<p><strong>ವರದಿ: ಎಚ್.ಎಸ್. ಘಂಟಿ</strong></p>.<p><strong>ಗುಳೇದಗುಡ್ಡ</strong>: ತಾಲ್ಲೂಕಿನ ಕೊಟ್ನಳ್ಳಿ ಗ್ರಾಮ ಗುಳೇದಗುಡ್ಡ ಪಟ್ಟಣದಿಂದ 7 ಕಿ.ಮೀ ಅಂತರದಲ್ಲಿದ್ದು, ಮೂಲಸೌಕರ್ಯಕ್ಕಾಗಿ ಕಾಯುತ್ತಿದೆ.</p>.<p>ಮಲಪ್ರಭಾ ನದಿಗೆ ಹೊಂದಿಕೊಂಡಿರುವ ಈ ಗ್ರಾಮ ಅತಿವೃಷ್ಟಿಯಿಂದ ತತ್ತರಿಸಿದ್ದು, ಸ್ಥಳಾಂತರಿಸಲು ಸರ್ಕಾರ ನಿರ್ಧರಿಸಿ 5 ವರ್ಷಗಳ ಹಿಂದೆಯೇ ಅರ್ಧ ಕಿ.ಮೀ ಅಂತರದಲ್ಲಿ ಜಾಗ ಗುರುತಿಸಿ 250 ಮನೆಗಳಿದ್ದ ಗ್ರಾಮದಲ್ಲಿ 75 ಮನೆಗಳನ್ನು ಮಾತ್ರ ಸ್ಥಳಾಂತರಿಸಿದೆ. ಇನ್ನುಳಿದ ಮನೆಗಳನ್ನು ಇದುವರೆಗೂ ಸ್ಥಳಾಂತರಿಸಿಲ್ಲ. ಆ ಎಲ್ಲ ಮನೆಗಳನ್ನು ಕೂಡಲೇ ಸ್ಥಳಾಂತರಿಸಬೇಕೆಂದು ಅಲ್ಲಿಯ ಜನ ಆಗ್ರಹಿಸುತ್ತಿದ್ದಾರೆ.</p>.<p>ಸ್ಥಳಾಂತರವಾದ ಗ್ರಾಮದಲ್ಲಿ ಮೂಲ ಸೌಲಭ್ಯಗಳಿಲ್ಲದೇ ಪರದಾಡುವಂತಾಗಿದೆ. ಗ್ರಾಮದಲ್ಲಿ 250 ಕ್ಕೂ ಹೆಚ್ಚು ಮನೆಗಳಿದ್ದು 1600 ಜನಸಂಖ್ಯೆಇದೆ. ಸಮೀಪದ ಲಾಯದಗುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಈ ಗ್ರಾಮ ಬರುತ್ತಿದ್ದು, ಒಟ್ಟು ಮೂವರು ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಆದರೂ ಗ್ರಾಮದಲ್ಲಿ ಯಾವುದೇ ಮಹತ್ವದ ಕೆಲಸಗಳಾಗಿಲ್ಲ. ಚರಂಡಿ ವ್ಯವಸ್ಥೆ, ಕುಡಿಯುವ ನೀರು, ರಸ್ತೆ, ಶೌಚಾಲಯ ಸಮಸ್ಯೆಗಳು ಗ್ರಾಮದಲ್ಲಿವೆ.</p>.<div><blockquote>ಗ್ರಾಮದಲ್ಲಿ ಸಮಸ್ಯೆಗಳು ಇವೆ. ಅಭಿವೃದ್ಧಿಗಾಗಿ ಗ್ರಾಮ ಪಂಚಾಯಿತಿಯಿಂದ ಚರಂಡಿ ನಿರ್ಮಾಣ ರಸ್ತೆ ಮುಂತಾದ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ.</blockquote><span class="attribution">ಪದ್ಮಾವತಿ, ಪಿಡಿಒ, ಗ್ರಾಮ ಪಂಚಾಯಿತಿ ಲಾಯದಗುಂದಿ</span></div>.