<p><strong>ಮುಧೋಳ:</strong> ಗೋದಾವರಿ ಸಕ್ಕರೆ ಕಾರ್ಖಾನೆಗೆ ರೈತರು ಮುತ್ತಿಗೆ ಹಾಕಿದ ವೇಳೆ ಕಬ್ಬು ತುಂಬಿದ ಟ್ರ್ಯಾಕ್ಟರ್ ಸೇರಿದಂತೆ, ಹಲವು ವಾಹನಗಳಿಗೆ ಬೆಂಕಿ ಹಚ್ಚಿ, ಪೊಲೀಸರಿಗೆ ಗಾಯವಾಗುವಂತೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಪ್ಪ ಉಳ್ಳಾಗಡ್ಡಿ ಸೇರಿದಂತೆ 8 ಜನರನ್ನು ದಸ್ತಗೀರ ಮಾಡಿದ್ದನ್ನು ಖಂಡಿಸಿ ಸೋಮವಾರ ಕರ್ನಾಟಕ ರೈತ ಸಂಘ ಹಸಿರು ಸೇನೆ ಕಾರ್ಯಕರ್ತರು ಜಿಲ್ಲಾ ಘಟಕದ ಅಧ್ಯಕ್ಷ ಬಸವಂತ ಕಾಂಬಳೆ ಅವರ ನೇತೃತ್ವದಲ್ಲಿ ನಗರದ ಜಿ.ಎಲ್.ಬಿ.ಸಿ ಆವರಣದಲ್ಲಿ ಸಭೆ ನಡೆಸಿದರು.</p>.<p>ಬಸವಂತ ಕಾಂಬಳೆ ಮಾತನಾಡಿ, ರೈತ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ,ತಿಮ್ಮಾಪುರ ಅವರೊಂದಿಗೆ ಸಭೆ ಮಾಡಿದ್ದೇವೆ. ಸಭೆಯಲ್ಲಿ ಯಾರನ್ನೂ ಬಂಧಿಸಬಾರದು ಎಂದು ಮನವಿ ಮಾಡಲಾಗಿದೆ. ಬಂಧಿಸದಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ’ ಎಂದರು.</p>.<p>‘ಈ ಬಗ್ಗೆ ಯಾವುದೇ ರೈತರು ಭಯಗೊಳ್ಳಬಾರದು. ಪೊಲೀಸರು ಬಂಧನಕ್ಕೆ ಬಂದರೆ ರೈತ ಮುಖಂಡರನ್ನು ಸಂಪರ್ಕಿಸಬೇಕು ಈಗಾಗಲೇ 9 ಜನರನ್ನು ಬಂಧಿಸಿದ್ದು, ಈ ಬಗ್ಗೆ ಅಸಮಾಧಾನವಾಗಿದೆ’ ಎಂದರು.</p>.<p>‘ಕಾನೂನನ್ನು ನಾವು ಗೌರವಿಸುತ್ತೆವೆ ಅದಕ್ಕೆ ನಾವು ಎಲ್ಲಾ ಬಂಧಿತರನ್ನು ಜಾಮೀನು ಮೇಲೆ ತರುವ ಜವಾಬ್ದಾರಿ ನಮ್ಮದು. ಬಂಧಿತರ ಮನೆಯವರು ಅವರ ಆಧಾರ್ ಕಾರ್ಡ್ ಹಾಗೂ ಕಾಗದ ಪತ್ರಗಳನ್ನು ತಂದು ಕೊಡಬೇಕು. ಈ ಬಗ್ಗೆ 4– 5 ಜನ ವಕೀಲರು ಉಚಿತವಾಗಿ ನಮ್ಮ ಪ್ರಕರಣ ನಡೆಸುತ್ತಾರೆ. ಇನ್ನು ಮೇಲೆ ಯಾರನ್ನಾದರೂ ಬಂಧಿಸಿದರೆ ಜೈಲೋ ಬರೊ ಚಳವಳಿ ಮಾಡುವುದು ಅನಿವಾರ್ಯ ಎಂದು ಹೇಳಿದರು.</p>.