<p><strong>ಬಾದಾಮಿ:</strong> ‘ನಿತ್ಯ ಜೀವನದಲ್ಲಿ ಅಗ್ನಿಯಿಂದಾಗುವ ಅಪಾಯಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಮುನ್ನೆಚ್ಚರಿಕೆ ಕುರಿತು ತಿಳಿವಳಿಕೆ ಪಡೆಯುವುದು ಅವಶ್ಯಕ’ ಎಂದು ಅಗ್ನಿ ಶಾಮಕ ದಳದ ರಾಜು ಲಮಾಣಿ ವಿದ್ಯಾರ್ಥಿಗಳಿಗೆ ವಿವರಣೆ ನೀಡಿದರು.</p>.<p>ಇಲ್ಲಿನ ಎಸ್.ಬಿ. ಮಮದಾಪುರ ಪದವಿ ಕಾಲೇಜಿನ ಎನ್.ಎಸ್.ಎಸ್. ಘಟಕದಿಂದ ಅಗ್ನಿಶಾಮಕದಳ ಆಶ್ರಯದಲ್ಲಿ ಗುರುವಾರ ಅಗ್ನಿ ಅವಘಡದ ಬಗ್ಗೆ ನಡೆದ ಪ್ರಾತ್ಯಕ್ಷಿಕೆ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ಅಗ್ನಿಯಲ್ಲಿ ಎ.ಬಿ.ಸಿ.ಡಿ ಎಂದು ನಾಲ್ಕು ಪ್ರಕಾರಗಳಿವೆ. ಇವುಗಳಿಂದ ಅನಾಹುತ ತಪ್ಪಿಸಲು ವಿವಿಧ ರೀತಿಯ ಜ್ಞಾನದ ಕೌಶಲ ಅವಶ್ಯವಾಗಿದೆ’ ಎಂದು ಅಗ್ನಿಶಾಮಕ ಠಾಣಾಧಿಕಾರಿ ಬಿ.ಪಿ. ಮರಡಿ ಹೇಳಿದರು.</p>.<p>ಪ್ರಾಚಾರ್ಯ ಎ.ಎ. ತೋಪಲಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅಗ್ನಿಶಾಮಕ ಸಿಬ್ಬಂದಿ ಪ್ರವೀಣ ಮಾಡಲಗೇರಿ, ಬಿ.ಟಿ. ಕೋನೇರಿ, ಎಲ್.ಎ. ಓಗೆನ್ನವರ, ಬಸವರಾಜ ಹಗರಗುಂಡಿ, ಶ್ರೀಧರ ದೊಡಮನಿ, ಎಸ್.ಆರ್. ಮಗಿ ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡಿದ್ದರು.</p>
<p><strong>ಬಾದಾಮಿ:</strong> ‘ನಿತ್ಯ ಜೀವನದಲ್ಲಿ ಅಗ್ನಿಯಿಂದಾಗುವ ಅಪಾಯಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಮುನ್ನೆಚ್ಚರಿಕೆ ಕುರಿತು ತಿಳಿವಳಿಕೆ ಪಡೆಯುವುದು ಅವಶ್ಯಕ’ ಎಂದು ಅಗ್ನಿ ಶಾಮಕ ದಳದ ರಾಜು ಲಮಾಣಿ ವಿದ್ಯಾರ್ಥಿಗಳಿಗೆ ವಿವರಣೆ ನೀಡಿದರು.</p>.<p>ಇಲ್ಲಿನ ಎಸ್.ಬಿ. ಮಮದಾಪುರ ಪದವಿ ಕಾಲೇಜಿನ ಎನ್.ಎಸ್.ಎಸ್. ಘಟಕದಿಂದ ಅಗ್ನಿಶಾಮಕದಳ ಆಶ್ರಯದಲ್ಲಿ ಗುರುವಾರ ಅಗ್ನಿ ಅವಘಡದ ಬಗ್ಗೆ ನಡೆದ ಪ್ರಾತ್ಯಕ್ಷಿಕೆ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ಅಗ್ನಿಯಲ್ಲಿ ಎ.ಬಿ.ಸಿ.ಡಿ ಎಂದು ನಾಲ್ಕು ಪ್ರಕಾರಗಳಿವೆ. ಇವುಗಳಿಂದ ಅನಾಹುತ ತಪ್ಪಿಸಲು ವಿವಿಧ ರೀತಿಯ ಜ್ಞಾನದ ಕೌಶಲ ಅವಶ್ಯವಾಗಿದೆ’ ಎಂದು ಅಗ್ನಿಶಾಮಕ ಠಾಣಾಧಿಕಾರಿ ಬಿ.ಪಿ. ಮರಡಿ ಹೇಳಿದರು.</p>.<p>ಪ್ರಾಚಾರ್ಯ ಎ.ಎ. ತೋಪಲಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅಗ್ನಿಶಾಮಕ ಸಿಬ್ಬಂದಿ ಪ್ರವೀಣ ಮಾಡಲಗೇರಿ, ಬಿ.ಟಿ. ಕೋನೇರಿ, ಎಲ್.ಎ. ಓಗೆನ್ನವರ, ಬಸವರಾಜ ಹಗರಗುಂಡಿ, ಶ್ರೀಧರ ದೊಡಮನಿ, ಎಸ್.ಆರ್. ಮಗಿ ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡಿದ್ದರು.</p>