<p>ನವದುರ್ಗೆಯರನ್ನು ಆರಾಧಿಸುವವರು ನವರಾತ್ರಿಯಲ್ಲಿ ಕೆಲವು ತಪ್ಪುಗಳನ್ನು ಮಾಡಬಾರದು ಎಂದು ಜ್ಯೋತಿಷ ಹೇಳುತ್ತದೆ. ಜ್ಯೋತಿಷದ ಪ್ರಕಾರ ನವರಾತ್ರಿಯಲ್ಲಿ ಕೆಲವು ಆಹಾರಗಳನ್ನು ಸೇವಿಸಬಾರದು. ಹಾಗಾದರೆ ನವರಾತ್ರಿಯಲ್ಲಿ ಯಾವೆಲ್ಲಾ ಆಹಾರ ಸೇವಿಸಬಾರದು, ಯಾವ ಕೆಲಸ ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.</p><p><strong>ಯಾವ ಆಹಾರವನ್ನು ಸೇವಿಸಬಾರದು? </strong></p><ul><li><p>ನವರಾತ್ರಿ ಆಚರಣೆ ಮಾಡುವವರು ಮಾಂಸಹಾರ ಸೇವಿಸಬಾರದು ಹಾಗೂ ಮದ್ಯಪಾನ ಮಾಡಬಾರದು ಎಂದು ಜ್ಯೋತಿಷ ಹೇಳುತ್ತದೆ.</p></li><li><p>ಆದಷ್ಟು ದೇವಿಗೆ ಮನೆಯಲ್ಲಿಯೇ ತಯಾರಿಸಿದ ಸಿಹಿ ತಿಂಡಿಗಳನ್ನು ನೈವೇದ್ಯ ಮಾಡಿ ಸೇವಿಸಿದರೆ ಒಳಿತಾಗುತ್ತದೆ ಎಂಬ ನಂಬಿಕೆ ಇದೆ.</p></li></ul>.ನವರಾತ್ರಿ 5ನೇ ದಿನ ಸ್ಕಂದ ಮಾತೆಯ ಪೂಜೆ: ನೈವೇದ್ಯದಲ್ಲಿ ಈ ಆಹಾರಗಳಿರಲಿ.<p><strong>ಈ ಕೆಲಸಗಳನ್ನು ಮಾಡಬಾರದು?</strong> </p><ul><li><p>ನವರಾತ್ರಿಯನ್ನು ಶ್ರದ್ಧೆ ಭಕ್ತಿಯಿಂದ ದೇವಿಯನ್ನು ಆರಾಧಿಸಿದರೆ ಸಕಲವೂ ಸಿದ್ದಿಯಾಗುತ್ತವೆ ಎಂಬ ನಂಬಿಕೆ ಇದೆ. ಆದ್ದರಿಂದ ಸಾಧ್ಯವಾದಷ್ಟು ಶುಭ್ರವಾಗಿರಬೇಕು ಎಂದು ಜ್ಯೋತಿಷ ಹೇಳುತ್ತದೆ. </p></li><li><p>ನವರಾತ್ರಿ ಮುಗಿಯುವವರೆಗೂ ಉಗುರನ್ನು ಕತ್ತರಿಸದಿರುವುದು ಉತ್ತಮ ಎಂದು ಜ್ಯೋತಿಷದಲ್ಲಿ ತಿಳಿಸಿದೆ. ಒಂದು ವೇಳೆ ಕತ್ತರಿಸಿದರೆ ಅಶುಭ ಉಂಟಾಗಬಹುದು ಎಂದು ಹೇಳಲಾಗುತ್ತದೆ. </p></li><li><p>ಹಗಲಿನಲ್ಲಿ ಮಲಗುವುದರಿಂದ ನಿಮ್ಮ ಪುಣ್ಯಗಳು ಕಡಿಮೆಯಾಗುತ್ತವೆ ಎಂದು