<p>ಪುನರ್ವಸತಿ ಗ್ರಾಮದಲ್ಲಿ ಸೈಟುಗಳ ಅತಿಕ್ರಮಣ: ಪುನರ್ವಸತಿ ಗ್ರಾಮದಲ್ಲಿ 75 ಮನೆಗಳು ನಿರ್ಮಾಣವಾಗಿದ್ದು ಇನ್ನೂ ಸರ್ಕಾರಿ ಸೈಟುಗಳ ಖಾಲಿ ಇರುವುದರಿಂದ ಕೆಲವರು ತಗಡಿನ ಶೆಡ್ಡುಗಳನ್ನು ಹಾಕುವ ಮೂಲಕ ಸೈಟುಗಳನ್ನು ಅತಿಕ್ರಮಣ ಮಾಡುತ್ತಿದ್ದಾರೆ. ಪಂಚಾಯತಿ, ತಾಲ್ಲೂಕು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮದ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>ಬಯಲು ಬಹಿರ್ದೆಸೆ ಇನ್ನೂ ಜೀವಂತ: ಇದುವರೆಗೂ ಗ್ರಾಮ ಪಂಚಾಯತಿಯಿಂದ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿಲ್ಲ. ಶೌಚಾಲಯದ ವ್ಯವಸ್ಥೆಗಾಗಿ ಗ್ರಾಮ ಪಂಚಾಯತಿಯಿಂದ ಅನುದಾನ ಪಡೆದು ಕೆಲವರು ಕಟ್ಟಿಕೊಂಡರೂ ಬಳಸಲು ಸಾಧ್ಯವಾಗದಂತೆ ಕಟ್ಟಿಕೊಂಡಿದ್ದಾರೆ. ಬಯಲು ಬಹಿರ್ದೆಸೆ ಇಂದಿಗೂ ಇದೆ.</p>.<div><blockquote>ಗ್ರಾಮದ ಸಂಪೂರ್ಣ ಸ್ಥಳಾಂತರವಾಗಬೇಕು. ಸಾರ್ವಜನಿಕ ಶೌಚಾಲಯ ಉತ್ತಮ ಸಿಸಿ ರಸ್ತೆ ಪರಿಸರ ಅಭಿವೃದ್ಧಿ ಶಾಲೆಗೆ ಸೌಲಭ್ಯಗಳನ್ನು ಒದಗಿಸಬೇಕಿದೆ.</blockquote><span class="attribution">ಆಸಂಗೆಪ್ಪ ಚಲವಾದಿ, ಗ್ರಾಮ ಪಂಚಾಯತಿ ಸದಸ್ಯರು, ಕೊಟ್ನಳ್ಳಿ</span></div>.<p>ಸ್ಮಶಾನ ಇಲ್ಲದೇ ಇರುವುದರಿಂದ ಅಂತ್ಯ ಸಂಸ್ಕಾರವನ್ನು ಗ್ರಾಮಸ್ಥರು ತಮ್ಮ ಹೊಲಗಳ ಬದುವಿನಲ್ಲಿ ಮಾಡುತ್ತಾರೆ. ಗ್ರಾಮದಲ್ಲಿ ಮಾರುತೇಶ್ವರ, ದ್ಯಾಮವ್ವ, ಗುಡಿಗಳಿವೆ. 3 ವರ್ಷಕ್ಕೊಮ್ಮೆ 5 ಕೀ.ಮೀ. ಅಂತರದಲ್ಲಿರುವ ಗ್ರಾಮದೇವತೆ ದ್ಯಾಮವ್ವನ ಜಾತ್ರೆ ಮಾಡುತ್ತಾರೆ. ಆದರೆ ಅಲ್ಲಿಗೆ ಹೋಗಲು ಉತ್ತಮ ರಸ್ತೆ ಇಲ್ಲ.</p>.