<p><strong>ದೃಷ್ಟಿಪೂತಂ ನ್ಯಸೇತ್ಪಾದಂ ವಸ್ತ್ರಪೂತಂ ಜಲಂ ಪಿಬೇತ್ ।</strong></p>.<p><strong>ಸತ್ಯಪೂತಾಂ ವದೇದ್ವಾಚಂ ಮನಃಪೂತಂ ಸಮಾಚರೇತ್ ।।</strong></p>.<p>ಇದರ ತಾತ್ಪರ್ಯ ಹೀಗೆ:</p>.<p>‘ಕಣ್ಣಿನಿಂದ ಸರಿಯಾಗಿ ನೋಡಿ ಹೆಜ್ಜೆಯನ್ನು ಇಡಬೇಕು; ಬಟ್ಟೆಯಿಂದ ಶೋಧಿಸಿಯೇ ನೀರನ್ನು ಕುಡಿಯಬೇಕು; ಸತ್ಯದಿಂದ ಶುದ್ಧಿಯಾದ ಮಾತನ್ನೇ ಆಡಬೇಕು; ಮನಸ್ಸಿನಿಂದ ಪವಿತ್ರವಾದ ಕೆಲಸವನ್ನೇ ಮಾಡಬೇಕು.’</p>.<p>ನಾವು ಮಾಡುವ ಪ್ರತಿ ಕೆಲಸವನ್ನು ಎಚ್ಚರಿಕೆಯಿಂದಲೂ ಮಾಡಬೇಕು; ಹಾಗೆ ಮಾಡಿದ ಕೆಲಸ ಶುದ್ಧವಾಗಿಯೂ ಇರಬೇಕು. ಆಗಲೇ ನಮ್ಮ ಜೀವನಾರೋಗ್ಯ ಚೆನ್ನಾಗಿರಬಲ್ಲದು ಎನ್ನುತ್ತಿದೆ ಸುಭಾಷಿತ.</p>.<p>ದಾರಿಯಲ್ಲಿ ನಡೆದ ಮಾತ್ರಕ್ಕೆ ನಾವು ಗುರಿಯನ್ನು ತಲಪುವುದಿಲ್ಲ; ಆ ದಾರಿಯಲ್ಲಿ ಸರಿಯಾಗಿಯೂ ನಡೆಯಬೇಕು, ನಮಗೆ ಅದು ನಿಷ್ಕಂಟಕವಾಗಿರಬೇಕು. ಅದನ್ನೇ ಸುಭಾಷಿತ ಹೇಳುತ್ತಿರುವುದು ಕಣ್ಣಿನಿಂದ ನೋಡುತ್ತ, ಎಂದರೆ ದಾರಿ ಸರಿ ಇದೆಯೆ ಎಂದು ಪರೀಕ್ಷಿಸುತ್ತ ನಡೆಯಬೇಕು.</p>.<p>ನೀರು ನಮ್ಮ ಆರೋಗ್ಯಕ್ಕೆ ತುಂಬ ಮುಖ್ಯವಾದುದು. ಹೀಗಾಗಿ ಶುದ್ಧವಾದ ನೀರನ್ನೇ ಕುಡಿಯಬೇಕು. ಆದುದರಿಂದ ಬಟ್ಟಯಿಂದ ನೀರನ್ನು ಶೋಧಿಸಿ ಕುಡಿಯಬೇಕು. ಅಶುದ್ಧವಾದ ನೀರು ನಮ್ಮ ಅನಾರೋಗ್ಯಕ್ಕೆ ಕಾರಣವಾಗಬಹುದು.</p>.<p>ನಾವು ಮಾತನ್ನೂ ಶುದ್ಧೀಕರಿಸಿಯೇ ಆಡಬೇಕು. ಮಾತನ್ನು ಹೇಗೆ ಶುದ್ಧಮಾಡುವುದು? ಸತ್ಯವಾದ ಮಾತನ್ನೇ ಆಡಿದರೆ ಆಗ ಆ ಮಾತು ಶುದ್ಧವಾಗಿದೆ ಎಂದೇ ಅರ್ಥ.</p>.<p>ನಾವು ಮಾಡುವ ಕೆಲಸಗಳು ಶುದ್ಧವಾಗಿರಬೇಕು. ಪವಿತ್ರವಾದ, ಎಂದರೆ ಒಳ್ಳೆಯ ಕೆಲಸಗಳೇ ಪವಿತ್ರವಾದ ಕೆಲಸಗಳು. ಅಂಥ ಕೆಲಸಗಳನ್ನೇ ನಾವು ಮಾಡಬೇಕು ಎಂದು ಸುಭಾಷಿತ ಹೇಳುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೃಷ್ಟಿಪೂತಂ ನ್ಯಸೇತ್ಪಾದಂ ವಸ್ತ್ರಪೂತಂ ಜಲಂ ಪಿಬೇತ್ ।