<p>ಜಮಖಂಡಿ: ‘ವಿಶ್ವಕ್ಕೆ ಮಾರಕವಾಗಿರುವ ಮಧುಮೇಹ ತಡೆಗೆ ಜಾಗೃತಿ ಅವಶ್ಯವಾಗಿದೆ’ ಎಂದು ಡಾ.ಎಚ್.ಜಿ. ದಡ್ಡಿ ಹೇಳಿದರು.</p>.<p>ಇಲ್ಲಿನ ಬಸವ ಭವನದಲ್ಲಿ ಜಮಖಂಡಿ ಲಯನ್ಸ್ ಸಂಸ್ಥೆಯಿಂದ ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ಜಾಗೃತಿ ಜಾಥಾದಲ್ಲಿ ಅವರು ಮಾತನಾಡಿದರು.</p>.<p>‘ಮನುಷ್ಯನ ಜೀವನಶೈಲಿಯ ಬದಲಾವಣೆ, ಆಹಾರದ ಬದಲಾವಣೆ, ಸೋಮಾರಿತನ, ದೈಹಿಕ ಚಟುವಟಿಕೆಗಳ ಕೊರತೆ, ಅತಿಯಾದ ಒತ್ತಡ, ಹೆಚ್ಚು ಕಾರ್ಬೋಹೈಡ್ರೇಟ್ ಸೇವನೆಯಿಂದ ಮಧುಮೇಹ ವ್ಯಾಪಿಸುತ್ತಿದೆ’ ಎಂದರು.</p>.<p>‘ಚಿಕ್ಕಮಕ್ಕಳಿಗೂ ಮಧುಮೇಹ ಬಾಧಿಸುತ್ತಿರುವುದು ವಿಪರ್ಯಾಸ. ಮಧುಮೇಹದಿಂದ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ ಮಾನವನ ಆಯಸ್ಸು ಕ್ಷೀಣಿಸುತ್ತದೆ’ ಎಂದರು.</p>.<p>‘ಭಾರತವನ್ನು ಮಧುಮೇಹದ ರಾಜಧಾನಿ ಎಂದು ಕರೆಯಲಾಗುತ್ತದೆ. 10 ಕೋಟಿಗೂ ಹೆಚ್ಚು ಮಧುಮೇಹಗಳು, 10 ಕೋಟಿ ಪ್ರಿ ಡಯಾಬೆಟಿಕ್ಗಳು ನಮ್ಮಲ್ಲಿದ್ದಾರೆ. ಮಧುಮೇಹ ತಡೆಗೆ ಮನೆಯಲ್ಲಿ ತಯಾರಿಸಿದ ಶುದ್ಧ ಆಹಾರ ಸೇವನೆ, ನಿಯಮಿತ ವ್ಯಾಯಾಮ ಅವಶ್ಯಕ’ ಎಂದು ತಿಳಿಸಿದರು.</p>.<p>ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಜಾಥಾಕ್ಕೆ ಚಾಲನೆ ನೀಡಿದರು. ನಗರದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಯಿತು. ಐಎಂಎ, ಬಿಎಲ್ಡಿಯ ನರ್ಸಿಂಗ್ ವಿದ್ಯಾರ್ಥಿಗಳು, ಬಾಗಲಕೋಟೆ ವಿ.ವಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. </p>.<p>ಲಯನ್ಸ್ ಅಧ್ಯಕ್ಷ ಚಿನ್ಮಯ ಜಿರಲಿ, ಕಾರ್ಯದರ್ಶಿ ಮೈಗೂರ ಪ್ರವೀಣ, ಸುನೀಲ ಮುರಗೋಡ, ಡಾ.ವಿ.ಎಸ್.ಬಿರಾದಾರ, ಡಾ.ವಿಜಯಲಕ್ಷ್ಮೀ ತುಂಗಳ, ಡಾ.ದೇವರಡ್ಡಿ, ಪ್ರಭು ಜನವಾಡ, ವಕೀಲ ಸಂಗಮೇಶ, ಉಪನ್ಯಾಸಕ ರಾಜಶೇಖರ ಹೊಸಟ್ಟಿ, ಉತ್ತಮ, ಡಾ.ತಿಪ್ಪೇಸ್ವಾಮಿ, ಬಸವಲಿಂಗ ಬೃಂಗಿಮಠ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಜಮಖಂಡಿ: ‘ವಿಶ್ವಕ್ಕೆ ಮಾರಕವಾಗಿರುವ ಮಧುಮೇಹ ತಡೆಗೆ ಜಾಗೃತಿ ಅವಶ್ಯವಾಗಿದೆ’ ಎಂದು ಡಾ.