<p><strong>ಸೌಲಭ್ಯಗಳಿಲ್ಲದ ಸರ್ಕಾರಿ ಶಾಲೆ </strong></p><p>ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೂಲ ಸೌಲಭ್ಯಗಳಿಲ್ಲದೇ ಪರದಾಡುವಂತಾಗಿದೆ. ಇಲ್ಲಿಯ ಮಕ್ಕಳು ಮೂತ್ರ ವಿಸರ್ಜನೆಗೆ ಬಯಲನ್ನೇ ಆಶ್ರಯಿಸಿದ್ದಾರೆ. ಶಾಲೆ ಇದ್ದು. ನಿಯಮಾನುಸಾರ ಕಟ್ಟಡಗಳಿಲ್ಲ ಗುಡ್ಡದ ಹತ್ತಿರ 2 ಕೊಠಡಿ ಕಟ್ಟಿದ್ದಾರೆ ಅಲ್ಲಿ ತರಗತಿಗಳು ನಡೆಯುತ್ತಿಲ್ಲ. ಆಟದ ಮೈದಾನವಿಲ್ಲ. ವಿದ್ಯಾರ್ಥಿಗಳಿಗೆ ಶೌಚಾಲಯಗಳಿಲ್ಲ.</p>.<p><strong>ವೈದ್ಯರ ಕೊರತೆ</strong></p><p>ಲಾಯದಗುಂದಿ ಗ್ರಾಮದಲ್ಲಿ ಉಪ ಆರೋಗ್ಯ ಕೇಂದ್ರ ಇದ್ದು ಅಲ್ಲಿ ವೈದ್ಯರ ಕೊರತೆಯಿದ್ದುದರಿಂದ ಕೋಟ್ನಳ್ಳಿ ಗ್ರಾಮಕ್ಕೆ ಬರುವುದು ದುಸ್ತರವಾಗಿದೆ. ಉಪ ಆರೋಗ್ಯ ಕೇಂದ್ರ ಸ್ಥಾಪನೆ ಆಗದಿರುವ ಕಾರಣಕ್ಕೆ ಜನರಿಗೆ ಅನಾರೋಗ್ಯವಾದರೆ ಗುಳೇದಗುಡ್ಡ ಪಟ್ಟಣವನ್ನೇ ಅವಲಂಬಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವರದಿ: ಎಚ್.ಎಸ್. ಘಂಟಿ</strong></p>.<p><strong>ಗುಳೇದಗುಡ್ಡ</strong>: ತಾಲ್ಲೂಕಿನ ಕೊಟ್ನಳ್ಳಿ ಗ್ರಾಮ ಗುಳೇದಗುಡ್ಡ ಪಟ್ಟಣದಿಂದ 7 ಕಿ.ಮೀ ಅಂತರದಲ್ಲಿದ್ದು, ಮೂಲಸೌಕರ್ಯಕ್ಕಾಗಿ ಕಾಯುತ್ತಿದೆ.</p>.<p>ಮಲಪ್ರಭಾ ನದಿಗೆ ಹೊಂದಿಕೊಂಡಿರುವ ಈ ಗ್ರಾಮ ಅತಿವೃಷ್ಟಿಯಿಂದ ತತ್ತರಿಸಿದ್ದು, ಸ್ಥಳಾಂತರಿಸಲು ಸರ್ಕಾರ ನಿರ್ಧರಿಸಿ 5 ವರ್ಷಗಳ ಹಿಂದೆಯೇ ಅರ್ಧ ಕಿ.ಮೀ ಅಂತರದಲ್ಲಿ ಜಾಗ ಗುರುತಿಸಿ 250 ಮನೆಗಳಿದ್ದ ಗ್ರಾಮದಲ್ಲಿ 75 ಮನೆಗಳನ್ನು ಮಾತ್ರ ಸ್ಥಳಾಂತರಿಸಿದೆ. ಇನ್ನುಳಿದ ಮನೆಗಳನ್ನು ಇದುವರೆಗೂ ಸ್ಥಳಾಂತರಿಸಿಲ್ಲ. ಆ ಎಲ್ಲ ಮನೆಗಳನ್ನು ಕೂಡಲೇ ಸ್ಥಳಾಂತರಿಸಬೇಕೆಂದು ಅಲ್ಲಿಯ ಜನ ಆಗ್ರಹಿಸುತ್ತಿದ್ದಾರೆ.</p>.