ಬಾಗಲಕೋಟೆ: ಭಾನುವಾರದ ಲಾಕ್ಡೌನ್ಗೆಬಾಗಲಕೋಟೆ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಿಷೇದಾಜ್ಞೆ ಇರಲಿದೆ. ಯಾರೂ ಮನೆಯಿಂದ ಹೊರ ಬರಬೇಡಿ ಎಂದು ಜಿಲ್ಲಾಡಳಿತ ಗ್ರಾಮೀಣ ಪ್ರದೇಶಗಳಲ್ಲಿ ಡಂಗುರ ಸಾರಿಸಿತ್ತು. ನಗರಗಳಲ್ಲಿ ಧ್ವನಿವರ್ಧಕ ಹೊತ್ತ ಆಟೊಗಳಲ್ಲಿ ಪ್ರಚಾರ ನಡೆಸಿತ್ತು. ಅದೀಗ ಫಲ ನೀಡಿದೆ.
ಭಾನುವಾರದ ಬಂದ್ ಕಾರಣ ಅಗತ್ಯ ವಸ್ತುಗಳನ್ನು ಶನಿವಾರವೇ ಜನರು ಮುಗಿಬಿದ್ದು ಖರೀದಿಸಿದ್ದರು. ಹೀಗಾಗಿ ಮರುದಿನ ರಸ್ತೆಗೆ ಬರುವ ಪ್ರಮೇಯ ಬಂದಿಲ್ಲ.
ಹಾಲು, ಮೆಡಿಕಲ್ ಶಾಪ್, ಆಸ್ಪತ್ರೆ ಹಾಗೂ ಮಾಂಸದಂಗಡಿ ತೆರೆಯಲು ಮಾತ್ರ ಅವಕಾಶ ನೀಡಲಾಗಿದೆ. ಮದ್ಯ ಮಾರಾಟ ಬಂದ್ ಆಗಿದೆ. ಸಮೂಹ ಸಾರಿಗೆ ಮಾತ್ರವಲ್ಲ ಖಾಸಗಿ ವಾಹನಗಳು ರಸ್ತೆಗೆ ಇಳಿಯಲು ಅವಕಾಶ ನೀಡಿಲ್ಲ. ಹೀಗಾಗಿ ಬಾಗಲಕೋಟೆಯ ಪ್ರಮುಖ ರಸ್ತೆಗಳು ನಿರ್ಜನಗೊಂಡಿವೆ. ಇಡೀ ನಗರ ಬಿಕೊ ಎನ್ನುತ್ತಿದೆ.