ಹೇಳಲಾಗುತ್ತದೆ. </p></li></ul><p><strong>ಶುಭ ಫಲಗಳನ್ನು ಪಡೆಯಲು ಈ ರೀತಿ ಮಾಡಿ:</strong> </p><p>ಪ್ರತಿದಿನ ಮನೆಯ ಬಾಗಿಲಿಗೆ ಮಾವಿನ ಎಲೆಯ ತೋರಣ ಕಟ್ಟಿ ದೇವಿಯನ್ನು ಆರಾಧನೆ ಮಾಡಿ. ಮನೆಯ ಮುಂದೆ ಹಸುವಿನ ಸಗಣಿಯಿಂದ ಸಾರಿಸಿ, ರಂಗೋಲಿಯನ್ನು ಹಾಕಿ ದೀಪಾರಾಧನೆಯನ್ನು ಮಾಡುವುದು ಉತ್ತಮ. </p><p>ನಿತ್ಯ ಆಯಾ ದಿನದ ದೇವಿಯನ್ನು ಪೂಜಿಸಿ ನೈವೇದ್ಯ ಮಾಡಬೇಕು. ಸಾಧ್ಯವಾದರೆ ನೆರೆಹೊರೆಯವರಿಗೆ ಪ್ರಸಾದ ನೀಡುವುದು ಒಳ್ಳೆಯದು. ಪೂಜೆಯ ನಂತರ ಯಾವುದಾದರೂ ಒಂದು ದೇವಾಲಯಕ್ಕೆ ಭೇಟಿ ನೀಡಿದರೆ ಒಳಿತಾಗುತ್ತದೆ ಎಂದು ಜ್ಯೋತಿಷದಲ್ಲಿ ಸಲಹೆ ನೀಡಿದೆ.</p>.ನವರಾತ್ರಿ 5ನೇ ದಿನ | ಸ್ಕಂದ ಮಾತೆಯ ಪೂಜೆ ಹೀಗಿರಲಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದುರ್ಗೆಯರನ್ನು ಆರಾಧಿಸುವವರು ನವರಾತ್ರಿಯಲ್ಲಿ ಕೆಲವು ತಪ್ಪುಗಳನ್ನು ಮಾಡಬಾರದು ಎಂದು ಜ್ಯೋತಿಷ ಹೇಳುತ್ತದೆ. ಜ್ಯೋತಿಷದ ಪ್ರಕಾರ ನವರಾತ್ರಿಯಲ್ಲಿ ಕೆಲವು ಆಹಾರಗಳನ್ನು ಸೇವಿಸಬಾರದು. ಹಾಗಾದರೆ ನವರಾತ್ರಿಯಲ್ಲಿ ಯಾವೆಲ್ಲಾ ಆಹಾರ ಸೇವಿಸಬಾರದು, ಯಾವ ಕೆಲಸ ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.</p><p><strong>ಯಾವ ಆಹಾರವನ್ನು ಸೇವಿಸಬಾರದು? </strong></p><ul><li><p>ನವರಾತ್ರಿ ಆಚರಣೆ ಮಾಡುವವರು ಮಾಂಸಹಾರ ಸೇವಿಸಬಾರದು ಹಾಗೂ ಮದ್ಯಪಾನ ಮಾಡಬಾರದು ಎಂದು ಜ್ಯೋತಿಷ ಹೇಳುತ್ತದೆ.</p></li><li><p>ಆದಷ್ಟು ದೇವಿಗೆ ಮನೆಯಲ್ಲಿಯೇ ತಯಾರಿಸಿದ ಸಿಹಿ ತಿಂಡಿಗಳನ್ನು ನೈವೇದ್ಯ ಮಾಡಿ ಸೇವಿಸಿದರೆ ಒಳಿತಾಗುತ್ತದೆ ಎಂಬ ನಂಬಿಕೆ ಇದೆ.