<p><strong>ಬಾಗಲಕೋಟೆ:</strong> ಬೇಸಿಗೆಯಲ್ಲಿ ಮಾವಿನ ಹಣ್ಣಿನ ಮಾರುಕಟ್ಟೆ ಜೋರಾಗಿರುತ್ತದೆ. ಆದರೆ, ಈ ವರ್ಷ ಮಾವಿನ ಹಣ್ಣಿನ ಪ್ರಮಾಣ ಕಡಿಮೆ ಇರುವುದರಿಂದ ಹಣ್ಣುಗಳ ಭರಾಟೆ ಕಡಿಮೆಯಾಗಿದೆ.</p>.<p>ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಇಲ್ಲದಿರುವುದರಿಂದ ಹಣ್ಣುಗಳ ಬೆಲೆ ಹೆಚ್ಚಿದೆ. ಪರಿಣಾಮ ಮಾರಾಟ ಪ್ರಮಾಣದಲ್ಲಿ ಕುಸಿತವಾಗಿ ವ್ಯಾಪಾರಸ್ಥರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇತ್ತ ಗ್ರಾಹಕರಿಗೂ ಬೆಲೆ ಏರಿಕೆ ಬಿಸಿ ತಾಗಿದೆ.</p>.<p>ಯುಗಾದಿ ಆಸು–ಪಾಸಿನಲ್ಲಿ ಆರಂಭವಾಗುವ ಮಾವಿನ ಹಣ್ಣಿನ ಸೀಸನ್, ಬಸವ ಜಯಂತಿ ವೇಳೆ ಉತ್ತುಂಗವನ್ನು ಮುಟ್ಟಿರುತ್ತಿತ್ತು. ಹೋಳಿಗೆ, ಶೀಕರಣೆ ಮಾಡುವುದರಿಂದ ಮಾರಾಟವೂ ಜೋರಾಗಿರುತ್ತದೆ. </p>.<p>ಮಹಾರಾಷ್ಟ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ಮಾವಿನ ಹಣ್ಣು ಮಾರುಕಟ್ಟೆಗೆ ಬರುತ್ತದೆ. ಈ ವರ್ಷ ಸೈಕ್ಲೋನ್ ಪರಿಣಾಮದಿಂದಾಗಿ ಅಲ್ಲಿ ಮಾವಿನ ಇಳುವರಿ ಕಡಿಮೆ ಆಗಿದೆ. ಮಾರುಕಟ್ಟೆಗೆ ನಿರೀಕ್ಷಿತ ಪ್ರಮಾಣದಲ್ಲಿ ಮಾವು ಬರುತ್ತಿಲ್ಲ. ಸ್ಥಳೀಯ ಮಾವಿನ ಹಣ್ಣನ್ನೇ ಮಾರಾಟಗಾರರು ನೆಚ್ಚಿಕೊಳ್ಳಬೇಕಾಗಿದೆ.</p>.<p>ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ಸಲ ಮಾವಿನ ಹಣ್ಣು ಮಹಾರಾಷ್ಟ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿಲ್ಲ. ಬೆಲೆ ಹೆಚ್ಚಾಗಿರುವುದರಿಂದ ಖರೀದಿದಾರರ ಸಂಖ್ಯೆ ಕಡಿಮೆಯಾಗಿದೆ ಎಂದು ಮಾವಿನ ಹಣ್ಣಿನ ವ್ಯಾಪಾರಿಗಳು ಹೇಳುತ್ತಾರೆ.</p>.<p>3,000 ದಿಂದ 800 ಬಾಕ್ಸ್ಗೆ ಇಳಿಕೆ: ಜಿಲ್ಲೆಯಲ್ಲಿ ವಾರದಲ್ಲಿ ಸೋಮವಾರ, ಬುಧವಾರ ಹಾಗೂ ಶನಿವಾರ ಮಾವಿನ ಹಣ್ಣು ಪೂರೈಕೆ ಆಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಬೆಳಗಾವಿಯಿಂದ ಬರುತ್ತದೆ. ಹಿಂದಿನ ವರ್ಷ ಒಂದು ಸಲಕ್ಕೆ ಜಿಲ್ಲೆಗೆ 3 ಸಾವಿರ ಬಾಕ್ಸ್ ಹಣ್ಣು ಬರುತ್ತಿದ್ದವು. ಈಗ ಅವುಗಳ ಸಂಖ್ಯೆ 800ಕ್ಕೆ ಇಳಿದೆ. </p>.