</strong></p>.<p><strong>ಸತ್ಯಪೂತಾಂ ವದೇದ್ವಾಚಂ ಮನಃಪೂತಂ ಸಮಾಚರೇತ್ ।।</strong></p>.<p>ಇದರ ತಾತ್ಪರ್ಯ ಹೀಗೆ:</p>.<p>‘ಕಣ್ಣಿನಿಂದ ಸರಿಯಾಗಿ ನೋಡಿ ಹೆಜ್ಜೆಯನ್ನು ಇಡಬೇಕು; ಬಟ್ಟೆಯಿಂದ ಶೋಧಿಸಿಯೇ ನೀರನ್ನು ಕುಡಿಯಬೇಕು; ಸತ್ಯದಿಂದ ಶುದ್ಧಿಯಾದ ಮಾತನ್ನೇ ಆಡಬೇಕು; ಮನಸ್ಸಿನಿಂದ ಪವಿತ್ರವಾದ ಕೆಲಸವನ್ನೇ ಮಾಡಬೇಕು.’</p>.<p>ನಾವು ಮಾಡುವ ಪ್ರತಿ ಕೆಲಸವನ್ನು ಎಚ್ಚರಿಕೆಯಿಂದಲೂ ಮಾಡಬೇಕು; ಹಾಗೆ ಮಾಡಿದ ಕೆಲಸ ಶುದ್ಧವಾಗಿಯೂ ಇರಬೇಕು. ಆಗಲೇ ನಮ್ಮ ಜೀವನಾರೋಗ್ಯ ಚೆನ್ನಾಗಿರಬಲ್ಲದು ಎನ್ನುತ್ತಿದೆ ಸುಭಾಷಿತ.</p>.<p>ದಾರಿಯಲ್ಲಿ ನಡೆದ ಮಾತ್ರಕ್ಕೆ ನಾವು ಗುರಿಯನ್ನು ತಲಪುವುದಿಲ್ಲ; ಆ ದಾರಿಯಲ್ಲಿ ಸರಿಯಾಗಿಯೂ ನಡೆಯಬೇಕು, ನಮಗೆ ಅದು ನಿಷ್ಕಂಟಕವಾಗಿರಬೇಕು. ಅದನ್ನೇ ಸುಭಾಷಿತ ಹೇಳುತ್ತಿರುವುದು ಕಣ್ಣಿನಿಂದ ನೋಡುತ್ತ, ಎಂದರೆ ದಾರಿ ಸರಿ ಇದೆಯೆ ಎಂದು ಪರೀಕ್ಷಿಸುತ್ತ ನಡೆಯಬೇಕು.</p>.<p>ನೀರು ನಮ್ಮ ಆರೋಗ್ಯಕ್ಕೆ ತುಂಬ ಮುಖ್ಯವಾದುದು. ಹೀಗಾಗಿ ಶುದ್ಧವಾದ ನೀರನ್ನೇ ಕುಡಿಯಬೇಕು. ಆದುದರಿಂದ ಬಟ್ಟಯಿಂದ ನೀರನ್ನು ಶೋಧಿಸಿ ಕುಡಿಯಬೇಕು. ಅಶುದ್ಧವಾದ ನೀರು ನಮ್ಮ ಅನಾರೋಗ್ಯಕ್ಕೆ ಕಾರಣವಾಗಬಹುದು.</p>.<p>ನಾವು ಮಾತನ್ನೂ ಶುದ್ಧೀಕರಿಸಿಯೇ ಆಡಬೇಕು. ಮಾತನ್ನು ಹೇಗೆ ಶುದ್ಧಮಾಡುವುದು? ಸತ್ಯವಾದ ಮಾತನ್ನೇ ಆಡಿದರೆ ಆಗ ಆ ಮಾತು ಶುದ್ಧವಾಗಿದೆ ಎಂದೇ ಅರ್ಥ.</p>.<p>ನಾವು ಮಾಡುವ ಕೆಲಸಗಳು ಶುದ್ಧವಾಗಿರಬೇಕು. ಪವಿತ್ರವಾದ, ಎಂದರೆ ಒಳ್ಳೆಯ ಕೆಲಸಗಳೇ ಪವಿತ್ರವಾದ ಕೆಲಸಗಳು. ಅಂಥ ಕೆಲಸಗಳನ್ನೇ ನಾವು ಮಾಡಬೇಕು ಎಂದು ಸುಭಾಷಿತ ಹೇಳುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>