<p><strong>ಜಮಖಂಡಿ:</strong> ‘ಡಿಜಿಟಲ್ ವಂಚನೆ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಅವಶ್ಯಕತೆ ಇದೆ. ಸಾಕಷ್ಟು ಮುನ್ನೆಚ್ಚರಿಕೆ ನೀಡುತ್ತಿದ್ದರೂ ವಂಚನೆ ಮುಂದುವರಿದಿದೆ. ಸಂಘ–ಸಂಸ್ಥೆಗಳೂ ನಮ್ಮೊಂದಿಗೆ ಕೈಜೋಡಿಸಬೇಕು’ ಎಂದು ಡಿವೈಎಸ್ಪಿ ಎಸ್. ರೋಷನ ಜಮೀರ ಹೇಳಿದರು.</p>.<p>ಇಲ್ಲಿನ ಬಸವ ಭವನದಲ್ಲಿ ಕ್ರೆಡಿಟ್ ಆಕ್ಸೆಸ್ ಗ್ರಾಮೀಣ ಲಿಮಿಟೆಡ್ ವತಿಯಿಂದ ಸಾಮಾಜಿಕ ಆರ್ಥಿಕ ಅಭಿವೃದ್ಧಿ ಕಾರ್ಯಾಗಾರದ ಅಂಗವಾಗಿ ಶನಿವಾರ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು,</p>.<p>‘ಬ್ಯಾಂಕ್ ಖಾತೆ ಕೆವೈಸಿ ಅಪ್ಡೇಟ್, ಒಟಿಪಿ, ಮೊಬೈಲ್ಫೋನ್ನಲ್ಲಿ ಲಿಂಕ್, ಅನಾಮಿಕ ಕರೆಗಳು, ಬ್ಯಾಂಕ್ ಸಿಬ್ಬಂದಿ ಹೆಸರು ಹೇಳಿ ವಂಚನೆ ಮಾಡಲಾಗುತ್ತಿದೆ. ಇಂತಹ ಕರೆ ಬಂದಾಗ ಗಾಬರಿಯಾಗಬಾರದು. ಬ್ಯಾಂಕಿಗೆ ಖುದ್ದಾಗಿ ಹೋಗಿ ವಿಚಾರಿಸಬೇಕು’ ಎಂದರು.</p>.<p>ಆರ್ಥಿಕ ನೆರವು, ಆರ್ಥಿಕ ಸಾಕ್ಷರತೆ ಬಗ್ಗೆ ಮಾತನಾಡಿದ ರಾಮಕೃಷ್ಣ, ‘ಹೂಡಿಕೆ ವಿಚಾರವಾಗಿ ತಜ್ಞರಿಂದ ಸಲಹೆ–ಸೂಚನೆ ಪಡೆಯಿತಿ. ಒಮ್ಮೆಲೆ ಶ್ರೀಮಂತರಾಗುವ ಕಡೆ ಹೂಡಿಕೆ ಮಾಡಿ ಮೋಸ ಹೋಗಬಾರದು. ಸಾಲ ಮಾಡಿ ಹೂಡಿಕೆ ಮಾಡಬಾರದು’ ಎಂದು ಹೇಳಿದರು.</p>.<p>ಕೆನರಾ ಬ್ಯಾಕಿನ ವಿಠ್ಠಲ ಗುರವ ಮಾತನಾಡಿ, ‘ಯಾವುದೇ ಸಾಲ ಸಿಗಬೇಕಾದರೆ ಸಿವಿಲ್ ಸ್ಕೋರ್ ಪರೀಕ್ಷೆ ಮಾಡಲಾಗುತ್ತದೆ. ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡಬೇಕು. ಸರಿಯಾದ ವ್ಯವಹಾರ ಮಾಡಿದರೆ ತಮ್ಮ ಜೀವನ ಚೆನ್ನಾಗಿರುತ್ತದೆ’ ಎಂದರು.</p>.