<p><strong>ಬಾದಾಮಿ:</strong> ಪಟ್ಟಣದಲ್ಲಿರುವ ತಾಲ್ಲೂಕು ಮಟ್ಟದ ಸರ್ಕಾರಿ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ಕತ್ತಲು ಆವರಿಸಿದ್ದರಿಂದ ತಾಲ್ಲೂಕು ಘಟಕದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬೇಲೂರಪ್ಪ ವಡ್ಡರ ಮತ್ತು ಯುವಕರು ಸರ್ಕಾರಿ ಆಸ್ಪತ್ರೆಯ ಅಧಿಕಾರಿಗಳ ವಿರುದ್ಧ ಪ್ರತಿಭಟಿಸಿ ಧರಣಿ ಕೈಗೊಂಡರು.</p>.<p>‘ಸರ್ಕಾರಿ ಆಸ್ಪತ್ರೆಯಲ್ಲಿ ವಿದ್ಯುತ್ ಪೂರೈಕೆ ಇಲ್ಲ. ಸಂಪೂರ್ಣವಾಗಿ ಕತ್ತಲಾಗಿದೆ ಎಂದು ರೋಗಿಯ ಸಂಬಂಧಿಕರೊಬ್ಬರು ಕರೆ ಮಾಡಿದಾಗ ಅಲ್ಲಿಗೆ ತೆರಳಿದಾಗ ಆಸ್ಪತ್ರೆಯಲ್ಲಿ ಬೆಳಕಿಲ್ಲದ್ದು ಕಂಡು ಬಂದಿತು ’ ಎಂದು ಬೇಲೂರಪ್ಪ ಪ್ರತಿಕ್ರಿಯಿಸಿದರು.</p>.<p>‘ಆಸ್ಪತ್ರೆಯಲ್ಲಿ ರಾತ್ರಿ ಕರ್ತವ್ಯದ ವೈದ್ಯರೂ ಸಹ ಇರಲಿಲ್ಲ. ಫೋನ್ ಮಾಡಿ ಕರೆಸಿದಾಗ ವೈದ್ಯರು ಬಂದರು. ಕತ್ತಲಿನಲ್ಲಿ ರೋಗಿಗಳು ಪರದಾಡಬೇಕಾಯಿತು. ಆಸ್ಪತ್ರೆಗೆ ಸೂಕ್ತ ಬೆಳಕಿನ ವ್ಯವಸ್ಥೆ ಮಾಡಬೇಕು ’ ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗೆ ಒತ್ತಾಯಿಸಿದರು.</p>.<p>‘ಎರಡು ದಿನಗಳಿಂದ ಕರೆಂಟ್ ಇರಲಿಲ್ಲ. ಕತ್ತಲಲ್ಲಿಯೇ ಪರದಡಬೇಕಾಯಿತು. ಇಂದು ಬೆಳಿಗ್ಗೆ ಬಂದಿದೆ. ರೋಗಿಗಳಿಗೆ ಬಿಸಿ ನೀರಿನ ವ್ಯವಸ್ಥೆಯ ಇಲ್ಲ. ಬಿಸಿ ನೀರಿಗೆ ಹೊರಗೆ ಹೋಗಬೇಕು ’ ಎಂದು ಆಸ್ಪತ್ರೆಯ ರೋಗಿಗಳು ಶುಕ್ರವಾರ ಹೇಳಿದರು.</p>.<p>‘ನಿನ್ನೆ ರಾತ್ರಿ ಒಂದೇ ದಿನ ವಿದ್ಯುತ್ ಇಲ್ಲ. ದುರಸ್ತಿ ಮಾಡಿಸಲು ಹೇಳಲಾಗಿದೆ. ದುರಸ್ತಿ ಕಾರ್ಯ ನಡೆದಿದೆ. ಇಂದು ಪೂರ್ಣಗೊಳ್ಳುವುದು. ಬಿಸಿ ನೀರಿನ ವ್ಯವಸ್ಥೆ ಮಾಡುವುದಾಗಿ ’ ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯ ವೀರೇಶ ಶೆಟ್ಟರ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾದಾಮಿ:</strong> ಪಟ್ಟಣದಲ್ಲಿರುವ ತಾಲ್ಲೂಕು ಮಟ್ಟದ ಸರ್ಕಾರಿ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ಕತ್ತಲು ಆವರಿಸಿದ್ದರಿಂದ ತಾಲ್ಲೂಕು ಘಟಕದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬೇಲೂರಪ್ಪ ವಡ್ಡರ ಮತ್ತು ಯುವಕರು ಸರ್ಕಾರಿ ಆಸ್ಪತ್ರೆಯ ಅಧಿಕಾರಿಗಳ ವಿರುದ್ಧ ಪ್ರತಿಭಟಿಸಿ ಧರಣಿ ಕೈಗೊಂಡರು.</p>.<p>‘ಸರ್ಕಾರಿ ಆಸ್ಪತ್ರೆಯಲ್ಲಿ ವಿದ್ಯುತ್ ಪೂರೈಕೆ ಇಲ್ಲ. ಸಂಪೂರ್ಣವಾಗಿ ಕತ್ತಲಾಗಿದೆ ಎಂದು ರೋಗಿಯ ಸಂಬಂಧಿಕರೊಬ್ಬರು ಕರೆ ಮಾಡಿದಾಗ ಅಲ್ಲಿಗೆ ತೆರಳಿದಾಗ ಆಸ್ಪತ್ರೆಯಲ್ಲಿ ಬೆಳಕಿಲ್ಲದ್ದು ಕಂಡು ಬಂದಿತು ’ ಎಂದು ಬೇಲೂರಪ್ಪ ಪ್ರತಿಕ್ರಿಯಿಸಿದರು.</p>.<p>‘ಆಸ್ಪತ್ರೆಯಲ್ಲಿ ರಾತ್ರಿ ಕರ್ತವ್ಯದ ವೈದ್ಯರೂ ಸಹ ಇರಲಿಲ್ಲ. ಫೋನ್ ಮಾಡಿ ಕರೆಸಿದಾಗ ವೈದ್ಯರು ಬಂದರು. ಕತ್ತಲಿನಲ್ಲಿ ರೋಗಿಗಳು ಪರದಾಡಬೇಕಾಯಿತು. ಆಸ್ಪತ್ರೆಗೆ ಸೂಕ್ತ ಬೆಳಕಿನ ವ್ಯವಸ್ಥೆ ಮಾಡಬೇಕು ’ ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗೆ ಒತ್ತಾಯಿಸಿದರು.</p>.<p>‘ಎರಡು ದಿನಗಳಿಂದ ಕರೆಂಟ್ ಇರಲಿಲ್ಲ. ಕತ್ತಲಲ್ಲಿಯೇ ಪರದಡಬೇಕಾಯಿತು. ಇಂದು ಬೆಳಿಗ್ಗೆ ಬಂದಿದೆ. ರೋಗಿಗಳಿಗೆ ಬಿಸಿ ನೀರಿನ ವ್ಯವಸ್ಥೆಯ ಇಲ್ಲ. ಬಿಸಿ ನೀರಿಗೆ ಹೊರಗೆ ಹೋಗಬೇಕು ’ ಎಂದು ಆಸ್ಪತ್ರೆಯ ರೋಗಿಗಳು ಶುಕ್ರವಾರ ಹೇಳಿದರು.</p>.<p>‘ನಿನ್ನೆ ರಾತ್ರಿ ಒಂದೇ ದಿನ ವಿದ್ಯುತ್ ಇಲ್ಲ. ದುರಸ್ತಿ ಮಾಡಿಸಲು ಹೇಳಲಾಗಿದೆ. ದುರಸ್ತಿ ಕಾರ್ಯ ನಡೆದಿದೆ. ಇಂದು ಪೂರ್ಣಗೊಳ್ಳುವುದು. ಬಿಸಿ ನೀರಿನ ವ್ಯವಸ್ಥೆ ಮಾಡುವುದಾಗಿ ’ ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯ ವೀರೇಶ ಶೆಟ್ಟರ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>