<p>ಡಿಸೆಂಬರ್ 11ರ ಸಂಜೆ 6.30ಕ್ಕೆ ಆರಂಭವಾಗಿ 12ರ ಸಂಜೆ 6.35ಕ್ಕೆ ಮುಕ್ತಾಯಗೊಳ್ಳಲಿರುವ ಅಷ್ಟಮಿ ತಿಥಿಗೆ ಮೊದಲು ಕಾಲಭೈರವಾಷ್ಟಮಿಯನ್ನು ಆಚರಿಸಲಾಗುತ್ತದೆ. ಇದರ ಆಚರಣೆಯಿಂದ ಒಳಿತಾಗುತ್ತದೆ ಎಂಬ ನಂಬಿಕೆ ಇದೆ. ಈ ದಿನದ ಮಹತ್ವವೇನು ಎಂಬುದನ್ನು ತಿಳಿಯೋಣ. </p><p>ಕಾಲಭೈರವನನ್ನು ಪೂಜಿಸುವ ಭಕ್ತರು ಬೆಳಿಗ್ಗೆ ಬೇಗನೆ ಎದ್ದು ತಲೆಗೆ ಸ್ವಲ್ಪವಾದರೂ ಎಳ್ಳೆಣ್ಣೆಯನ್ನು ಹಚ್ಚಿ ಸ್ನಾನ ಮಾಡಬೇಕು. ಬಳಿಕ ನೀಲಿ ಅಥವಾ ಕಪ್ಪು ವಸ್ತ್ರವನ್ನು ಧರಿಸಿ. ಕಾಲಭೈರವನ (ಈಶ್ವರ) ದೇವಸ್ಥಾನಕ್ಕೆ ಭೇಟಿ ನೀಡಿ ಶ್ರದ್ಧೆ ಮತ್ತು ಭಕ್ತಿಯಿಂದ ಪೂಜೆ ಸಲ್ಲಿಸಿ.</p>.ಜ್ಯೋತಿಷ | ತಾಂಬೂಲಕ್ಕೆ ಮಾತ್ರವಲ್ಲ, ಪೂಜೆಗೂ ಬೇಕು ವೀಳ್ಯದೆಲೆ: ಯಾಕೆ ಗೊತ್ತಾ?.ಕಾರ್ತಿಕ ಮಾಸದಲ್ಲಿ ದೀಪವನ್ನು ಹೀಗೆ ಬೆಳಗಿಸಿದರೆ ಫಲ ಹೆಚ್ಚು: ಜ್ಯೋತಿಷ .<p>ಪೂಜಾ ಸಮಯದಲ್ಲಿ ಬೇವಿನ ಹಣ್ಣಿನಿಂದ ಕಾಲಭೈರವನಿಗೆ ನೈವೇದ್ಯ ಮಾಡಿ. ಪೂಜೆಯಲ್ಲಿ ಕುಂಬಳಕಾಯಿಯ ದೀಪ ಹಚ್ಚುವುದು ಶ್ರೇಷ್ಠವೆಂಬ ನಂಬಿಕೆ ಇದೆ.</p><p>ಕಾಲಭೈರವನಿಗೆ ಪೂಜೆ ಸಲ್ಲಿಸಿದ ನಂತರ ಶ್ವಾನಗಳಿಗೆ ಆಹಾರವನ್ನು ನೀಡಿದರೆ, ಕಾಲಭೈರವನ ಕೃಪಾಶೀರ್ವಾದ ದೊರೆಯುತ್ತದೆ ಎಂದು ಹೇಳಲಾಗುತ್ತದೆ. </p><p>ಈ ಪೂಜೆಯಿಂದ ಮಾಟ ಮಂತ್ರ ಜಾತಕ ದೋಷ ಪರಿಹಾರವಾಗುತ್ತದೆ. ಆದರೆ ಗೃಹಸ್ಥಾಶ್ರಮದಲ್ಲಿರುವವರು ಕಾಲಭೈರವನ ವಿಗ್ರಹ ಅಥವಾ ಫೋಟೋವನ್ನು ಮನೆಯಲ್ಲಿ ಇಟ್ಟು ಪೂಜಿಸಬಾರದು ಎಂದು ಹೇಳಲಾಗುತ್ತದೆ.</p><p>ಕಾಲಭೈರವನನ್ನು ನಿಷ್ಠೆ, ಶ್ರದ್ಧೆಯಿಂದ ಪೂಜಿಸುವುದರಿಂದ ಸಾಂಸಾರಿಕ ಜೀವನದಲ್ಲಿ ಸುಗಮವಾಗುತ್ತದೆ ಎಂದು ಸ್ಕಂದ ಪುರಾಣ, ಶಿವ ಪುರಾಣ ಹಾಗೂ ದೇವಿ ಪುರಾಣದಲ್ಲಿ ಹೇಳಲಾಗಿದೆ.</p>.ಸುಬ್ರಹ್ಮಣ್ಯ ಷಷ್ಠಿ: ಇದರ ಹಿನ್ನಲೆ, ತುಳುನಾಡಿಗೂ ಈ ಆಚರಣೆಗೂ ಇರುವ ಸಂಬಂಧವೇನು?.