<p><strong>ಮುಧೋಳ:</strong> ದೇಶದ ಸ್ವಾತಂತ್ರಕ್ಕಾಗಿ ಅತೀ ಹೆಚ್ಚು ಬಾರಿ ಬ್ರಿಟಿಷರ ವಿರುದ್ಧ ಹೋರಾಡಿದವರಲ್ಲಿ ಮೈಸೂರಿನ ಟಿಪ್ಪು ಸುಲ್ತಾನ ಪ್ರಮುಖರು ಎಂದು ವಕೀಲ ಯಲ್ಲಪ್ಪ ಹೆಗ್ಡೆ ಹೇಳಿದರು.</p>.<p>ಗುರುವಾರ ಬಸವೇಶ್ವರ ವೃತ್ತದ ಹತ್ತಿರ ಸುಲ್ತಾನ ಕ್ರಿಯೇಶನ್ ಯುವಕರ ಸಹಯೋಗದಲ್ಲಿ ಹಜರತ ಟಿಪ್ಪು ಸುಲ್ತಾನರ ಜಯಂತ್ಯುತ್ಸವ ಆಚರಣೆಯಲ್ಲಿ ಅವರು ಮಾತನಾಡಿದರು.</p>.<p>‘ಕನ್ನಡ ನಾಡಿನ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಅವರು ಸಾಮಾಜಿಕ ನ್ಯಾಯ, ಪರಿಸರ, ರೇಷ್ಮೆ ಬೆಳೆ, ಕೃಷಿ ಮೇಲೆ ಅಪಾರ ಕಾಳಜಿ ಹೊಂದಿದ್ದರು. ಇಂತಹ ಮಹಾನ ವ್ಯಕ್ತಿಯ ತೇಜೋವಧೆ ಮಾಡಬಾರದು’ ಎಂದು ಹೇಳಿದರು.</p>.<p>ಯುವ ಮುಖಂಡ ಫಜಲ್ ಮೋಮಿನ ಮತ್ತು ರಾಜು ಜಮಾದಾರ ಮಾತನಾಡಿ, ನಾಡಿನ ಅನೇಕ ಮಹನೀಯರ ಜಯಂತ್ಯುತ್ಸವ ಸರ್ಕಾರದಿಂದ ಆಚರಿಸುವಂತೆ ಟಿಪ್ಪು ಅವರ ಜಯಂತಿ ಕೂಡ ಆಚರಿಸಬೇಕು. ಶಾಲಾ ಪಠ್ಯಪುಸ್ತಕದಲ್ಲಿ ಇವರ ಜೀವನ ಚರಿತ್ರೆ ತಿಳಿಸಬೇಕು ಎಂದು ಅವರು ಒತ್ತಾಯಿಸಿದರು.</p>.<p>ಪ್ರಮುಖರಾದ ರಫೀಕ್ ಖಾನಮಹ್ಮದ್, ಉಮರಬೇಗ್ ಜಮಾದಾರ, ಅಂಜುಮನ್ ಕಮೀಟಿ ಸದಸ್ಯರಾದ ರಫೀಕ್ ಪಠಾಣ, ವಕೀಲ ಬಿಲಾಲ ಬಾಣದಾರ, ಸುಲೇಮಾನ್ ಅಂಬಿ, ಡಾ.ಸೈಪುದ್ದಿನ್ ಕರ್ಜಗಿ, ಯುಸೂಫ್ ಜಮಾದಾರ, ಇರ್ಫಾನ ಸುರಪುರ, ಜಾವೇದ್ ಸಾಂಗಲಿಕರ, ಬಂದೇನವಾಜ ಧಾರವಾಡಕರ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಧೋಳ:</strong> ದೇಶದ ಸ್ವಾತಂತ್ರಕ್ಕಾಗಿ ಅತೀ ಹೆಚ್ಚು ಬಾರಿ ಬ್ರಿಟಿಷರ ವಿರುದ್ಧ ಹೋರಾಡಿದವರಲ್ಲಿ ಮೈಸೂರಿನ ಟಿಪ್ಪು ಸುಲ್ತಾನ ಪ್ರಮುಖರು ಎಂದು ವಕೀಲ ಯಲ್ಲಪ್ಪ ಹೆಗ್ಡೆ ಹೇಳಿದರು.</p>.<p>ಗುರುವಾರ ಬಸವೇಶ್ವರ ವೃತ್ತದ ಹತ್ತಿರ ಸುಲ್ತಾನ ಕ್ರಿಯೇಶನ್ ಯುವಕರ ಸಹಯೋಗದಲ್ಲಿ ಹಜರತ ಟಿಪ್ಪು ಸುಲ್ತಾನರ ಜಯಂತ್ಯುತ್ಸವ ಆಚರಣೆಯಲ್ಲಿ ಅವರು ಮಾತನಾಡಿದರು.</p>.<p>‘ಕನ್ನಡ ನಾಡಿನ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಅವರು ಸಾಮಾಜಿಕ ನ್ಯಾಯ, ಪರಿಸರ, ರೇಷ್ಮೆ ಬೆಳೆ, ಕೃಷಿ ಮೇಲೆ ಅಪಾರ ಕಾಳಜಿ ಹೊಂದಿದ್ದರು. ಇಂತಹ ಮಹಾನ ವ್ಯಕ್ತಿಯ ತೇಜೋವಧೆ ಮಾಡಬಾರದು’ ಎಂದು ಹೇಳಿದರು.</p>.<p>ಯುವ ಮುಖಂಡ ಫಜಲ್ ಮೋಮಿನ ಮತ್ತು ರಾಜು ಜಮಾದಾರ ಮಾತನಾಡಿ, ನಾಡಿನ ಅನೇಕ ಮಹನೀಯರ ಜಯಂತ್ಯುತ್ಸವ ಸರ್ಕಾರದಿಂದ ಆಚರಿಸುವಂತೆ ಟಿಪ್ಪು ಅವರ ಜಯಂತಿ ಕೂಡ ಆಚರಿಸಬೇಕು. ಶಾಲಾ ಪಠ್ಯಪುಸ್ತಕದಲ್ಲಿ ಇವರ ಜೀವನ ಚರಿತ್ರೆ ತಿಳಿಸಬೇಕು ಎಂದು ಅವರು ಒತ್ತಾಯಿಸಿದರು.</p>.<p>ಪ್ರಮುಖರಾದ ರಫೀಕ್ ಖಾನಮಹ್ಮದ್, ಉಮರಬೇಗ್ ಜಮಾದಾರ, ಅಂಜುಮನ್ ಕಮೀಟಿ ಸದಸ್ಯರಾದ ರಫೀಕ್ ಪಠಾಣ, ವಕೀಲ ಬಿಲಾಲ ಬಾಣದಾರ, ಸುಲೇಮಾನ್ ಅಂಬಿ, ಡಾ.ಸೈಪುದ್ದಿನ್ ಕರ್ಜಗಿ, ಯುಸೂಫ್ ಜಮಾದಾರ, ಇರ್ಫಾನ ಸುರಪುರ, ಜಾವೇದ್ ಸಾಂಗಲಿಕರ, ಬಂದೇನವಾಜ ಧಾರವಾಡಕರ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>