<p>ಸ್ಥಳಾಂತರವಾದ ಗ್ರಾಮದಲ್ಲಿ ಮೂಲ ಸೌಲಭ್ಯಗಳಿಲ್ಲದೇ ಪರದಾಡುವಂತಾಗಿದೆ. ಗ್ರಾಮದಲ್ಲಿ 250 ಕ್ಕೂ ಹೆಚ್ಚು ಮನೆಗಳಿದ್ದು 1600 ಜನಸಂಖ್ಯೆಇದೆ. ಸಮೀಪದ ಲಾಯದಗುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಈ ಗ್ರಾಮ ಬರುತ್ತಿದ್ದು, ಒಟ್ಟು ಮೂವರು ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಆದರೂ ಗ್ರಾಮದಲ್ಲಿ ಯಾವುದೇ ಮಹತ್ವದ ಕೆಲಸಗಳಾಗಿಲ್ಲ. ಚರಂಡಿ ವ್ಯವಸ್ಥೆ, ಕುಡಿಯುವ ನೀರು, ರಸ್ತೆ, ಶೌಚಾಲಯ ಸಮಸ್ಯೆಗಳು ಗ್ರಾಮದಲ್ಲಿವೆ.</p>.<div><blockquote>ಗ್ರಾಮದಲ್ಲಿ ಸಮಸ್ಯೆಗಳು ಇವೆ. ಅಭಿವೃದ್ಧಿಗಾಗಿ ಗ್ರಾಮ ಪಂಚಾಯಿತಿಯಿಂದ ಚರಂಡಿ ನಿರ್ಮಾಣ ರಸ್ತೆ ಮುಂತಾದ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ.</blockquote><span class="attribution">ಪದ್ಮಾವತಿ, ಪಿಡಿಒ, ಗ್ರಾಮ ಪಂಚಾಯಿತಿ ಲಾಯದಗುಂದಿ</span></div>.<p>ಪುನರ್ವಸತಿ ಗ್ರಾಮದಲ್ಲಿ ಸೈಟುಗಳ ಅತಿಕ್ರಮಣ: ಪುನರ್ವಸತಿ ಗ್ರಾಮದಲ್ಲಿ 75 ಮನೆಗಳು ನಿರ್ಮಾಣವಾಗಿದ್ದು ಇನ್ನೂ ಸರ್ಕಾರಿ ಸೈಟುಗಳ ಖಾಲಿ ಇರುವುದರಿಂದ ಕೆಲವರು ತಗಡಿನ ಶೆಡ್ಡುಗಳನ್ನು ಹಾಕುವ ಮೂಲಕ ಸೈಟುಗಳನ್ನು ಅತಿಕ್ರಮಣ ಮಾಡುತ್ತಿದ್ದಾರೆ. ಪಂಚಾಯತಿ, ತಾಲ್ಲೂಕು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮದ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>ಬಯಲು ಬಹಿರ್ದೆಸೆ ಇನ್ನೂ ಜೀವಂತ: ಇದುವರೆಗೂ ಗ್ರಾಮ ಪಂಚಾಯತಿಯಿಂದ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿಲ್ಲ. ಶೌಚಾಲಯದ ವ್ಯವಸ್ಥೆಗಾಗಿ ಗ್ರಾಮ ಪಂಚಾಯತಿಯಿಂದ ಅನುದಾನ ಪಡೆದು ಕೆಲವರು ಕಟ್ಟಿಕೊಂಡರೂ ಬಳಸಲು ಸಾಧ್ಯವಾಗದಂತೆ ಕಟ್ಟಿಕೊಂಡಿದ್ದಾರೆ. ಬಯಲು ಬಹಿರ್ದೆಸೆ ಇಂದಿಗೂ ಇದೆ.