ಬಾಗಲಕೋಟೆ: ಒಂದೆಡೆ ಮಲಪ್ರಭೆಯ ಒಡಲು ಬಗೆಯುವ ಅಕ್ರಮ ಮರಳುಗಾರಿಕೆ, ಇನ್ನೊಂದೆಡೆ ಚಾಲುಕ್ಯರಿಗೆ ನೆಲೆ ಒದಗಿಸಿದ್ದ ಬೆಟ್ಟ ಸಾಲನ್ನು ಕರಗಿಸುವ ಅಕ್ರಮ ಕಲ್ಲು ಗಣಿಗಾರಿಕೆ ಪರಿಣಾಮ ಬಾದಾಮಿ ತಾಲ್ಲೂಕು ಅಕ್ಷರಶಃ ನಲುಗಿದೆ. ತಾಲ್ಲೂಕಿನ ಅನಂತಗಿರಿ ಸುತ್ತಲಿನ ಅರಣ್ಯ ಇಲಾಖೆ ಭೂಮಿಯಲ್ಲಿ ಅಕ್ರಮವಾಗಿ ಕಲ್ಲು ಒಡೆದು ಸಾಗಿಸಲಾಗುತ್ತಿದೆ. ಬಾದಾಮಿಯ ಬೆಟ್ಟ ಸಾಲಿನ ಮುಂದುವರಿದ ಭಾಗವಾದ ಮರಳುಶಿಲೆ ನಿಧಾನವಾಗಿ ಕರಗುತ್ತಿದೆ.