<p><strong>ಹುನಗುಂದ</strong>: ವಿವಿಧತೆಯಲ್ಲಿ ಏಕತೆ ಹೊಂದಿದ ದೇಶ ನಮ್ಮದು. ಎಲ್ಲ ಧರ್ಮೀಯರು ಹಬ್ಬಗಳನ್ನು ಆಚರಿಸುತ್ತಾರೆ. ಹಬ್ಬಗಳು ಪರಸ್ಪರರಲ್ಲಿ ವಿಶ್ವಾಸ, ಆತ್ಮಿಯತೆ, ಸಂಬಂಧವನ್ನು ಗಟ್ಟಿಗೊಳಿಸುತ್ತವೆ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.</p>.<p>ದೀಪಾವಳಿ ಅಂಗವಾಗಿ ಸೋಮವಾರ ಬಿಜೆಪಿ ಯುವ ಮುಖಂಡ ಬಸವರಾಜ ಹೊಸೂರ ಪಟ್ಟಣದ ವಾರ್ಡ್ ನಂ. 19ರಲ್ಲಿ ಸಾರ್ವಜನಿಕರಿಗೆ ಸಿಹಿ ಹಂಚುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.</p>.<p>ಜೀವನದಲ್ಲಿ ಆಗಿರುವ ಕಹಿ ಘಟನೆಗಳನ್ನು ಮರೆತು ಹೊಸ ಹೊಸ ಆಲೋಚನೆ, ಚೈತನ್ಯದೊಂದಿಗೆ ಮುನ್ನಡೆಯುವುದೇ ದೀಪಾವಳಿ ಹಬ್ಬದ ಉದ್ದೇಶ. ಮುಖಂಡ ಬಸವರಾಜ ಹೊಸೂರ ಮಾಡುತ್ತಿರುವ ಸಮಾಜಮುಖಿ ಕಾರ್ಯ ಶ್ಲಾಘನೀಯ ಎಂದರು.</p>.<p>ಮುಖಂಡರಾದ ರಾಜಕುಮಾರ ಬಾದವಾಡಗಿ, ರಾಜು ನಾಡಗೌಡ, ಮಹೇಶ ಬೆಳ್ಳಿಹಾಳ ಮತನಾಡಿದರು. ಬಸವರಾಜ ಹೊಸೂರ, ಅಶೋಕ ಬಂಡರಗಲ್ಲ, ಅಜ್ಜಪ್ಪ ನಾಡಗೌಡ, ಸಂಗಣ್ಣ ಚಿನಿವಾಲರ, ಅಪ್ಪು ಆಲೂರ, ವಿರೇಶ ಬಂಡಿ, ಸಂಗಣ್ಣ ಹೊಸೂರ, ಮಲ್ಲು ಚೂರಿ ಇದ್ದರು.</p>
<p><strong>ಹುನಗುಂದ</strong>: ವಿವಿಧತೆಯಲ್ಲಿ ಏಕತೆ ಹೊಂದಿದ ದೇಶ ನಮ್ಮದು. ಎಲ್ಲ ಧರ್ಮೀಯರು ಹಬ್ಬಗಳನ್ನು ಆಚರಿಸುತ್ತಾರೆ. ಹಬ್ಬಗಳು ಪರಸ್ಪರರಲ್ಲಿ ವಿಶ್ವಾಸ, ಆತ್ಮಿಯತೆ, ಸಂಬಂಧವನ್ನು ಗಟ್ಟಿಗೊಳಿಸುತ್ತವೆ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.</p>.<p>ದೀಪಾವಳಿ ಅಂಗವಾಗಿ ಸೋಮವಾರ ಬಿಜೆಪಿ ಯುವ ಮುಖಂಡ ಬಸವರಾಜ ಹೊಸೂರ ಪಟ್ಟಣದ ವಾರ್ಡ್ ನಂ. 19ರಲ್ಲಿ ಸಾರ್ವಜನಿಕರಿಗೆ ಸಿಹಿ ಹಂಚುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.</p>.<p>ಜೀವನದಲ್ಲಿ ಆಗಿರುವ ಕಹಿ ಘಟನೆಗಳನ್ನು ಮರೆತು ಹೊಸ ಹೊಸ ಆಲೋಚನೆ, ಚೈತನ್ಯದೊಂದಿಗೆ ಮುನ್ನಡೆಯುವುದೇ ದೀಪಾವಳಿ ಹಬ್ಬದ ಉದ್ದೇಶ. ಮುಖಂಡ ಬಸವರಾಜ ಹೊಸೂರ ಮಾಡುತ್ತಿರುವ ಸಮಾಜಮುಖಿ ಕಾರ್ಯ ಶ್ಲಾಘನೀಯ ಎಂದರು.</p>.<p>ಮುಖಂಡರಾದ ರಾಜಕುಮಾರ ಬಾದವಾಡಗಿ, ರಾಜು ನಾಡಗೌಡ, ಮಹೇಶ ಬೆಳ್ಳಿಹಾಳ ಮತನಾಡಿದರು. ಬಸವರಾಜ ಹೊಸೂರ, ಅಶೋಕ ಬಂಡರಗಲ್ಲ, ಅಜ್ಜಪ್ಪ ನಾಡಗೌಡ, ಸಂಗಣ್ಣ ಚಿನಿವಾಲರ, ಅಪ್ಪು ಆಲೂರ, ವಿರೇಶ ಬಂಡಿ, ಸಂಗಣ್ಣ ಹೊಸೂರ, ಮಲ್ಲು ಚೂರಿ ಇದ್ದರು.</p>