<p>ಮಹಾಶಿವರಾತ್ರಿಯನ್ನು ‘ವ್ರತರಾಜ’ ಎಂದೇ ಕರೆಯಲಾಗುತ್ತದೆ.</p>.<p>ಶಿವನನ್ನು ಕುರಿತ ಪರ್ವವೇ ಶಿವರಾತ್ರಿ. ಭಾರತೀಯ ಸಂಸ್ಕೃತಿಯಲ್ಲಿ ಶಿವನಿಗಿರುವ ಸ್ಥಾನ ತುಂಬ ವಿಶಿಷ್ಟವಾದದ್ದು. ತ್ರಿಮೂರ್ತಿಗಳಲ್ಲಿ ಒಬ್ಬನಾಗಿರುವ ಶಿವನನ್ನು ಸತ್ಯ ಶಿವ ಸುಂದರಗಳ ರೂಪದಲ್ಲಿ ನಮ್ಮ ಸಂಸ್ಕೃತಿ ನಿರೂಪಿಸಿದೆ.</p>.<p>ಶಿವನ ರೂಪಗಳೂ ಹಲವು; ನಾಮಗಳೂ ಹಲವು. ‘ಶಿವ’ ಎಂದರೆ ಮಂಗಳಕರ. ಅವನಿಗಿರುವ ಇನ್ನೊಂದು ಪ್ರಮುಖ ಹೆಸರು ‘ರುದ್ರ’; ಎಂದರೆ ಅಳುವನ್ನು ಉಂಟುಮಾಡುವವನು; ಎಂದರೆ ಪ್ರಳಯಕಾರಕ ಎಂದೂ ಅರ್ಥ ಮಾಡಬಹುದು. ಸೃಷ್ಟಿ ಸ್ಥಿತಿ ಸಂಹಾರಗಳು ಅವನ ಲೀಲೆಗಳು. ಈ ಹಿನ್ನೆಲೆಯಲ್ಲಿ ಶಿವತತ್ತ್ವ ಹಲವು ಆಯಾಮಗಳಲ್ಲಿ ತೋರಿಕೊಂಡಿದೆ. ನಟರಾಜನ ಕಲ್ಪನೆ, ಅರ್ಧನಾರೀಶ್ವರತತ್ತ್ವ, ಭಿಕ್ಷಾಟನಮೂರ್ತಿ, ಗಂಗಾವತರಣದ ಸಂದರ್ಭ – ಹೀಗೆ ಹಲವು ವಿವರಗಳು ಶಿವತತ್ತ್ವವನ್ನು ಅನಾವರಣಮಾಡುತ್ತವೆ. ಅವನ ನಿರಾಕರತತ್ತ್ವಕ್ಕೆ ಸಂಕೇತವೇ ಲಿಂಗ.</p>.<p>ಶಿವನ ಡಮರುಗದಿಂದಲೇ ಭಾಷೆ ಹುಟ್ಟಿದ್ದು ಎಂಬುದು ಪರಂಪರೆಯ ನಂಬಿಕೆ. ಆದರ್ಶ ಕುಟುಂಬದ ಮೌಲ್ಯಗಳಿಗೂ ಶಿವನ ಸಂಸಾರ ಆದರ್ಶವಾಗಿದೆ. ಹಲವು ವೈರುದ್ಧ್ಯಗಳ ನಡುವೆಯೂ ಶಿವನ ಕುಟುಂಬ ಸಾಮರಸ್ಯದ ಕುಟುಂಬ ಎನಿಸಿಕೊಂಡಿದೆ. ಈ ಸಾಮರಸ್ಯವನ್ನು ಕುರಿತು ಸಾಹಿತ್ಯಲೋಕದಲ್ಲಿ ಹಲವು ಮನೋಹರವಾದ ಶ್ಲೋಕಗಳು ರಚನೆಯಾಗಿವೆ. ಹೆಂಡತಿಯನ್ನು ಅವನಷ್ಟು ಪ್ರೀತಿಸುವವರು ಇರಲಾರರು; ಅಂಥ ಒಲುಮೆ ಅವನದ್ದು; ತನ್ನ ಅರ್ಧ ಶರೀರವನ್ನೇ ಹೆಂಡತಿಗೆ ನೀಡಿದವನು ಅವನು. ಭಕ್ತರಿಗೆ ಅವನಷ್ಟು ಒಲಿಯುವ ದೇವರೂ ಇನ್ನೊಬ್ಬರಿಲ್ಲ; ಅವನ ಪೂಜೆಗೆ ಬೇಕಾಗಿರುವುದು ಬಿಲ್ವಪತ್ರೆ, ತುಂಬೆಹೂವು, ಭಸ್ಮ ಮತ್ತು ನೀರು – ಭಕ್ತಿಯಿಂದ ಇಷ್ಟನ್ನು ಸಮರ್ಪಿಸಿದರೆ ಸಾಕು ಅವನು ಒಲಿಯುತ್ತಾನೆ.</p>.