<p>ಮಹಾರಾಷ್ಟ್ರದ ರತ್ನಾಗಿರಿ ಮತ್ತು ದೇವಗಡ ಆಪೂಸ್, ರಾಜ್ಯದ ಕಲ್ಮಿ, ಸಿಂದೂರ, ಬೇನಿಷ್ ಮಾವು ಹೆಚ್ಚಾಗಿ ತರಿಸಲಾಗುತ್ತದೆ. ಕಳೆದ ವರ್ಷ ಆಪೂಸ್ ಒಂದು ಬಾಕ್ಸ್ಗೆ (12, 15, 18 ಹಣ್ಣಿನ ಬಾಕ್ಸ್) ₹400 ರಿಂದ 500 ಇರುತ್ತಿದ್ದದ್ದು, ಈಗ ₹600 ರಿಂದ ₹700ಕ್ಕೆ ಏರಿಕೆ ಆಗಿದೆ. ಕಲ್ಮಿ ಹಣ್ಣು ಕೆಜಿಗೆ ₹70 ರಿಂದ ₹100 ಇದ್ದಿದ್ದು, ಈಗ ₹100 ರಿಂದ ₹140, ಸಿಂದೂರ ಕೆಜಿಗೆ ₹50 ರಿಂದ 80 ಇದ್ದಿದ್ದು, ಈಗ ₹90 ರಿಂದ 120ಕ್ಕೆ ಏರಿಕೆ ಆಗಿದೆ.</p>.<div><blockquote>ಮೂರ್ನಾಲ್ಕು ವರ್ಷಗಳಿಗೊಮ್ಮೆ ಮಾರುಕಟ್ಟೆಗೆ ಹಣ್ಣಿನ ಪೂರೈಕೆ ಕಡಿಮೆ ಆಗಿ ಬೆಲೆ ಹೆಚ್ಚಳ ಆಗುತ್ತದೆ. ಆಪೂಸ್ ಹಣ್ಣಿಗೆ ಹೆಚ್ಚಿನ ಬೇಡಿಕೆ ಇದ್ದು ಕಡಿಮೆ ಪ್ರಮಾಣದಲ್ಲಿ ಮಾರುಕಟ್ಟೆಗೆ ಪೂರೈಕೆ ಆಗುತ್ತಿದೆ</blockquote><span class="attribution">ಬಂದೇನವಾಜ್ ಬಾಳಿಕಾಯಿ ವ್ಯಾಪಾರಸ್ಥ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ:</strong> ಬೇಸಿಗೆಯಲ್ಲಿ ಮಾವಿನ ಹಣ್ಣಿನ ಮಾರುಕಟ್ಟೆ ಜೋರಾಗಿರುತ್ತದೆ. ಆದರೆ, ಈ ವರ್ಷ ಮಾವಿನ ಹಣ್ಣಿನ ಪ್ರಮಾಣ ಕಡಿಮೆ ಇರುವುದರಿಂದ ಹಣ್ಣುಗಳ ಭರಾಟೆ ಕಡಿಮೆಯಾಗಿದೆ.</p>.<p>ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಇಲ್ಲದಿರುವುದರಿಂದ ಹಣ್ಣುಗಳ ಬೆಲೆ ಹೆಚ್ಚಿದೆ. ಪರಿಣಾಮ ಮಾರಾಟ ಪ್ರಮಾಣದಲ್ಲಿ ಕುಸಿತವಾಗಿ ವ್ಯಾಪಾರಸ್ಥರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇತ್ತ ಗ್ರಾಹಕರಿಗೂ ಬೆಲೆ ಏರಿಕೆ ಬಿಸಿ ತಾಗಿದೆ.</p>.<p>ಯುಗಾದಿ ಆಸು–ಪಾಸಿನಲ್ಲಿ ಆರಂಭವಾಗುವ ಮಾವಿನ ಹಣ್ಣಿನ ಸೀಸನ್, ಬಸವ ಜಯಂತಿ ವೇಳೆ ಉತ್ತುಂಗವನ್ನು ಮುಟ್ಟಿರುತ್ತಿತ್ತು. ಹೋಳಿಗೆ, ಶೀಕರಣೆ ಮಾಡುವುದರಿಂದ ಮಾರಾಟವೂ ಜೋರಾಗಿರುತ್ತದೆ. </p>.