<p><strong>ಬೀಳಗಿ:</strong> ‘ಮಣ್ಣು ನಂಬಿದರೆ ಹೊನ್ನು’ ಎನ್ನುವಂತೆ ಮಣ್ಣನ್ನೇ ನಂಬಿ ಬದುಕು ಕಟ್ಟಿಕೋ ಎನ್ನುವ ಸ್ನೇಹಿತ ಯಮನಪ್ಪ ಬನೆಪ್ಪನವರ ಅವರ ಸಲಹೆಯಂತೆ ತಾಲ್ಲೂಕಿನ ಸುನಗ ಗ್ರಾಮದ ಪಧವೀಧರ ರೈತ ಮಲ್ಲಿಕಾರ್ಜುನ ಸಗರಪ್ಪ ಕೋಟಿ ತಮ್ಮ 13 ಎಕರೆ ಜಮೀನಿನಲ್ಲಿ ಕಬ್ಬು , ಉಳ್ಳಾಗಡ್ಡಿ, ಕುಂಬಳ, ಹತ್ತಿ ಮಿಶ್ರ ಕೃಷಿ ಮಾಡಿ ನಿರಂತರ ಆದಾಯ ಕಂಡುಕೊಂಡಿದ್ದಾರೆ.</p>.<p>ಈಚೆಗೆ ಕಲ್ಲಂಗಡಿ ಬೆಳೆ ಹುಲುಸಾಗಿ ಬೆಳೆದು 55 ದಿನಗಳಲ್ಲಿ ಕಟಾವಿಗೆ ಬಂದಿದೆ. ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ ಕಲ್ಲಂಗಡಿ ಸದ್ಯ ₹ 22ರಂತೆ ಮಾರಾಟವಾಗುತ್ತಿದೆ. ಹೀಗಾಗಿ ಇದರಿಂದ ಉತ್ತಮ ಆದಾಯ ಬಂದಿದೆ.</p>.<p>ಮಲ್ಲಿಕಾರ್ಜುನ ಮೊದಲ ಬಾರಿಗೆ ಕಲ್ಲಂಗಡಿ ಬೆಳೆದಿದ್ದಾರೆ. ಸದ್ಯ ಮೆಲೊಡಿ ಕೆಎಸ್ಪಿ 1697 ತಳಿಯ ತಲಾ ಅಗಿಯನ್ನು (ಸಸಿ) ₹ 2.80ರಂತೆ 12,000 ಅಗಿಗಳನ್ನು ಖರೀದಿಸಿ ನಾಟಿ ಮಾಡಿದ್ದರು. ಕಲ್ಲಂಗಡಿ ನಾಟಿ ಮಾಡಿದ್ದ ಎರಡು ಎಕರೆ ಹೊಲಕ್ಕೆ ಸಂಪೂರ್ಣ ಪ್ಲಾಸ್ಟಿಕ್ ಹೊದಿಕೆ (ಮಲ್ಚಿಂಗ್) ಮಾಡಲಾಗಿದೆ. ಹೊಲಕ್ಕೆ ಸಂಪೂರ್ಣ ಹನಿ ನೀರಾವರಿ ಅಳವಡಿಸಿಕೊಂಡಿದ್ದು, ಇದರಿಂದ ನೀರಿನ ಸದ್ಬಳಕೆ, ಕಳೆ ನಿಯಂತ್ರಣ ಸಾಧ್ಯವಾಗಿದೆ.</p>.<p>ಸಸಿಯಿಂದ ಸಸಿಗೆ ನಿಯಮಿತವಾಗಿ 1.5 ಅಡಿ ಅಂತರ ಕಾಯ್ದುಕೊಂಡು ಪ್ಲಾಸ್ಟಿಕ್ ಮೇಲೆ ರಂಧ್ರಗಳನ್ನು ಕೊರೆದು ಅದರಲ್ಲಿ ನಾಟಿ ಮಾಡಲಾಗಿದೆ. ಸಸಿಗಳಿಗೆ ಬೇಕಾಗುವ ಗೊಬ್ಬರವನ್ನು ಆ ರಂಧ್ರಗಳ ಮೂಲಕವೇ ನೀಡಲಾಗಿದೆ . ಅಲಿಮ್ ಮುಜಾವರ ಅವರ ನಿರ್ದೇಶನದ ಮೇರೆಗೆ ಎರೀಸ್ ಅಗ್ರೊ ಲಿಮಿಟೆಡ್ ಗೊಬ್ಬರ ಬಳಸಿದ್ದಾರೆ.