<p>ದುಂಡಪ್ಪ ಯರಗಟ್ಟಿ, ಹನಮಂತ ನಬಾಬ, ಸುರೇಶ ಚಿಂಚಲಿ, ಸುಭಾಷ ಶಿರಬೂರ, ಮಹೇಶಗೌಡ ಪಾಟೀಲ, ಹನಮಂತಗೌಡ ಪಾಟೀಲ, ಮುತ್ತಪ್ಪ ಕೊಮ್ಮಾರ, ಈರಪ್ಪ ಹಂಚಿನಾಳ, ಮುಖಂಡರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಧೋಳ:</strong> ಗೋದಾವರಿ ಸಕ್ಕರೆ ಕಾರ್ಖಾನೆಗೆ ರೈತರು ಮುತ್ತಿಗೆ ಹಾಕಿದ ವೇಳೆ ಕಬ್ಬು ತುಂಬಿದ ಟ್ರ್ಯಾಕ್ಟರ್ ಸೇರಿದಂತೆ, ಹಲವು ವಾಹನಗಳಿಗೆ ಬೆಂಕಿ ಹಚ್ಚಿ, ಪೊಲೀಸರಿಗೆ ಗಾಯವಾಗುವಂತೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಪ್ಪ ಉಳ್ಳಾಗಡ್ಡಿ ಸೇರಿದಂತೆ 8 ಜನರನ್ನು ದಸ್ತಗೀರ ಮಾಡಿದ್ದನ್ನು ಖಂಡಿಸಿ ಸೋಮವಾರ ಕರ್ನಾಟಕ ರೈತ ಸಂಘ ಹಸಿರು ಸೇನೆ ಕಾರ್ಯಕರ್ತರು ಜಿಲ್ಲಾ ಘಟಕದ ಅಧ್ಯಕ್ಷ ಬಸವಂತ ಕಾಂಬಳೆ ಅವರ ನೇತೃತ್ವದಲ್ಲಿ ನಗರದ ಜಿ.ಎಲ್.ಬಿ.ಸಿ ಆವರಣದಲ್ಲಿ ಸಭೆ ನಡೆಸಿದರು.</p>.<p>ಬಸವಂತ ಕಾಂಬಳೆ ಮಾತನಾಡಿ, ರೈತ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ,ತಿಮ್ಮಾಪುರ ಅವರೊಂದಿಗೆ ಸಭೆ ಮಾಡಿದ್ದೇವೆ. ಸಭೆಯಲ್ಲಿ ಯಾರನ್ನೂ ಬಂಧಿಸಬಾರದು ಎಂದು ಮನವಿ ಮಾಡಲಾಗಿದೆ. ಬಂಧಿಸದಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ’ ಎಂದರು.</p>.<p>‘ಈ ಬಗ್ಗೆ ಯಾವುದೇ ರೈತರು ಭಯಗೊಳ್ಳಬಾರದು. ಪೊಲೀಸರು ಬಂಧನಕ್ಕೆ ಬಂದರೆ ರೈತ ಮುಖಂಡರನ್ನು ಸಂಪರ್ಕಿಸಬೇಕು ಈಗಾಗಲೇ 9 ಜನರನ್ನು ಬಂಧಿಸಿದ್ದು, ಈ ಬಗ್ಗೆ ಅಸಮಾಧಾನವಾಗಿದೆ’ ಎಂದರು.</p>.<p>‘ಕಾನೂನನ್ನು ನಾವು ಗೌರವಿಸುತ್ತೆವೆ ಅದಕ್ಕೆ ನಾವು ಎಲ್ಲಾ ಬಂಧಿತರನ್ನು ಜಾಮೀನು ಮೇಲೆ ತರುವ ಜವಾಬ್ದಾರಿ ನಮ್ಮದು. ಬಂಧಿತರ ಮನೆಯವರು ಅವರ ಆಧಾರ್ ಕಾರ್ಡ್ ಹಾಗೂ ಕಾಗದ ಪತ್ರಗಳನ್ನು ತಂದು ಕೊಡಬೇಕು. ಈ ಬಗ್ಗೆ 4– 5 ಜನ ವಕೀಲರು ಉಚಿತವಾಗಿ ನಮ್ಮ ಪ್ರಕರಣ ನಡೆಸುತ್ತಾರೆ. ಇನ್ನು ಮೇಲೆ ಯಾರನ್ನಾದರೂ ಬಂಧಿಸಿದರೆ ಜೈಲೋ ಬರೊ ಚಳವಳಿ ಮಾಡುವುದು ಅನಿವಾರ್ಯ ಎಂದು ಹೇಳಿದರು.</p>.<p>ದುಂಡಪ್ಪ ಯರಗಟ್ಟಿ, ಹನಮಂತ ನಬಾಬ, ಸುರೇಶ ಚಿಂಚಲಿ, ಸುಭಾಷ ಶಿರಬೂರ, ಮಹೇಶಗೌಡ ಪಾಟೀಲ, ಹನಮಂತಗೌಡ ಪಾಟೀಲ, ಮುತ್ತಪ್ಪ ಕೊಮ್ಮಾರ, ಈರಪ್ಪ ಹಂಚಿನಾಳ, ಮುಖಂಡರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>