೂಜೆಯಲ್ಲಿ ಹಳದಿ ಬಣ್ಣದ ಹೂವು, ಅಕ್ಷತೆ, ದೀಪ, ಧೂಪದ್ರವ್ಯ ಹಾಗೂ ಸಿಹಿತಿಂಡಿಗಳನ್ನು ನೈವೇದ್ಯ ಮಾಡಬೇಕು. ಪೂಜಾ ಸಮಯದಲ್ಲಿ ಹಳದಿ ಬಟ್ಟೆ ಧರಿಸುವುದು ಒಳ್ಳೆಯದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗುರುಪ್ರದೋಷವನ್ನು ಜನವರಿ 1ರಂದು ಆಚರಿಸಲಾಗುತ್ತದೆ. ಪುರಾಣ ಕಥೆಗಳು ಹೇಳುವಂತೆ ಅಮೃತಕ್ಕಾಗಿ ಕ್ಷೀರ ಸಾಗರವನ್ನು ಕಡೆದಾಗ ವಿಷ ಹಾಗೂ ಅಮೃತ ದೊರೆಯಿತು. ಆಗ ಧ್ಯಾನಾವಸ್ಥೆಯಲ್ಲಿದ್ದ ಶಿವನು ಲೋಕವನ್ನು ವಿಷದಿಂದ ಕಾಪಾಡಲು ಎಚ್ಚರಗೊಂಡ ಕಾಲವೇ ಪ್ರದೋಷ ಕಾಲ. ಇಂದು ಸಂಜೆ 4:30 ರಿಂದ 6:30ರ ನಡುವಿನ ಸಮಯ ಪ್ರದೋಷ ಕಾಲವಾಗಿದೆ.</p><p>ಈ ದಿನ ಉಪವಾಸವಿದ್ದು, ಶಿವ ಪೂಜೆಯನ್ನು ಮಾಡಿದರೆ ಒಳಿತುಂಟಾಗುತ್ತದೆ ಎಂಬ ನಂಬಿಕೆ ಇದೆ. ಪ್ರದೋಷ ಸಮಯದಲ್ಲಿ ಪೂಜೆ ಮಾಡಿದರೆ ಸಕಲ ದೇವರುಗಳ ಅನುಗ್ರಹ ನಿಮ್ಮದಾಗಲಿದೆ. ಸೋಮವಾರ ಬರುವ ಪ್ರದೋಷವನ್ನು ಸೋಮ ಪ್ರದೋಷವೆಂದು ಗುರುವಾರ ಬರುವ ಪ್ರದೋಷವನ್ನು ಗುರುಪ್ರದೋಷವೆಂದು ಕರೆಯಲಾಗುತ್ತದೆ.</p>.ಬುಧ ಪ್ರದೋಷ ಆಚರಣೆ ಹಿಂದಿನ ಉದ್ದೇಶವೇನು? ಇಲ್ಲಿದೆ ಮಾಹಿತಿ.ಪ್ರದೋಷ ವ್ರತ ಆಚರಣೆ: ಮಹತ್ವ, ಹಿನ್ನಲೆ ಏನು? .<p><strong>ಗುರುಪ್ರದೋಷದ ಮಹತ್ವ:</strong> </p><p>ಗುರು ಪ್ರದೋಷವನ್ನು ಆಚರಣೆ ಮಾಡುವುದರಿಂದ ಪದವಿಯಲ್ಲಿ ಉನ್ನತಿ, ಸಂಪತ್ತು ಲಭಿಸಲಿದೆ. ಜಾತಕದ ಪ್ರಕಾರ ಶನಿದೋಷ ಹಾಗೂ ಸಾಡೆ ಸಾತಿಯ ಪ್ರಭಾವ ಕಡಿಮೆಯಾಗುತ್ತದೆ ಎಂಬ ನಂಬಿಕೆ ಇದೆ. </p><p>ಇಂದು ಶಿವನಿಗೆ ಪೂಜೆ ಮಾಡುವುದರಿಂದ ಮದುವೆಗೆ ಇರುವ ಅಡೆತಡೆಗಳನ್ನು ಕಡಿಮೆಯಾಗಿ ಶುಭಯೋಗ ಕೂಡಿಬರಲಿದೆ. ಈ ದಿನ ರಾಘವೇಂದ್ರ ಸ್ವಾಮಿ ಹಾಗೂ ಲಕ್ಷ್ಮೀ ವಿಗ್ರಹಗಳಿಗೆ ಅಭಿಷೇಕ ಮಾಡಿ ಪೂಜಿಸಬೇಕು. ’ಓಂ ಶ್ರೀ ಗುರು ರಾಘವೇಂದ್ರಾಯನಮಃ’ ಎನ್ನುವ ಮಂತ್ರವನ್ನು ಜಪಿಸಬೇಕು.</p><p>ಪೂಜೆಯಲ್ಲಿ ಹಳದಿ ಬಣ್ಣದ ಹೂವು, ಅಕ್ಷತೆ, ದೀಪ, ಧೂಪದ್ರವ್ಯ ಹಾಗೂ ಸಿಹಿತಿಂಡಿಗಳನ್ನು ನೈವೇದ್ಯ ಮಾಡಬೇಕು. ಪೂಜಾ ಸಮಯದಲ್ಲಿ ಹಳದಿ ಬಟ್ಟೆ ಧರಿಸುವುದು ಒಳ್ಳೆಯದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>