<p>ಮಹಾರಾಷ್ಟ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ಮಾವಿನ ಹಣ್ಣು ಮಾರುಕಟ್ಟೆಗೆ ಬರುತ್ತದೆ. ಈ ವರ್ಷ ಸೈಕ್ಲೋನ್ ಪರಿಣಾಮದಿಂದಾಗಿ ಅಲ್ಲಿ ಮಾವಿನ ಇಳುವರಿ ಕಡಿಮೆ ಆಗಿದೆ. ಮಾರುಕಟ್ಟೆಗೆ ನಿರೀಕ್ಷಿತ ಪ್ರಮಾಣದಲ್ಲಿ ಮಾವು ಬರುತ್ತಿಲ್ಲ. ಸ್ಥಳೀಯ ಮಾವಿನ ಹಣ್ಣನ್ನೇ ಮಾರಾಟಗಾರರು ನೆಚ್ಚಿಕೊಳ್ಳಬೇಕಾಗಿದೆ.</p>.<p>ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ಸಲ ಮಾವಿನ ಹಣ್ಣು ಮಹಾರಾಷ್ಟ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿಲ್ಲ. ಬೆಲೆ ಹೆಚ್ಚಾಗಿರುವುದರಿಂದ ಖರೀದಿದಾರರ ಸಂಖ್ಯೆ ಕಡಿಮೆಯಾಗಿದೆ ಎಂದು ಮಾವಿನ ಹಣ್ಣಿನ ವ್ಯಾಪಾರಿಗಳು ಹೇಳುತ್ತಾರೆ.</p>.<p>3,000 ದಿಂದ 800 ಬಾಕ್ಸ್ಗೆ ಇಳಿಕೆ: ಜಿಲ್ಲೆಯಲ್ಲಿ ವಾರದಲ್ಲಿ ಸೋಮವಾರ, ಬುಧವಾರ ಹಾಗೂ ಶನಿವಾರ ಮಾವಿನ ಹಣ್ಣು ಪೂರೈಕೆ ಆಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಬೆಳಗಾವಿಯಿಂದ ಬರುತ್ತದೆ. ಹಿಂದಿನ ವರ್ಷ ಒಂದು ಸಲಕ್ಕೆ ಜಿಲ್ಲೆಗೆ 3 ಸಾವಿರ ಬಾಕ್ಸ್ ಹಣ್ಣು ಬರುತ್ತಿದ್ದವು. ಈಗ ಅವುಗಳ ಸಂಖ್ಯೆ 800ಕ್ಕೆ ಇಳಿದೆ. </p>.<p>ಮಹಾರಾಷ್ಟ್ರದ ರತ್ನಾಗಿರಿ ಮತ್ತು ದೇವಗಡ ಆಪೂಸ್, ರಾಜ್ಯದ ಕಲ್ಮಿ, ಸಿಂದೂರ, ಬೇನಿಷ್ ಮಾವು ಹೆಚ್ಚಾಗಿ ತರಿಸಲಾಗುತ್ತದೆ. ಕಳೆದ ವರ್ಷ ಆಪೂಸ್ ಒಂದು ಬಾಕ್ಸ್ಗೆ (12, 15, 18 ಹಣ್ಣಿನ ಬಾಕ್ಸ್) ₹400 ರಿಂದ 500 ಇರುತ್ತಿದ್ದದ್ದು, ಈಗ ₹600 ರಿಂದ ₹700ಕ್ಕೆ ಏರಿಕೆ ಆಗಿದೆ. ಕಲ್ಮಿ ಹಣ್ಣು ಕೆಜಿಗೆ ₹70 ರಿಂದ ₹100 ಇದ್ದಿದ್ದು, ಈಗ ₹100 ರಿಂದ ₹140, ಸಿಂದೂರ ಕೆಜಿಗೆ ₹50 ರಿಂದ 80 ಇದ್ದಿದ್ದು, ಈಗ ₹90 ರಿಂದ 120ಕ್ಕೆ ಏರಿಕೆ ಆಗಿದೆ.</p>.<div><blockquote>ಮೂರ್ನಾಲ್ಕು ವರ್ಷಗಳಿಗೊಮ್ಮೆ ಮಾರುಕಟ್ಟೆಗೆ ಹಣ್ಣಿನ ಪೂರೈಕೆ ಕಡಿಮೆ ಆಗಿ ಬೆಲೆ ಹೆಚ್ಚಳ ಆಗುತ್ತದೆ. ಆಪೂಸ್ ಹಣ್ಣಿಗೆ ಹೆಚ್ಚಿನ ಬೇಡಿಕೆ ಇದ್ದು ಕಡಿಮೆ ಪ್ರಮಾಣದಲ್ಲಿ ಮಾರುಕಟ್ಟೆಗೆ ಪೂರೈಕೆ ಆಗುತ್ತಿದೆ</blockquote><span class="attribution">ಬಂದೇನವಾಜ್ ಬಾಳಿಕಾಯಿ ವ್ಯಾಪಾರಸ್ಥ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>