</p>.<div><blockquote>ಗ್ರಾಮದ ಸಂಪೂರ್ಣ ಸ್ಥಳಾಂತರವಾಗಬೇಕು. ಸಾರ್ವಜನಿಕ ಶೌಚಾಲಯ ಉತ್ತಮ ಸಿಸಿ ರಸ್ತೆ ಪರಿಸರ ಅಭಿವೃದ್ಧಿ ಶಾಲೆಗೆ ಸೌಲಭ್ಯಗಳನ್ನು ಒದಗಿಸಬೇಕಿದೆ.</blockquote><span class="attribution">ಆಸಂಗೆಪ್ಪ ಚಲವಾದಿ, ಗ್ರಾಮ ಪಂಚಾಯತಿ ಸದಸ್ಯರು, ಕೊಟ್ನಳ್ಳಿ</span></div>.<p>ಸ್ಮಶಾನ ಇಲ್ಲದೇ ಇರುವುದರಿಂದ ಅಂತ್ಯ ಸಂಸ್ಕಾರವನ್ನು ಗ್ರಾಮಸ್ಥರು ತಮ್ಮ ಹೊಲಗಳ ಬದುವಿನಲ್ಲಿ ಮಾಡುತ್ತಾರೆ. ಗ್ರಾಮದಲ್ಲಿ ಮಾರುತೇಶ್ವರ, ದ್ಯಾಮವ್ವ, ಗುಡಿಗಳಿವೆ. 3 ವರ್ಷಕ್ಕೊಮ್ಮೆ 5 ಕೀ.ಮೀ. ಅಂತರದಲ್ಲಿರುವ ಗ್ರಾಮದೇವತೆ ದ್ಯಾಮವ್ವನ ಜಾತ್ರೆ ಮಾಡುತ್ತಾರೆ. ಆದರೆ ಅಲ್ಲಿಗೆ ಹೋಗಲು ಉತ್ತಮ ರಸ್ತೆ ಇಲ್ಲ.</p>.<p><strong>ಸೌಲಭ್ಯಗಳಿಲ್ಲದ ಸರ್ಕಾರಿ ಶಾಲೆ </strong></p><p>ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೂಲ ಸೌಲಭ್ಯಗಳಿಲ್ಲದೇ ಪರದಾಡುವಂತಾಗಿದೆ. ಇಲ್ಲಿಯ ಮಕ್ಕಳು ಮೂತ್ರ ವಿಸರ್ಜನೆಗೆ ಬಯಲನ್ನೇ ಆಶ್ರಯಿಸಿದ್ದಾರೆ. ಶಾಲೆ ಇದ್ದು. ನಿಯಮಾನುಸಾರ ಕಟ್ಟಡಗಳಿಲ್ಲ ಗುಡ್ಡದ ಹತ್ತಿರ 2 ಕೊಠಡಿ ಕಟ್ಟಿದ್ದಾರೆ ಅಲ್ಲಿ ತರಗತಿಗಳು ನಡೆಯುತ್ತಿಲ್ಲ. ಆಟದ ಮೈದಾನವಿಲ್ಲ. ವಿದ್ಯಾರ್ಥಿಗಳಿಗೆ ಶೌಚಾಲಯಗಳಿಲ್ಲ.</p>.<p><strong>ವೈದ್ಯರ ಕೊರತೆ</strong></p><p>ಲಾಯದಗುಂದಿ ಗ್ರಾಮದಲ್ಲಿ ಉಪ ಆರೋಗ್ಯ ಕೇಂದ್ರ ಇದ್ದು ಅಲ್ಲಿ ವೈದ್ಯರ ಕೊರತೆಯಿದ್ದುದರಿಂದ ಕೋಟ್ನಳ್ಳಿ ಗ್ರಾಮಕ್ಕೆ ಬರುವುದು ದುಸ್ತರವಾಗಿದೆ. ಉಪ ಆರೋಗ್ಯ ಕೇಂದ್ರ ಸ್ಥಾಪನೆ ಆಗದಿರುವ ಕಾರಣಕ್ಕೆ ಜನರಿಗೆ ಅನಾರೋಗ್ಯವಾದರೆ ಗುಳೇದಗುಡ್ಡ ಪಟ್ಟಣವನ್ನೇ ಅವಲಂಬಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>