<p>ಪ್ರವೀಣಕುಮಾರ, ಓಬಳಸ್ವಾಮಿ, ದೇವಪ್ಪ ಮೊಗಲೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಮಖಂಡಿ:</strong> ‘ಡಿಜಿಟಲ್ ವಂಚನೆ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಅವಶ್ಯಕತೆ ಇದೆ. ಸಾಕಷ್ಟು ಮುನ್ನೆಚ್ಚರಿಕೆ ನೀಡುತ್ತಿದ್ದರೂ ವಂಚನೆ ಮುಂದುವರಿದಿದೆ. ಸಂಘ–ಸಂಸ್ಥೆಗಳೂ ನಮ್ಮೊಂದಿಗೆ ಕೈಜೋಡಿಸಬೇಕು’ ಎಂದು ಡಿವೈಎಸ್ಪಿ ಎಸ್. ರೋಷನ ಜಮೀರ ಹೇಳಿದರು.</p>.<p>ಇಲ್ಲಿನ ಬಸವ ಭವನದಲ್ಲಿ ಕ್ರೆಡಿಟ್ ಆಕ್ಸೆಸ್ ಗ್ರಾಮೀಣ ಲಿಮಿಟೆಡ್ ವತಿಯಿಂದ ಸಾಮಾಜಿಕ ಆರ್ಥಿಕ ಅಭಿವೃದ್ಧಿ ಕಾರ್ಯಾಗಾರದ ಅಂಗವಾಗಿ ಶನಿವಾರ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು,</p>.<p>‘ಬ್ಯಾಂಕ್ ಖಾತೆ ಕೆವೈಸಿ ಅಪ್ಡೇಟ್, ಒಟಿಪಿ, ಮೊಬೈಲ್ಫೋನ್ನಲ್ಲಿ ಲಿಂಕ್, ಅನಾಮಿಕ ಕರೆಗಳು, ಬ್ಯಾಂಕ್ ಸಿಬ್ಬಂದಿ ಹೆಸರು ಹೇಳಿ ವಂಚನೆ ಮಾಡಲಾಗುತ್ತಿದೆ. ಇಂತಹ ಕರೆ ಬಂದಾಗ ಗಾಬರಿಯಾಗಬಾರದು. ಬ್ಯಾಂಕಿಗೆ ಖುದ್ದಾಗಿ ಹೋಗಿ ವಿಚಾರಿಸಬೇಕು’ ಎಂದರು.</p>.<p>ಆರ್ಥಿಕ ನೆರವು, ಆರ್ಥಿಕ ಸಾಕ್ಷರತೆ ಬಗ್ಗೆ ಮಾತನಾಡಿದ ರಾಮಕೃಷ್ಣ, ‘ಹೂಡಿಕೆ ವಿಚಾರವಾಗಿ ತಜ್ಞರಿಂದ ಸಲಹೆ–ಸೂಚನೆ ಪಡೆಯಿತಿ. ಒಮ್ಮೆಲೆ ಶ್ರೀಮಂತರಾಗುವ ಕಡೆ ಹೂಡಿಕೆ ಮಾಡಿ ಮೋಸ ಹೋಗಬಾರದು. ಸಾಲ ಮಾಡಿ ಹೂಡಿಕೆ ಮಾಡಬಾರದು’ ಎಂದು ಹೇಳಿದರು.</p>.<p>ಕೆನರಾ ಬ್ಯಾಕಿನ ವಿಠ್ಠಲ ಗುರವ ಮಾತನಾಡಿ, ‘ಯಾವುದೇ ಸಾಲ ಸಿಗಬೇಕಾದರೆ ಸಿವಿಲ್ ಸ್ಕೋರ್ ಪರೀಕ್ಷೆ ಮಾಡಲಾಗುತ್ತದೆ. ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡಬೇಕು. ಸರಿಯಾದ ವ್ಯವಹಾರ ಮಾಡಿದರೆ ತಮ್ಮ ಜೀವನ ಚೆನ್ನಾಗಿರುತ್ತದೆ’ ಎಂದರು.</p>.<p>ಪ್ರವೀಣಕುಮಾರ, ಓಬಳಸ್ವಾಮಿ, ದೇವಪ್ಪ ಮೊಗಲೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>