</p>.<p>‘ಕಲ್ಲಂಗಡಿ ಬೀಜ, ಭೂಮಿ ಹದ ಮಾಡುವುದು, ಬಿತ್ತನೆ, ರಸಗೊಬ್ಬರ, ಔಷಧ ಸಿಂಪಡಣೆ ಸೇರಿದಂತೆ ಇಲ್ಲಿಯವರಗೆ ₹ 2.20 ಲಕ್ಷದಷ್ಟು ಖರ್ಚಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯೂ ಇದೆ. ಬೆಳೆ ಚೆನ್ನಾಗಿ ಬಂದಿದೆ. ಇದರಿಂದ ಖರ್ಚು, ವೆಚ್ಚ ಹೋಗಿ ₹ 7 ಲಕ್ಷ ಲಾಭ ಬಂದಿದೆ’ ಎಂದು ರೈತ ಮಲ್ಲಿಕಾರ್ಜುನ ‘ಪ್ರಜಾವಾಣಿ’ಗೆ ತಿಳಿಸಿದರು. ಕಲ್ಲಂಗಡಿಗೆ ಉಡುಪಿ, ಮಂಗಳೂರು, ಗೋವಾ, ಬೆಂಗಳೂರುಗಳಲ್ಲಿ ಉತ್ತಮ ಬೆಲೆ ಸಿಗುವುದರಿಂದ ಅಲ್ಲಿಗೆ ಕಳುಹಿಸಿ ಮಾರುತ್ತಿದ್ದೇನೆ ಎಂದು ಅವರು ತಿಳಿಸಿದರು.</p>.<p>‘ನನಗೆ ಹಿರಿಯರಿಂದ 13 ಎಕರೆ ಭೂಮಿ ಬಳುವಳಿಯಾಗಿ ಬಂದಿದೆ. ಎರಡು ಎಕರೆ ಕುಂಬಳ, ಎರಡು ಎಕರೆ ಹತ್ತಿ, ಇನ್ನುಳಿದ ಭೂಮಿಯಲ್ಲಿ ಕಬ್ಬು ಬೆಳೆದಿದ್ದೇನೆ. ಕೃಷಿಯಲ್ಲಿ ಹೊಸ ಬಗೆಯ ಪದ್ಧತಿಗಳನ್ನು ಅಳವಡಿಸಿಕೊಂಡು ನೆಮ್ಮದಿಯ ಜೀವನ ಸಾಗಿಸುತ್ತಿದ್ದೇನೆ’ ಎನ್ನುತ್ತಾರೆ ಮಲ್ಲಿಕಾರ್ಜುನ.</p>.<div><blockquote>ಯುವಕರು ಖಾಸಗಿ ಉದ್ಯೋಗ ಹುಡುಕಿ ಪಟ್ಟಣಕ್ಕೆ ಹೋಗುವುದಕ್ಕಿಂತ ಕೃಷಿ ಚಟುವಟಿಕೆಯಲ್ಲಿ ತೊಡಗಬೇಕು. ಕೃಷಿ ಕ್ಷೇತ್ರ ಲಾಭದಾಯಕ ಮತ್ತು ನೆಮ್ಮದಿ ತರುತ್ತದೆ.