<p>ದೇವತೆಗಳ ಕಲ್ಪನೆಯಲ್ಲಿಯೇ ವಿಶಿಷ್ಟನಾಗಿರುವ ಶಿವನ ಆರಾಧನೆಗೆ ಮೀಸಲಾದ ದಿನವೇ ಮಹಾಶಿವರಾತ್ರಿ. ಉಪವಾಸ, ಜಾಗರಣೆ, ಬಿಲ್ವಪತ್ರೆ, ಭಸ್ಮ, ರುದ್ರಾಕ್ಷ, ಅಭಿಷೇಕ – ಇವು ಈ ವ್ರತದ ಪ್ರಧಾನ ವಿವರಗಳು. ನಮ್ಮನ್ನು ನಾವು ಎಚ್ಚರವಾಗಿಟ್ಟುಕೊಳ್ಳುವುದೇ ಜಾಗರಣೆಯ ತಾತ್ಪರ್ಯ. ಶಿವ ಅಭಿಷೇಕ ಪ್ರಿಯ; ರಾತ್ರಿಯ ನಾಲ್ಕು ಯಾಮಗಳಲ್ಲಿ ನಮಕ–ಚಮಕವನ್ನು ಪಾರಾಯಣಮಾಡುತ್ತ ಅಭಿಷೇಕ ಮಾಡುವುದು ಕ್ರಮ. ಅವನಷ್ಟು ವೈರಾಗ್ಯಶೀಲ ಇನ್ನೊಬ್ಬನಿಲ್ಲ; ಅವನು ಸ್ಮಶಾನವಾಸಿ. ಹೀಗಾಗಿ ಅವನು ಮೈಗೆಲ್ಲ ಭಸ್ಮವನ್ನು ಬಳಿದುಕೊಂಡಿದ್ದಾನೆ. ಅವನಿಗೆ ಪ್ರಿಯವಾದದ್ದು ಭಸ್ಮ. ಅವನು ತ್ರಿಣೇತ್ರ; ಇದರ ಸಂಕೇತವಾಗಿದೆ ಬಿಲ್ವಪತ್ರೆ. ಭಕ್ತಿಯಿಂದ ಬಿಲ್ವಪತ್ರೆಯ ಒಂದು ದಳವನ್ನು ಸಮರ್ಪಿಸಿ, ‘ಓಂ ನಮಃ ಶಿವಾಯ’ ಎಂಬ ಮಂತ್ರವನ್ನು ಜಪಿಸಿದರೂ ಅವನು ಒಲಿಯುತ್ತಾನೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಹಾಶಿವರಾತ್ರಿಯನ್ನು ‘ವ್ರತರಾಜ’ ಎಂದೇ ಕರೆಯಲಾಗುತ್ತದೆ.</p>.<p>ಶಿವನನ್ನು ಕುರಿತ ಪರ್ವವೇ ಶಿವರಾತ್ರಿ. ಭಾರತೀಯ ಸಂಸ್ಕೃತಿಯಲ್ಲಿ ಶಿವನಿಗಿರುವ ಸ್ಥಾನ ತುಂಬ ವಿಶಿಷ್ಟವಾದದ್ದು. ತ್ರಿಮೂರ್ತಿಗಳಲ್ಲಿ ಒಬ್ಬನಾಗಿರುವ ಶಿವನನ್ನು ಸತ್ಯ ಶಿವ ಸುಂದರಗಳ ರೂಪದಲ್ಲಿ ನಮ್ಮ ಸಂಸ್ಕೃತಿ ನಿರೂಪಿಸಿದೆ.</p>.<p>ಶಿವನ ರೂಪಗಳೂ ಹಲವು; ನಾಮಗಳೂ ಹಲವು. ‘ಶಿವ’ ಎಂದರೆ ಮಂಗಳಕರ. ಅವನಿಗಿರುವ ಇನ್ನೊಂದು ಪ್ರಮುಖ ಹೆಸರು ‘ರುದ್ರ’; ಎಂದರೆ ಅಳುವನ್ನು ಉಂಟುಮಾಡುವವನು; ಎಂದರೆ ಪ್ರಳಯಕಾರಕ ಎಂದೂ ಅರ್ಥ ಮಾಡಬಹುದು. ಸೃಷ್ಟಿ ಸ್ಥಿತಿ ಸಂಹಾರಗಳು ಅವನ ಲೀಲೆಗಳು. ಈ ಹಿನ್ನೆಲೆಯಲ್ಲಿ ಶಿವತತ್ತ್ವ ಹಲವು ಆಯಾಮಗಳಲ್ಲಿ ತೋರಿಕೊಂಡಿದೆ. ನಟರಾಜನ ಕಲ್ಪನೆ, ಅರ್ಧನಾರೀಶ್ವರತತ್ತ್ವ, ಭಿಕ್ಷಾಟನಮೂರ್ತಿ, ಗಂಗಾವತರಣದ ಸಂದರ್ಭ – ಹೀಗೆ ಹಲವು ವಿವರಗಳು ಶಿವತತ್ತ್ವವನ್ನು ಅನಾವರಣಮಾಡುತ್ತವೆ. ಅವನ ನಿರಾಕರತತ್ತ್ವಕ್ಕೆ ಸಂಕೇತವೇ ಲಿಂಗ.