<p><strong>ಮಹಾಲಿಂಗಪುರ (ಬಾಗಲಕೋಟೆ):</strong> ಚಿಮ್ಮಡ ಗ್ರಾಮದ ಪಿಕೆಪಿಎಸ್ ಆವರಣದಲ್ಲಿ ಶನಿವಾರ ನಡೆದ ಬೆಳಗಾವಿ ವಿಭಾಗಮಟ್ಟದ ಪ್ರಾಥಮಿಕ, ಪ್ರೌಢಶಾಲೆಗಳ ಕಬಡ್ಡಿ ಪಂದ್ಯಾವಳಿಯಲ್ಲಿ ಬಾಲಕರ 14ರ ವಯೋಮಿತಿ ಒಳಗಿನ ವಿಭಾಗದಲ್ಲಿ ಬಾಗಲಕೋಟೆ ಹಾಗೂ 17ರ ವಯೋಮಿತಿ ಒಳಗಿನ ವಿಭಾಗದಲ್ಲಿ ಶಿರಸಿ ತಂಡಗಳು ಗೆಲವು ಸಾಧಿಸಿದವು.</p>.<p>14ರ ವಯೋಮಿತಿ ಒಳಗಿನ ಬಾಲಕರ ವಿಭಾಗದ ಅಂತಿಮ ಪಂದ್ಯದಲ್ಲಿ ಕಾರವಾರ ತಂಡವನ್ನು 12-38ರಿಂದ ಬಾಗಲಕೋಟೆ ತಂಡ ಸೋಲಿಸಿತು.</p>.<p>ಗೋಲ್ಡನ್ ರೇಡ್ ಮೂಲಕ ಲೀಗ್ ಹಂತದಲ್ಲಿ ಶುಭಾರಂಭ ಮಾಡಿದ್ದ ಕಾರವಾರ ತಂಡದ ಆಟಗಾರರು ಸೋತರು. ಇದಕ್ಕೂ ಮುನ್ನ ನಡೆದ ಸಮಿಫೈನಲ್ನಲ್ಲಿ ಬಾಗಲಕೋಟೆ ತಂಡ 44-25 ರಿಂದ ಗದಗ ತಂಡವನ್ನು ಹಾಗೂ ಕಾರವಾರ ತಂಡ 51-47 ರಿಂದ ಚಿಕ್ಕೋಡಿ ತಂಡವನ್ನು ಸೋಲಿಸಿ ಫೈನಲ್ ತಲುಪಿದ್ದವು.</p>.<p>17ರ ವಯೋಮಿತಿ ಒಳಗಿನ ಬಾಲಕರ ವಿಭಾಗದ ಅಂತಿಮ ಪಂದ್ಯದಲ್ಲಿ ಧಾರವಾಡ ತಂಡವನ್ನು 30-32 ರಿಂದ ಶಿರಸಿ ತಂಡ ಸೋಲಿಸಿತು. ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಹಲವಾರು ತಿರುವು ಪಡೆದು ಧಾರವಾಡ ತಂಡ ವಿರೋಚಿತ ಸೋಲನ್ನು ಅನುಭವಿಸಿತು.</p>.<p>ಇದಕ್ಕೂ ಮುನ್ನ ನಡೆದ ಸಮಿಫೈನಲ್ನಲ್ಲಿ ಧಾರವಾಡ ತಂಡ 48-47ರಿಂದ ಕಾರವಾರ ತಂಡವನ್ನು ಹಾಗೂ ಶಿರಸಿ ತಂಡ 42-27 ರಿಂದ ಗದಗ ತಂಡವನ್ನು ಸೋಲಿಸಿ ಫೈನಲ್ ತಲುಪಿದ್ದವು.<br /> ಸಮಾರೋಪ ಸಮಾರಂಭ: ಶನಿವಾರ ತಡರಾತ್ರಿ ನಡೆದ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಶಾಸಕ ಸಿದ್ದು ಸವದಿ, ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಅವರು ವಿಜೇತ ತಂಡಗಳಿಗೆ ಟ್ರೋಫಿ ವಿತರಿಸಿದರು. ಮುತ್ತು ಢವಳೇಶ್ವರ, ರಾಜು ಬಗನಾಳ, ಶಂಕರ ಬಟಕುರ್ಕಿ, ಬಿಇಒ ಎ.ಕೆ.