ಎಚ್.ಜಿ. ದಡ್ಡಿ ಹೇಳಿದರು.</p>.<p>ಇಲ್ಲಿನ ಬಸವ ಭವನದಲ್ಲಿ ಜಮಖಂಡಿ ಲಯನ್ಸ್ ಸಂಸ್ಥೆಯಿಂದ ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ಜಾಗೃತಿ ಜಾಥಾದಲ್ಲಿ ಅವರು ಮಾತನಾಡಿದರು.</p>.<p>‘ಮನುಷ್ಯನ ಜೀವನಶೈಲಿಯ ಬದಲಾವಣೆ, ಆಹಾರದ ಬದಲಾವಣೆ, ಸೋಮಾರಿತನ, ದೈಹಿಕ ಚಟುವಟಿಕೆಗಳ ಕೊರತೆ, ಅತಿಯಾದ ಒತ್ತಡ, ಹೆಚ್ಚು ಕಾರ್ಬೋಹೈಡ್ರೇಟ್ ಸೇವನೆಯಿಂದ ಮಧುಮೇಹ ವ್ಯಾಪಿಸುತ್ತಿದೆ’ ಎಂದರು.</p>.<p>‘ಚಿಕ್ಕಮಕ್ಕಳಿಗೂ ಮಧುಮೇಹ ಬಾಧಿಸುತ್ತಿರುವುದು ವಿಪರ್ಯಾಸ. ಮಧುಮೇಹದಿಂದ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ ಮಾನವನ ಆಯಸ್ಸು ಕ್ಷೀಣಿಸುತ್ತದೆ’ ಎಂದರು.</p>.<p>‘ಭಾರತವನ್ನು ಮಧುಮೇಹದ ರಾಜಧಾನಿ ಎಂದು ಕರೆಯಲಾಗುತ್ತದೆ. 10 ಕೋಟಿಗೂ ಹೆಚ್ಚು ಮಧುಮೇಹಗಳು, 10 ಕೋಟಿ ಪ್ರಿ ಡಯಾಬೆಟಿಕ್ಗಳು ನಮ್ಮಲ್ಲಿದ್ದಾರೆ. ಮಧುಮೇಹ ತಡೆಗೆ ಮನೆಯಲ್ಲಿ ತಯಾರಿಸಿದ ಶುದ್ಧ ಆಹಾರ ಸೇವನೆ, ನಿಯಮಿತ ವ್ಯಾಯಾಮ ಅವಶ್ಯಕ’ ಎಂದು ತಿಳಿಸಿದರು.</p>.<p>ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಜಾಥಾಕ್ಕೆ ಚಾಲನೆ ನೀಡಿದರು. ನಗರದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಯಿತು. ಐಎಂಎ, ಬಿಎಲ್ಡಿಯ ನರ್ಸಿಂಗ್ ವಿದ್ಯಾರ್ಥಿಗಳು, ಬಾಗಲಕೋಟೆ ವಿ.ವಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. </p>.<p>ಲಯನ್ಸ್ ಅಧ್ಯಕ್ಷ ಚಿನ್ಮಯ ಜಿರಲಿ, ಕಾರ್ಯದರ್ಶಿ ಮೈಗೂರ ಪ್ರವೀಣ, ಸುನೀಲ ಮುರಗೋಡ, ಡಾ.ವಿ.ಎಸ್.ಬಿರಾದಾರ, ಡಾ.ವಿಜಯಲಕ್ಷ್ಮೀ ತುಂಗಳ, ಡಾ.ದೇವರಡ್ಡಿ, ಪ್ರಭು ಜನವಾಡ, ವಕೀಲ ಸಂಗಮೇಶ, ಉಪನ್ಯಾಸಕ ರಾಜಶೇಖರ ಹೊಸಟ್ಟಿ, ಉತ್ತಮ, ಡಾ.ತಿಪ್ಪೇಸ್ವಾಮಿ, ಬಸವಲಿಂಗ ಬೃಂಗಿಮಠ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>