</p>.<p>ಶಿವನ ಡಮರುಗದಿಂದಲೇ ಭಾಷೆ ಹುಟ್ಟಿದ್ದು ಎಂಬುದು ಪರಂಪರೆಯ ನಂಬಿಕೆ. ಆದರ್ಶ ಕುಟುಂಬದ ಮೌಲ್ಯಗಳಿಗೂ ಶಿವನ ಸಂಸಾರ ಆದರ್ಶವಾಗಿದೆ. ಹಲವು ವೈರುದ್ಧ್ಯಗಳ ನಡುವೆಯೂ ಶಿವನ ಕುಟುಂಬ ಸಾಮರಸ್ಯದ ಕುಟುಂಬ ಎನಿಸಿಕೊಂಡಿದೆ. ಈ ಸಾಮರಸ್ಯವನ್ನು ಕುರಿತು ಸಾಹಿತ್ಯಲೋಕದಲ್ಲಿ ಹಲವು ಮನೋಹರವಾದ ಶ್ಲೋಕಗಳು ರಚನೆಯಾಗಿವೆ. ಹೆಂಡತಿಯನ್ನು ಅವನಷ್ಟು ಪ್ರೀತಿಸುವವರು ಇರಲಾರರು; ಅಂಥ ಒಲುಮೆ ಅವನದ್ದು; ತನ್ನ ಅರ್ಧ ಶರೀರವನ್ನೇ ಹೆಂಡತಿಗೆ ನೀಡಿದವನು ಅವನು. ಭಕ್ತರಿಗೆ ಅವನಷ್ಟು ಒಲಿಯುವ ದೇವರೂ ಇನ್ನೊಬ್ಬರಿಲ್ಲ; ಅವನ ಪೂಜೆಗೆ ಬೇಕಾಗಿರುವುದು ಬಿಲ್ವಪತ್ರೆ, ತುಂಬೆಹೂವು, ಭಸ್ಮ ಮತ್ತು ನೀರು – ಭಕ್ತಿಯಿಂದ ಇಷ್ಟನ್ನು ಸಮರ್ಪಿಸಿದರೆ ಸಾಕು ಅವನು ಒಲಿಯುತ್ತಾನೆ.</p>.<p>ದೇವತೆಗಳ ಕಲ್ಪನೆಯಲ್ಲಿಯೇ ವಿಶಿಷ್ಟನಾಗಿರುವ ಶಿವನ ಆರಾಧನೆಗೆ ಮೀಸಲಾದ ದಿನವೇ ಮಹಾಶಿವರಾತ್ರಿ. ಉಪವಾಸ, ಜಾಗರಣೆ, ಬಿಲ್ವಪತ್ರೆ, ಭಸ್ಮ, ರುದ್ರಾಕ್ಷ, ಅಭಿಷೇಕ – ಇವು ಈ ವ್ರತದ ಪ್ರಧಾನ ವಿವರಗಳು. ನಮ್ಮನ್ನು ನಾವು ಎಚ್ಚರವಾಗಿಟ್ಟುಕೊಳ್ಳುವುದೇ ಜಾಗರಣೆಯ ತಾತ್ಪರ್ಯ. ಶಿವ ಅಭಿಷೇಕ ಪ್ರಿಯ; ರಾತ್ರಿಯ ನಾಲ್ಕು ಯಾಮಗಳಲ್ಲಿ ನಮಕ–ಚಮಕವನ್ನು ಪಾರಾಯಣಮಾಡುತ್ತ ಅಭಿಷೇಕ ಮಾಡುವುದು ಕ್ರಮ. ಅವನಷ್ಟು ವೈರಾಗ್ಯಶೀಲ ಇನ್ನೊಬ್ಬನಿಲ್ಲ; ಅವನು ಸ್ಮಶಾನವಾಸಿ. ಹೀಗಾಗಿ ಅವನು ಮೈಗೆಲ್ಲ ಭಸ್ಮವನ್ನು ಬಳಿದುಕೊಂಡಿದ್ದಾನೆ. ಅವನಿಗೆ ಪ್ರಿಯವಾದದ್ದು ಭಸ್ಮ. ಅವನು ತ್ರಿಣೇತ್ರ; ಇದರ ಸಂಕೇತವಾಗಿದೆ ಬಿಲ್ವಪತ್ರೆ. ಭಕ್ತಿಯಿಂದ ಬಿಲ್ವಪತ್ರೆಯ ಒಂದು ದಳವನ್ನು ಸಮರ್ಪಿಸಿ, ‘ಓಂ ನಮಃ ಶಿವಾಯ’ ಎಂಬ ಮಂತ್ರವನ್ನು ಜಪಿಸಿದರೂ ಅವನು ಒಲಿಯುತ್ತಾನೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>