<p><strong>ಬಾಗಲಕೋಟೆ:</strong> ಪ್ರಸಕ್ತ ಸಾಲಿನ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ, ಹೆಸರುಕಾಳು, ಉದ್ದಿನಕಾಳು ಹಾಗೂ ಸೋಯಾಬಿನ್ ಉತ್ಪನ್ನಗಳ ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದು ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿ ಅಧ್ಯಕ್ಷ ಸಂಗಪ್ಪ ತಿಳಿಸಿದ್ದಾರೆ. </p>.<p>ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ ಪ್ರತಿ ಕ್ವಿಂಟಲ್ಗೆ ₹7,721 ದರದಂತೆ ಪ್ರತಿ ಎಕರೆಗೆ 4 ಕ್ವಿಂಟಲ್ನಂತೆ ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಲ್ ಖರೀದಿ ಪ್ರಮಾಣ ನಿಗದಿಪಡಿಸಲಾಗಿದೆ ಎಂದರು.</p>.<p>ಹೆಸರುಕಾಳು ಪ್ರತಿ ಕ್ವಿಂಟಲ್ಗೆ ₹8,768 ದರದಂತೆ ಪ್ರತಿ ಎಕರೆಗೆ 3 ಕ್ವಿಂಟಲ್ ನಂತೆ ಗರಿಷ್ಠ 15 ಕ್ವಿಂಟಲ್, ಉದ್ದಿನಕಾಳು ಪ್ರತಿ ಕ್ವಿಂಟಲ್ಗೆ ₹7,800 ದರದಂತೆ ಪ್ರತಿ ಎಕರೆಗೆ 5 ಕ್ವಿಂಟಲ್ ನಂತೆ ಪ್ರತಿ ರೈತರಿಂದ ಗರಿಷ್ಠ 30 ಕ್ವಿಂಟಲ್ ಖರೀದಿಸಲಾಗುತ್ತದೆ. ಸೋಯಾಬಿನ್ ಪ್ರತಿ ಕ್ವಿಂಟಲ್ಗೆ ₹5,328 ದರದಂತೆ ಪ್ರತಿ ಎಕರೆಗೆ 5 ಕ್ವಿಂಟಲ್ನಂತೆ ಗರಿಷ್ಠ 20 ಕ್ವಿಂಟಲ್ ಖರೀದಿ ಪ್ರಮಾಣ ನಿಗದಿಪಡಿಸಲಾಗಿದೆ.</p>.<p>ಖರೀದಿ ಅವಧಿಯನ್ನು 90 ದಿನಗಳವರೆಗೆ ನಿಗದಿ ಪಡಿಸಲಾಗಿದ್ದು, ನೋಂದಣಿ ಪ್ರಕ್ರಿಯೆ ಜೊತೆಗೆ ಖರೀದಿ ಪ್ರಕ್ರಿಯೆ ಪ್ರಾರಂಭಗೊಳಿಸಲಾಗುತ್ತಿದೆ. ಜಿಲ್ಲೆಯ ರೈತರು ನೋಂದಣಿ ಹಾಗೂ ಖರೀದಿ ಕೇಂದ್ರಗಳಲ್ಲಿ ಆಧಾರ್ ಕಾರ್ಡ, ಪಹಣಿ, ಆಧಾರ್ ಲಿಂಕ್ ಆಗಿರುವ ರಾಷ್ಟ್ರೀಕೃತ ಬ್ಯಾಂಕಿನ ಪಾಸ್ ಬುಕ್ ಪ್ರತಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳಬೇಕು. ಮಾಹಿತಿಗಾಗಿ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳಿ ಜಿಲ್ಲಾ ಶಾಖಾ ವ್ಯವಸ್ಥಾಪಕರ ಕಚೇರಿ (94498 64458), ಸಹಾಯಕ ನಿರ್ದೇಶಕರು, ಎಪಿಎಂಸಿ, ಬಾಗಲಕೋಟೆ (94481 00779)ಗೆ ಸಂಪರ್ಕಿಸುವಂತೆ ತಿಳಿಸಿದ್ದಾರೆ.</p>.<p>ಪ್ರಜಾವಾಣಿಯಲ್ಲಿ ‘ಆರಂಭವಾಗದ ಖರೀದಿ ಕೇಂದ್ರಗಳು’ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು.</p>.<h2>ಖರೀದಿ ಕೇಂದ್ರಗಳ ವಿವರ</h2><h2></h2><p><strong>ಸೂರ್ಯಕಾಂತಿ ಖರೀದಿ ಕೇಂದ್ರಗಳು:</strong> ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘ, ಖಜ್ಜಿಡೋಣಿ (99011 06360) ಟಿಎಪಿಸಿಎಂಎಸ್ ಬಾಗಲಕೋಟೆ (73538 61868), ಪಿಕೆಪಿಎಸ್, ಕಲಾದಗಿ (97399 46651), ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘ, ಕಗಲಗೊಂಬ (96118 59963), ಕೆಂದೂರು (94804 10494), ನಂದಿಕೇಶ್ವರ (76249 51919), ಹೆಬ್ಬಳ್ಳಿ (99162 