</blockquote><span class="attribution">–ಮಲ್ಲಿಕಾರ್ಜುನ ಸಗರಪ್ಪ, ಕೋಟಿ ರೈತ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀಳಗಿ:</strong> ‘ಮಣ್ಣು ನಂಬಿದರೆ ಹೊನ್ನು’ ಎನ್ನುವಂತೆ ಮಣ್ಣನ್ನೇ ನಂಬಿ ಬದುಕು ಕಟ್ಟಿಕೋ ಎನ್ನುವ ಸ್ನೇಹಿತ ಯಮನಪ್ಪ ಬನೆಪ್ಪನವರ ಅವರ ಸಲಹೆಯಂತೆ ತಾಲ್ಲೂಕಿನ ಸುನಗ ಗ್ರಾಮದ ಪಧವೀಧರ ರೈತ ಮಲ್ಲಿಕಾರ್ಜುನ ಸಗರಪ್ಪ ಕೋಟಿ ತಮ್ಮ 13 ಎಕರೆ ಜಮೀನಿನಲ್ಲಿ ಕಬ್ಬು , ಉಳ್ಳಾಗಡ್ಡಿ, ಕುಂಬಳ, ಹತ್ತಿ ಮಿಶ್ರ ಕೃಷಿ ಮಾಡಿ ನಿರಂತರ ಆದಾಯ ಕಂಡುಕೊಂಡಿದ್ದಾರೆ.</p>.<p>ಈಚೆಗೆ ಕಲ್ಲಂಗಡಿ ಬೆಳೆ ಹುಲುಸಾಗಿ ಬೆಳೆದು 55 ದಿನಗಳಲ್ಲಿ ಕಟಾವಿಗೆ ಬಂದಿದೆ. ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ ಕಲ್ಲಂಗಡಿ ಸದ್ಯ ₹ 22ರಂತೆ ಮಾರಾಟವಾಗುತ್ತಿದೆ. ಹೀಗಾಗಿ ಇದರಿಂದ ಉತ್ತಮ ಆದಾಯ ಬಂದಿದೆ.</p>.<p>ಮಲ್ಲಿಕಾರ್ಜುನ ಮೊದಲ ಬಾರಿಗೆ ಕಲ್ಲಂಗಡಿ ಬೆಳೆದಿದ್ದಾರೆ. ಸದ್ಯ ಮೆಲೊಡಿ ಕೆಎಸ್ಪಿ 1697 ತಳಿಯ ತಲಾ ಅಗಿಯನ್ನು (ಸಸಿ) ₹ 2.80ರಂತೆ 12,000 ಅಗಿಗಳನ್ನು ಖರೀದಿಸಿ ನಾಟಿ ಮಾಡಿದ್ದರು. ಕಲ್ಲಂಗಡಿ ನಾಟಿ ಮಾಡಿದ್ದ ಎರಡು ಎಕರೆ ಹೊಲಕ್ಕೆ ಸಂಪೂರ್ಣ ಪ್ಲಾಸ್ಟಿಕ್ ಹೊದಿಕೆ (ಮಲ್ಚಿಂಗ್) ಮಾಡಲಾಗಿದೆ. ಹೊಲಕ್ಕೆ ಸಂಪೂರ್ಣ ಹನಿ ನೀರಾವರಿ ಅಳವಡಿಸಿಕೊಂಡಿದ್ದು, ಇದರಿಂದ ನೀರಿನ ಸದ್ಬಳಕೆ, ಕಳೆ ನಿಯಂತ್ರಣ ಸಾಧ್ಯವಾಗಿದೆ.</p>.<p>ಸಸಿಯಿಂದ ಸಸಿಗೆ ನಿಯಮಿತವಾಗಿ 1.5 ಅಡಿ ಅಂತರ ಕಾಯ್ದುಕೊಂಡು ಪ್ಲಾಸ್ಟಿಕ್ ಮೇಲೆ ರಂಧ್ರಗಳನ್ನು ಕೊರೆದು ಅದರಲ್ಲಿ ನಾಟಿ ಮಾಡಲಾಗಿದೆ. ಸಸಿಗಳಿಗೆ ಬೇಕಾಗುವ ಗೊಬ್ಬರವನ್ನು ಆ ರಂಧ್ರಗಳ ಮೂಲಕವೇ ನೀಡಲಾಗಿದೆ . ಅಲಿಮ್ ಮುಜಾವರ ಅವರ ನಿರ್ದೇಶನದ ಮೇರೆಗೆ ಎರೀಸ್ ಅಗ್ರೊ ಲಿಮಿಟೆಡ್ ಗೊಬ್ಬರ ಬಳಸಿದ್ದಾರೆ.