<p><strong>ಮುಧೋಳ:</strong> ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರ ಏಳಿಗೆ ಸಹಿಸದ ಬಿಜೆಪಿ ಮುಖಂಡರು ಅವರ ವಿರುದ್ಧ ಸುಳ್ಳು ಆರೋಪ ಮಾಡಿ ವಿಧಾನಸಭೆಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ತಾಲ್ಲೂಕಿನ ಕಾಂಗ್ರೆಸ್ ಎಸ್.ಸಿ ಘಟಕದ ಸದಸ್ಯರು ಬುಧವಾರ ಇಲ್ಲಿ ಪ್ರತಿಭಟನೆ ಮಾಡಿದರು.</p>.<p>ಇಲ್ಲಿನ ಬಸವೇಶ್ವರ ಸರ್ಕಲ್ನಲ್ಲಿ ರಾಜ್ಯ ಹೆದ್ದಾರಿ 34 ಅನ್ನು ಕೆಲಕಾಲ ತಡೆದು ಪ್ರತಿಭಟನೆ ಮಾಡಿದ ಅವರು, ಟೈರ್ಗೆ ಬೆಂಕಿ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ನಾಯಕರಾದ ಆರ್.ಅಶೋಕ, ಬಿ.ಎಸ್ ವಿಜಯೇಂದ್ರ ಹಾಗೂ ನಾರಾಯಣಸ್ವಾಮಿ ವಿರುದ್ಧ ಘೋಷಣೆಗಳನ್ನು ಕೂಗಿದರು.</p>.<p>ಮುಖಂಡರಾದ ಪ್ರಕಾಶ ತಳಗೇರಿ, ಮಂಜುನಾಥ ಉಪ್ಪಾರ, ಸ್ವಾತಿ ಭಜಂತ್ರಿ, ಸದಾಶಿವ ಕಣಬೂರ ಮುಂತಾದವರು ಮಾತನಾಡಿ, ತಿಮ್ಮಾಪುರ ಅವರು ಅಬಕಾರಿ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆ ತಂದದಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರ ಏಳಿಗೆ ಸಹಿಸದ ಬಿಜೆಪಿ ಕುತಂತ್ರದಿಂದ ಪ್ರತಿಭಟನೆ ಮಾಡುತ್ತಿದೆ ಎಂದು ಆರೋಪಿಸಿದರು.</p>.<p>ಕಾಂಗ್ರೆಸ್ ಮುಖಂಡರಾದ ರಾಜುಗೌಡ ಪಾಟೀಲ, ಹೋಳಬಸು ತೇಲಿ, ಸದಾಶಿವ ಮೇತ್ರಿ, ಪ್ರಶಾಂತ ಕಾಳೆ, ಕಿರಣ ಹೊಂಗಲ್, ಸಂತೋಷ ಪಾಲೋಜಿ, ಹಾವೀದ್ ಹವಾಲ್ದಾರ, ಶಿವಾನಂದ ಮ್ಯಾಗೇರಿ, ಶೇಖರ ಕಾಂಬಳೆ, ಸಿದ್ರಾಮ ಕುರಿ, ರೇಣುಕಾ ಮಡ್ಡಮನಿ ಭಾಗವಹಿಸಿದ್ದರು.</p>
<p><strong>ಮುಧೋಳ:</strong> ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರ ಏಳಿಗೆ ಸಹಿಸದ ಬಿಜೆಪಿ ಮುಖಂಡರು ಅವರ ವಿರುದ್ಧ ಸುಳ್ಳು ಆರೋಪ ಮಾಡಿ ವಿಧಾನಸಭೆಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ತಾಲ್ಲೂಕಿನ ಕಾಂಗ್ರೆಸ್ ಎಸ್.ಸಿ ಘಟಕದ ಸದಸ್ಯರು ಬುಧವಾರ ಇಲ್ಲಿ ಪ್ರತಿಭಟನೆ ಮಾಡಿದರು.</p>.<p>ಇಲ್ಲಿನ ಬಸವೇಶ್ವರ ಸರ್ಕಲ್ನಲ್ಲಿ ರಾಜ್ಯ ಹೆದ್ದಾರಿ 34 ಅನ್ನು ಕೆಲಕಾಲ ತಡೆದು ಪ್ರತಿಭಟನೆ ಮಾಡಿದ ಅವರು, ಟೈರ್ಗೆ ಬೆಂಕಿ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ನಾಯಕರಾದ ಆರ್.ಅಶೋಕ, ಬಿ.ಎಸ್ ವಿಜಯೇಂದ್ರ ಹಾಗೂ ನಾರಾಯಣಸ್ವಾಮಿ ವಿರುದ್ಧ ಘೋಷಣೆಗಳನ್ನು ಕೂಗಿದರು.</p>.<p>ಮುಖಂಡರಾದ ಪ್ರಕಾಶ ತಳಗೇರಿ, ಮಂಜುನಾಥ ಉಪ್ಪಾರ, ಸ್ವಾತಿ ಭಜಂತ್ರಿ, ಸದಾಶಿವ ಕಣಬೂರ ಮುಂತಾದವರು ಮಾತನಾಡಿ, ತಿಮ್ಮಾಪುರ ಅವರು ಅಬಕಾರಿ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆ ತಂದದಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರ ಏಳಿಗೆ ಸಹಿಸದ ಬಿಜೆಪಿ ಕುತಂತ್ರದಿಂದ ಪ್ರತಿಭಟನೆ ಮಾಡುತ್ತಿದೆ ಎಂದು ಆರೋಪಿಸಿದರು.</p>.<p>ಕಾಂಗ್ರೆಸ್ ಮುಖಂಡರಾದ ರಾಜುಗೌಡ ಪಾಟೀಲ, ಹೋಳಬಸು ತೇಲಿ, ಸದಾಶಿವ ಮೇತ್ರಿ, ಪ್ರಶಾಂತ ಕಾಳೆ, ಕಿರಣ ಹೊಂಗಲ್, ಸಂತೋಷ ಪಾಲೋಜಿ, ಹಾವೀದ್ ಹವಾಲ್ದಾರ, ಶಿವಾನಂದ ಮ್ಯಾಗೇರಿ, ಶೇಖರ ಕಾಂಬಳೆ, ಸಿದ್ರಾಮ ಕುರಿ, ರೇಣುಕಾ ಮಡ್ಡಮನಿ ಭಾಗವಹಿಸಿದ್ದರು.</p>