70586), ಟಿಎಪಿಸಿಎಂಎಸ್ ಬಾದಾಮಿ (90081 16746), ಪಿಕೆಪಿಎಸ್ ಕೆರೂರ (99723 01729), ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘ, ಜುನ್ನೂರ (70225 44942), ಸೊನ್ನ (96322 89239), ಟಿಎಪಿಸಿಎಂಎಸ್ ಬೀಳಗಿ (70196 82890), ಹುನಗುಂದ (94802 62655), ಜಮಖಂಡಿ (94482 23654), ನಂದವಾಡಗಿ (99023 77067), ಕರಡಿ (91104 02689).</p>. <p><strong>ಹೆಸರುಕಾಳು, ಉದ್ದಿನಕಾಳು ಹಾಗೂ ಸೋಯಾಬಿನ್ ಖರೀದಿ ಕೇಂದ್ರ:</strong> ಟಿಎಪಿಸಿಎಂಎಸ್ ಬಾಗಲಕೋಟೆ (73538 61868), ಪಿಕೆಪಿಎಸ್ ಹಳ್ಳೂರ (99013 25201), ಬೆನಕಟ್ಟಿ (97404 06918), ಟಿಎಪಿಸಿಎಂಎಸ್ ಬಾದಾಮಿ (90081 16746), ಪಿಕೆಪಿಎಸ್ ಬಾದಾಮಿ (96113 58837), ಕೆರೂರು (99723 01729), ಎಫ್ಪಿಒ ಲೋಕಾಪುರ (98809 27310), ಸರ್ವಬಂಧು (98444 74344), ಪಿಎಫ್ಪಿಸಿಎಲ್ ಇಳಕಲ್ (86602 03311), ಟಿಎಪಿಸಿಎಂಎಸ್ ಹುನಗುಂದ (94802 62655), ಎಫ್ಪಿಒ ಸುಳೇಭಾವಿ (94497 62433), ಪಿಕೆಪಿಎಸ್ ಮುಗನೂರು (93103 24070), ನಂದವಾಡಗಿ (99023 77067), ಟಿಎಪಿಸಿಎಂಎಸ್ ಜಮಖಂಡಿ (70194 45935), ಎಫ್ಪಿಒ ತೊದಲಬಾಗಿ (97419 98771), ಟಿಎಪಿಸಿಎಂಎಸ್ ಬೀಳಗಿ (70196 82890).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ:</strong> ಪ್ರಸಕ್ತ ಸಾಲಿನ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ, ಹೆಸರುಕಾಳು, ಉದ್ದಿನಕಾಳು ಹಾಗೂ ಸೋಯಾಬಿನ್ ಉತ್ಪನ್ನಗಳ ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದು ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿ ಅಧ್ಯಕ್ಷ ಸಂಗಪ್ಪ ತಿಳಿಸಿದ್ದಾರೆ. </p>.<p>ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ ಪ್ರತಿ ಕ್ವಿಂಟಲ್ಗೆ ₹7,721 ದರದಂತೆ ಪ್ರತಿ ಎಕರೆಗೆ 4 ಕ್ವಿಂಟಲ್ನಂತೆ ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಲ್ ಖರೀದಿ ಪ್ರಮಾಣ ನಿಗದಿಪಡಿಸಲಾಗಿದೆ ಎಂದರು.</p>.<p>ಹೆಸರುಕಾಳು ಪ್ರತಿ ಕ್ವಿಂಟಲ್ಗೆ ₹8,768 ದರದಂತೆ ಪ್ರತಿ ಎಕರೆಗೆ 3 ಕ್ವಿಂಟಲ್ ನಂತೆ ಗರಿಷ್ಠ 15 ಕ್ವಿಂಟಲ್, ಉದ್ದಿನಕಾಳು ಪ್ರತಿ ಕ್ವಿಂಟಲ್ಗೆ ₹7,800 ದರದಂತೆ ಪ್ರತಿ ಎಕರೆಗೆ 5 ಕ್ವಿಂಟಲ್ ನಂತೆ ಪ್ರತಿ ರೈತರಿಂದ ಗರಿಷ್ಠ 30 ಕ್ವಿಂಟಲ್ ಖರೀದಿಸಲಾಗುತ್ತದೆ. ಸೋಯಾಬಿನ್ ಪ್ರತಿ ಕ್ವಿಂಟಲ್ಗೆ ₹5,328 ದರದಂತೆ ಪ್ರತಿ ಎಕರೆಗೆ 5 ಕ್ವಿಂಟಲ್ನಂತೆ ಗರಿಷ್ಠ 20 ಕ್ವಿಂಟಲ್ ಖರೀದಿ ಪ್ರಮಾಣ ನಿಗದಿಪಡಿಸಲಾಗಿದೆ.</p>.