ಬಸಣ್ಣನವರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಹಾಲಿಂಗಪುರ (ಬಾಗಲಕೋಟೆ):</strong> ಚಿಮ್ಮಡ ಗ್ರಾಮದ ಪಿಕೆಪಿಎಸ್ ಆವರಣದಲ್ಲಿ ಶನಿವಾರ ನಡೆದ ಬೆಳಗಾವಿ ವಿಭಾಗಮಟ್ಟದ ಪ್ರಾಥಮಿಕ, ಪ್ರೌಢಶಾಲೆಗಳ ಕಬಡ್ಡಿ ಪಂದ್ಯಾವಳಿಯಲ್ಲಿ ಬಾಲಕರ 14ರ ವಯೋಮಿತಿ ಒಳಗಿನ ವಿಭಾಗದಲ್ಲಿ ಬಾಗಲಕೋಟೆ ಹಾಗೂ 17ರ ವಯೋಮಿತಿ ಒಳಗಿನ ವಿಭಾಗದಲ್ಲಿ ಶಿರಸಿ ತಂಡಗಳು ಗೆಲವು ಸಾಧಿಸಿದವು.</p>.<p>14ರ ವಯೋಮಿತಿ ಒಳಗಿನ ಬಾಲಕರ ವಿಭಾಗದ ಅಂತಿಮ ಪಂದ್ಯದಲ್ಲಿ ಕಾರವಾರ ತಂಡವನ್ನು 12-38ರಿಂದ ಬಾಗಲಕೋಟೆ ತಂಡ ಸೋಲಿಸಿತು.</p>.<p>ಗೋಲ್ಡನ್ ರೇಡ್ ಮೂಲಕ ಲೀಗ್ ಹಂತದಲ್ಲಿ ಶುಭಾರಂಭ ಮಾಡಿದ್ದ ಕಾರವಾರ ತಂಡದ ಆಟಗಾರರು ಸೋತರು. ಇದಕ್ಕೂ ಮುನ್ನ ನಡೆದ ಸಮಿಫೈನಲ್ನಲ್ಲಿ ಬಾಗಲಕೋಟೆ ತಂಡ 44-25 ರಿಂದ ಗದಗ ತಂಡವನ್ನು ಹಾಗೂ ಕಾರವಾರ ತಂಡ 51-47 ರಿಂದ ಚಿಕ್ಕೋಡಿ ತಂಡವನ್ನು ಸೋಲಿಸಿ ಫೈನಲ್ ತಲುಪಿದ್ದವು.</p>.<p>17ರ ವಯೋಮಿತಿ ಒಳಗಿನ ಬಾಲಕರ ವಿಭಾಗದ ಅಂತಿಮ ಪಂದ್ಯದಲ್ಲಿ ಧಾರವಾಡ ತಂಡವನ್ನು 30-32 ರಿಂದ ಶಿರಸಿ ತಂಡ ಸೋಲಿಸಿತು. ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಹಲವಾರು ತಿರುವು ಪಡೆದು ಧಾರವಾಡ ತಂಡ ವಿರೋಚಿತ ಸೋಲನ್ನು ಅನುಭವಿಸಿತು.</p>.<p>ಇದಕ್ಕೂ ಮುನ್ನ ನಡೆದ ಸಮಿಫೈನಲ್ನಲ್ಲಿ ಧಾರವಾಡ ತಂಡ 48-47ರಿಂದ ಕಾರವಾರ ತಂಡವನ್ನು ಹಾಗೂ ಶಿರಸಿ ತಂಡ 42-27 ರಿಂದ ಗದಗ ತಂಡವನ್ನು ಸೋಲಿಸಿ ಫೈನಲ್ ತಲುಪಿದ್ದವು.<br /> ಸಮಾರೋಪ ಸಮಾರಂಭ: ಶನಿವಾರ ತಡರಾತ್ರಿ ನಡೆದ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಶಾಸಕ ಸಿದ್ದು ಸವದಿ, ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಅವರು ವಿಜೇತ ತಂಡಗಳಿಗೆ ಟ್ರೋಫಿ ವಿತರಿಸಿದರು. ಮುತ್ತು ಢವಳೇಶ್ವರ, ರಾಜು ಬಗನಾಳ, ಶಂಕರ ಬಟಕುರ್ಕಿ, ಬಿಇಒ ಎ.ಕೆ.ಬಸಣ್ಣನವರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>