ಬಹಳಷ್ಟು ಜನರು ಅವರ ತೋಟಕ್ಕೆ ಬಂದು ಹಣ್ಣು ಒಯ್ದರೆ ರಬಕವಿ–ಬನಹಟ್ಟಿ, ಜಮಖಂಡಿ ನಗರಗಳ ವ್ಯಾಪಾರಸ್ಥರಿಗೆ ತಾವೇ ಹೋಗಿ ಹಣ್ಣು ಮುಟ್ಟಿಸಿ ಬಂದರು. ಕೇವಲ ಬೆಳೆ ಬೆಳೆದರೆ ಸಾಲದು, ಕೆಲವು ಸಂದರ್ಭದಲ್ಲಿ ನಾವೇ ಮಾರುಕಟ್ಟೆ ಹುಡುಕಿಕೊಳ್ಳಬೇಕಾಗುತ್ತದೆ. ಬೆಂಗಳೂರು, ಬೆಳಗಾವಿ ನಗರಗಳಲ್ಲಿ ಮಾರುಕಟ್ಟೆ ಬಂದ್ ಆಗಿರುವುದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದೇವೆ. ಅದರಲ್ಲೂ ರಂಜಾನ್ ಹಬ್ಬವಿರುವುದರಿಂದ ಮಾರಾಟಕ್ಕೆ ಮತ್ತಷ್ಟು ಅನುಕೂಲವಾಯಿತು ಎಂದು ಧರೆಪ್ಪ ಹೇಳುತ್ತಾರೆ.