<p>ಖರೀದಿ ಅವಧಿಯನ್ನು 90 ದಿನಗಳವರೆಗೆ ನಿಗದಿ ಪಡಿಸಲಾಗಿದ್ದು, ನೋಂದಣಿ ಪ್ರಕ್ರಿಯೆ ಜೊತೆಗೆ ಖರೀದಿ ಪ್ರಕ್ರಿಯೆ ಪ್ರಾರಂಭಗೊಳಿಸಲಾಗುತ್ತಿದೆ. ಜಿಲ್ಲೆಯ ರೈತರು ನೋಂದಣಿ ಹಾಗೂ ಖರೀದಿ ಕೇಂದ್ರಗಳಲ್ಲಿ ಆಧಾರ್ ಕಾರ್ಡ, ಪಹಣಿ, ಆಧಾರ್ ಲಿಂಕ್ ಆಗಿರುವ ರಾಷ್ಟ್ರೀಕೃತ ಬ್ಯಾಂಕಿನ ಪಾಸ್ ಬುಕ್ ಪ್ರತಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳಬೇಕು. ಮಾಹಿತಿಗಾಗಿ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳಿ ಜಿಲ್ಲಾ ಶಾಖಾ ವ್ಯವಸ್ಥಾಪಕರ ಕಚೇರಿ (94498 64458), ಸಹಾಯಕ ನಿರ್ದೇಶಕರು, ಎಪಿಎಂಸಿ, ಬಾಗಲಕೋಟೆ (94481 00779)ಗೆ ಸಂಪರ್ಕಿಸುವಂತೆ ತಿಳಿಸಿದ್ದಾರೆ.</p>.<p>ಪ್ರಜಾವಾಣಿಯಲ್ಲಿ ‘ಆರಂಭವಾಗದ ಖರೀದಿ ಕೇಂದ್ರಗಳು’ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು.</p>.<h2>ಖರೀದಿ ಕೇಂದ್ರಗಳ ವಿವರ</h2><h2></h2><p><strong>ಸೂರ್ಯಕಾಂತಿ ಖರೀದಿ ಕೇಂದ್ರಗಳು:</strong> ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘ, ಖಜ್ಜಿಡೋಣಿ (99011 06360) ಟಿಎಪಿಸಿಎಂಎಸ್ ಬಾಗಲಕೋಟೆ (73538 61868), ಪಿಕೆಪಿಎಸ್, ಕಲಾದಗಿ (97399 46651), ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘ, ಕಗಲಗೊಂಬ (96118 59963), ಕೆಂದೂರು (94804 10494), ನಂದಿಕೇಶ್ವರ (76249 51919), ಹೆಬ್ಬಳ್ಳಿ (99162 70586), ಟಿಎಪಿಸಿಎಂಎಸ್ ಬಾದಾಮಿ (90081 16746), ಪಿಕೆಪಿಎಸ್ ಕೆರೂರ (99723 01729), ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘ, ಜುನ್ನೂರ (70225 44942), ಸೊನ್ನ (96322 89239), ಟಿಎಪಿಸಿಎಂಎಸ್ ಬೀಳಗಿ (70196 82890), ಹುನಗುಂದ (94802 62655), ಜಮಖಂಡಿ (94482 23654), ನಂದವಾಡಗಿ (99023 77067), ಕರಡಿ (91104 02689).</p>. <p><strong>ಹೆಸರುಕಾಳು, ಉದ್ದಿನಕಾಳು ಹಾಗೂ ಸೋಯಾಬಿನ್ ಖರೀದಿ ಕೇಂದ್ರ:</strong> ಟಿಎಪಿಸಿಎಂಎಸ್ ಬಾಗಲಕೋಟೆ (73538 61868), ಪಿಕೆಪಿಎಸ್ ಹಳ್ಳೂರ (99013 25201), ಬೆನಕಟ್ಟಿ (97404 06918), ಟಿಎಪಿಸಿಎಂಎಸ್ ಬಾದಾಮಿ (90081 16746), ಪಿಕೆಪಿಎಸ್ ಬಾದಾಮಿ (96113 58837), ಕೆರೂರು (99723 01729), ಎಫ್ಪಿಒ ಲೋಕಾಪುರ (98809 27310), ಸರ್ವಬಂಧು (98444 74344), ಪಿಎಫ್ಪಿಸಿಎಲ್ ಇಳಕಲ್ (86602 03311), ಟಿಎಪಿಸಿಎಂಎಸ್ ಹುನಗುಂದ (94802 62655), ಎಫ್ಪಿಒ ಸುಳೇಭಾವಿ (94497 62433), ಪಿಕೆಪಿಎಸ್ ಮುಗನೂರು (93103 24070), ನಂದವಾಡಗಿ (99023 77067), ಟಿಎಪಿಸಿಎಂಎಸ್ ಜಮಖಂಡಿ (70194 45935), ಎಫ್ಪಿಒ ತೊದಲಬಾಗಿ (97419 98771), ಟಿಎಪಿಸಿಎಂಎಸ್ ಬೀಳಗಿ (70196 82890).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>