</p></li></ul>.ನವರಾತ್ರಿ 5ನೇ ದಿನ ಸ್ಕಂದ ಮಾತೆಯ ಪೂಜೆ: ನೈವೇದ್ಯದಲ್ಲಿ ಈ ಆಹಾರಗಳಿರಲಿ.<p><strong>ಈ ಕೆಲಸಗಳನ್ನು ಮಾಡಬಾರದು?</strong> </p><ul><li><p>ನವರಾತ್ರಿಯನ್ನು ಶ್ರದ್ಧೆ ಭಕ್ತಿಯಿಂದ ದೇವಿಯನ್ನು ಆರಾಧಿಸಿದರೆ ಸಕಲವೂ ಸಿದ್ದಿಯಾಗುತ್ತವೆ ಎಂಬ ನಂಬಿಕೆ ಇದೆ. ಆದ್ದರಿಂದ ಸಾಧ್ಯವಾದಷ್ಟು ಶುಭ್ರವಾಗಿರಬೇಕು ಎಂದು ಜ್ಯೋತಿಷ ಹೇಳುತ್ತದೆ. </p></li><li><p>ನವರಾತ್ರಿ ಮುಗಿಯುವವರೆಗೂ ಉಗುರನ್ನು ಕತ್ತರಿಸದಿರುವುದು ಉತ್ತಮ ಎಂದು ಜ್ಯೋತಿಷದಲ್ಲಿ ತಿಳಿಸಿದೆ. ಒಂದು ವೇಳೆ ಕತ್ತರಿಸಿದರೆ ಅಶುಭ ಉಂಟಾಗಬಹುದು ಎಂದು ಹೇಳಲಾಗುತ್ತದೆ. </p></li><li><p>ಹಗಲಿನಲ್ಲಿ ಮಲಗುವುದರಿಂದ ನಿಮ್ಮ ಪುಣ್ಯಗಳು ಕಡಿಮೆಯಾಗುತ್ತವೆ ಎಂದು ಹೇಳಲಾಗುತ್ತದೆ. </p></li></ul><p><strong>ಶುಭ ಫಲಗಳನ್ನು ಪಡೆಯಲು ಈ ರೀತಿ ಮಾಡಿ:</strong> </p><p>ಪ್ರತಿದಿನ ಮನೆಯ ಬಾಗಿಲಿಗೆ ಮಾವಿನ ಎಲೆಯ ತೋರಣ ಕಟ್ಟಿ ದೇವಿಯನ್ನು ಆರಾಧನೆ ಮಾಡಿ. ಮನೆಯ ಮುಂದೆ ಹಸುವಿನ ಸಗಣಿಯಿಂದ ಸಾರಿಸಿ, ರಂಗೋಲಿಯನ್ನು ಹಾಕಿ ದೀಪಾರಾಧನೆಯನ್ನು ಮಾಡುವುದು ಉತ್ತಮ. </p><p>ನಿತ್ಯ ಆಯಾ ದಿನದ ದೇವಿಯನ್ನು ಪೂಜಿಸಿ ನೈವೇದ್ಯ ಮಾಡಬೇಕು. ಸಾಧ್ಯವಾದರೆ ನೆರೆಹೊರೆಯವರಿಗೆ ಪ್ರಸಾದ ನೀಡುವುದು ಒಳ್ಳೆಯದು. ಪೂಜೆಯ ನಂತರ ಯಾವುದಾದರೂ ಒಂದು ದೇವಾಲಯಕ್ಕೆ ಭೇಟಿ ನೀಡಿದರೆ ಒಳಿತಾಗುತ್ತದೆ ಎಂದು ಜ್ಯೋತಿಷದಲ್ಲಿ ಸಲಹೆ ನೀಡಿದೆ.</p>.ನವರಾತ್ರಿ 5ನೇ ದಿನ | ಸ್ಕಂದ ಮಾತೆಯ ಪೂಜೆ ಹೀಗಿರಲಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>