</p>.<p>‘ಕಲ್ಲಂಗಡಿ ಬೀಜ, ಭೂಮಿ ಹದ ಮಾಡುವುದು, ಬಿತ್ತನೆ, ರಸಗೊಬ್ಬರ, ಔಷಧ ಸಿಂಪಡಣೆ ಸೇರಿದಂತೆ ಇಲ್ಲಿಯವರಗೆ ₹ 2.20 ಲಕ್ಷದಷ್ಟು ಖರ್ಚಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯೂ ಇದೆ. ಬೆಳೆ ಚೆನ್ನಾಗಿ ಬಂದಿದೆ. ಇದರಿಂದ ಖರ್ಚು, ವೆಚ್ಚ ಹೋಗಿ ₹ 7 ಲಕ್ಷ ಲಾಭ ಬಂದಿದೆ’ ಎಂದು ರೈತ ಮಲ್ಲಿಕಾರ್ಜುನ ‘ಪ್ರಜಾವಾಣಿ’ಗೆ ತಿಳಿಸಿದರು. ಕಲ್ಲಂಗಡಿಗೆ ಉಡುಪಿ, ಮಂಗಳೂರು, ಗೋವಾ, ಬೆಂಗಳೂರುಗಳಲ್ಲಿ ಉತ್ತಮ ಬೆಲೆ ಸಿಗುವುದರಿಂದ ಅಲ್ಲಿಗೆ ಕಳುಹಿಸಿ ಮಾರುತ್ತಿದ್ದೇನೆ ಎಂದು ಅವರು ತಿಳಿಸಿದರು.</p>.<p>‘ನನಗೆ ಹಿರಿಯರಿಂದ 13 ಎಕರೆ ಭೂಮಿ ಬಳುವಳಿಯಾಗಿ ಬಂದಿದೆ. ಎರಡು ಎಕರೆ ಕುಂಬಳ, ಎರಡು ಎಕರೆ ಹತ್ತಿ, ಇನ್ನುಳಿದ ಭೂಮಿಯಲ್ಲಿ ಕಬ್ಬು ಬೆಳೆದಿದ್ದೇನೆ. ಕೃಷಿಯಲ್ಲಿ ಹೊಸ ಬಗೆಯ ಪದ್ಧತಿಗಳನ್ನು ಅಳವಡಿಸಿಕೊಂಡು ನೆಮ್ಮದಿಯ ಜೀವನ ಸಾಗಿಸುತ್ತಿದ್ದೇನೆ’ ಎನ್ನುತ್ತಾರೆ ಮಲ್ಲಿಕಾರ್ಜುನ.</p>.<div><blockquote>ಯುವಕರು ಖಾಸಗಿ ಉದ್ಯೋಗ ಹುಡುಕಿ ಪಟ್ಟಣಕ್ಕೆ ಹೋಗುವುದಕ್ಕಿಂತ ಕೃಷಿ ಚಟುವಟಿಕೆಯಲ್ಲಿ ತೊಡಗಬೇಕು. ಕೃಷಿ ಕ್ಷೇತ್ರ ಲಾಭದಾಯಕ ಮತ್ತು ನೆಮ್ಮದಿ ತರುತ್ತದೆ.</blockquote><span class="attribution">–ಮಲ್ಲಿಕಾರ್ಜುನ ಸಗರಪ್ಪ, ಕೋಟಿ ರೈತ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>