ಚರ್ಮಗಂಟು ರೋಗ ಸಾಂಕ್ರಾಮಿಕವಾಗಿ ಹರಡುವುದರಿಂದ ಜಿಲ್ಲೆಯಲ್ಲಿನ ಎಲ್ಲ ಜಾನುವಾರುಗಳ ಸಂತೆ ಜಾತ್ರೆ ಸಾಗಾಣಿಕೆಯನ್ನು ನಿಷೇಧಿಸಲಾಗಿದೆ ಎಂದು ಡಾ.ಶಿವಾನಂದ ಕರಡಿಗುಡ್ಡ ತಿಳಿಸಿದರು. ಅಮೀನಗಡ ಕೆರೂರು ಬೇಲೂರು ಜಮಖಂಡಿ ಜಾಲಿಹಾಳ ಬೀಳಗಿ ಸೇರಿ ಹಲವೆಡೆ ಜಾನುವಾರು ಸಂತೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತವೆ. ಮುಂದಿನ ಆದೇಶದವರೆಗೆ ಸಂತೆ ಮಾಡದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಬಗ್ಗೆ ರೈತರಲ್ಲಿಯೂ ಜಾಗೃತಿ ಮೂಡಿಸಲಾಗುತ್ತದೆ ಎಂದರು.