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಡಿಸೆಂಬರ್ 11ರ ಸಂಜೆ 6.30ಕ್ಕೆ ಆರಂಭವಾಗಿ 12ರ ಸಂಜೆ 6.35ಕ್ಕೆ ಮುಕ್ತಾಯಗೊಳ್ಳಲಿರುವ ಅಷ್ಟಮಿ ತಿಥಿಗೆ ಮೊದಲು ಕಾಲಭೈರವಾಷ್ಟಮಿಯನ್ನು ಆಚರಿಸಲಾಗುತ್ತದೆ. ಇದರ ಆಚರಣೆಯಿಂದ ಒಳಿತಾಗುತ್ತದೆ ಎಂಬ ನಂಬಿಕೆ ಇದೆ. ಈ ದಿನದ ಮಹತ್ವವೇನು ಎಂಬುದನ್ನು ತಿಳಿಯೋಣ. </p><p>ಕಾಲಭೈರವನನ್ನು ಪೂಜಿಸುವ ಭಕ್ತರು ಬೆಳಿಗ್ಗೆ ಬೇಗನೆ ಎದ್ದು ತಲೆಗೆ ಸ್ವಲ್ಪವಾದರೂ ಎಳ್ಳೆಣ್ಣೆಯನ್ನು ಹಚ್ಚಿ ಸ್ನಾನ ಮಾಡಬೇಕು. ಬಳಿಕ ನೀಲಿ ಅಥವಾ ಕಪ್ಪು ವಸ್ತ್ರವನ್ನು ಧರಿಸಿ. ಕಾಲಭೈರವನ (ಈಶ್ವರ) ದೇವಸ್ಥಾನಕ್ಕೆ ಭೇಟಿ ನೀಡಿ ಶ್ರದ್ಧೆ ಮತ್ತು ಭಕ್ತಿಯಿಂದ ಪೂಜೆ ಸಲ್ಲಿಸಿ.</p>.ಜ್ಯೋತಿಷ | ತಾಂಬೂಲಕ್ಕೆ ಮಾತ್ರವಲ್ಲ, ಪೂಜೆಗೂ ಬೇಕು ವೀಳ್ಯದೆಲೆ: ಯಾಕೆ ಗೊತ್ತಾ?.ಕಾರ್ತಿಕ ಮಾಸದಲ್ಲಿ ದೀಪವನ್ನು ಹೀಗೆ ಬೆಳಗಿಸಿದರೆ ಫಲ ಹೆಚ್ಚು: ಜ್ಯೋತಿಷ .<p>ಪೂಜಾ ಸಮಯದಲ್ಲಿ ಬೇವಿನ ಹಣ್ಣಿನಿಂದ ಕಾಲಭೈರವನಿಗೆ ನೈವೇದ್ಯ ಮಾಡಿ. ಪೂಜೆಯಲ್ಲಿ ಕುಂಬಳಕಾಯಿಯ ದೀಪ ಹಚ್ಚುವುದು ಶ್ರೇಷ್ಠವೆಂಬ ನಂಬಿಕೆ ಇದೆ.</p><p>ಕಾಲಭೈರವನಿಗೆ ಪೂಜೆ ಸಲ್ಲಿಸಿದ ನಂತರ ಶ್ವಾನಗಳಿಗೆ ಆಹಾರವನ್ನು ನೀಡಿದರೆ, ಕಾಲಭೈರವನ ಕೃಪಾಶೀರ್ವಾದ ದೊರೆಯುತ್ತದೆ ಎಂದು ಹೇಳಲಾಗುತ್ತದೆ. </p><p>ಈ ಪೂಜೆಯಿಂದ ಮಾಟ ಮಂತ್ರ ಜಾತಕ ದೋಷ ಪರಿಹಾರವಾಗುತ್ತದೆ. ಆದರೆ ಗೃಹಸ್ಥಾಶ್ರಮದಲ್ಲಿರುವವರು ಕಾಲಭೈರವನ ವಿಗ್ರಹ ಅಥವಾ ಫೋಟೋವನ್ನು ಮನೆಯಲ್ಲಿ ಇಟ್ಟು ಪೂಜಿಸಬಾರದು ಎಂದು ಹೇಳಲಾಗುತ್ತದೆ.</p><p>ಕಾಲಭೈರವನನ್ನು ನಿಷ್ಠೆ, ಶ್ರದ್ಧೆಯಿಂದ ಪೂಜಿಸುವುದರಿಂದ ಸಾಂಸಾರಿಕ ಜೀವನದಲ್ಲಿ ಸುಗಮವಾಗುತ್ತದೆ ಎಂದು ಸ್ಕಂದ ಪುರಾಣ, ಶಿವ ಪುರಾಣ ಹಾಗೂ ದೇವಿ ಪುರಾಣದಲ್ಲಿ ಹೇಳಲಾಗಿದೆ.</p>.ಸುಬ್ರಹ್ಮಣ್ಯ ಷಷ್ಠಿ: ಇದರ ಹಿನ್ನಲೆ, ತುಳುನಾಡಿಗೂ ಈ ಆಚರಣೆಗೂ ಇರುವ ಸಂಬಂಧವೇನು?.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>