<p><strong>ಬಾದಾಮಿ</strong>: ಪಟ್ಟಣದ ಹೃದಯ ಭಾಗದಲ್ಲಿರುವ ಮಾರುತಿ ದೇವಾಲಯದಿಂದ ಪುರದ ಶಕ್ತಿದೇವತೆಗಳ ದೇವಾಲಯದವರೆಗೆ ಚರಂಡಿ ಮತ್ತು ಸಿಸಿ ರಸ್ತೆ ಕಾಮಗಾರಿಯನ್ನು ಪುರಸಭೆಯು ಆರಂಭಿಸಿದೆ.</p>.<p>ಹದಗೆಟ್ಟಿರುವ ರಸ್ತೆಯ ಬಗ್ಗೆ ಪ್ರಜಾವಾಣಿ ಪತ್ರಿಕೆಯ ನಮ್ಮಜನ- ನಮ್ಮ ಧ್ವನಿಯಲ್ಲಿ ಈಚೆಗೆ ಪ್ರಕಟಿಸಿತ್ತು. ಎಚ್ಚೆತ್ತುಗೊಂಡ ಪುರಸಭೆ ರಸ್ತೆ ಪಕ್ಕದಲ್ಲಿ ನೂತನ ಚರಂಡಿ ಮತ್ತು ರಸ್ತೆ ಕಾಮಗಾರಿಯನ್ನು ಆರಂಭಿಸಿದ್ದು ಕಂಡು ಬಂದಿತು.</p>.<p>ಪ್ರವಾಸಿಗರು ನಿತ್ಯ ಇದೇ ರಸ್ತೆಯಿಂದ ವಾಹನದ ಮೂಲಕ ಭೂತನಾಥ ದೇವಾಲಯ, ಮ್ಯೂಸಿಯಂಗೆ ಹೋಗುತ್ತಿದ್ದರು. ಸ್ಥಳೀಯ ನಿವಾಸಿಗಳಿಗೂ ತೊಂದರೆಯಾಗಿತ್ತು. ಈಚೆಗೆ ಸುರಿದ ಮಳೆಯಿಂದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದನ್ನು ಸ್ಮರಿಸಬಹುದು.</p>.<p>‘ಅಲ್ಪಸಂಖ್ಯಾತರ ನಿಗಮದ ಅನುದಾನದಿಂದ ಎರಡು ವರ್ಷಗಳ ಹಿಂದೆ ಮ್ಯೂಸಿಯಂ ರಸ್ತೆಯನ್ನು ದುರಸ್ತಿ ಮಾಡಲಾಗಿತ್ತು. ಸಾರ್ವಜನಿಕರು ಸಹಕಾರ ಕೊಡದ ಕಾರಣ ಅರ್ಧಕ್ಕೆ ಕಾಮಗಾಗಿ ಸ್ಥಗಿತವಾಗಿತ್ತು. ಜನರ ಸಹಕಾರದಿಂದ ರಸ್ತೆ ಕಾಮಗಾರಿ ಆರಂಭಿಸಲಾಗಿದೆ’ ಎಂದು ಪುರಸಭೆ ಅಧ್ಯಕ್ಷ ಪಾಂಡಪ್ಪ ಕಟ್ಟಿಮನಿ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾದಾಮಿ</strong>: ಪಟ್ಟಣದ ಹೃದಯ ಭಾಗದಲ್ಲಿರುವ ಮಾರುತಿ ದೇವಾಲಯದಿಂದ ಪುರದ ಶಕ್ತಿದೇವತೆಗಳ ದೇವಾಲಯದವರೆಗೆ ಚರಂಡಿ ಮತ್ತು ಸಿಸಿ ರಸ್ತೆ ಕಾಮಗಾರಿಯನ್ನು ಪುರಸಭೆಯು ಆರಂಭಿಸಿದೆ.</p>.<p>ಹದಗೆಟ್ಟಿರುವ ರಸ್ತೆಯ ಬಗ್ಗೆ ಪ್ರಜಾವಾಣಿ ಪತ್ರಿಕೆಯ ನಮ್ಮಜನ- ನಮ್ಮ ಧ್ವನಿಯಲ್ಲಿ ಈಚೆಗೆ ಪ್ರಕಟಿಸಿತ್ತು. ಎಚ್ಚೆತ್ತುಗೊಂಡ ಪುರಸಭೆ ರಸ್ತೆ ಪಕ್ಕದಲ್ಲಿ ನೂತನ ಚರಂಡಿ ಮತ್ತು ರಸ್ತೆ ಕಾಮಗಾರಿಯನ್ನು ಆರಂಭಿಸಿದ್ದು ಕಂಡು ಬಂದಿತು.</p>.<p>ಪ್ರವಾಸಿಗರು ನಿತ್ಯ ಇದೇ ರಸ್ತೆಯಿಂದ ವಾಹನದ ಮೂಲಕ ಭೂತನಾಥ ದೇವಾಲಯ, ಮ್ಯೂಸಿಯಂಗೆ ಹೋಗುತ್ತಿದ್ದರು. ಸ್ಥಳೀಯ ನಿವಾಸಿಗಳಿಗೂ ತೊಂದರೆಯಾಗಿತ್ತು. ಈಚೆಗೆ ಸುರಿದ ಮಳೆಯಿಂದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದನ್ನು ಸ್ಮರಿಸಬಹುದು.</p>.<p>‘ಅಲ್ಪಸಂಖ್ಯಾತರ ನಿಗಮದ ಅನುದಾನದಿಂದ ಎರಡು ವರ್ಷಗಳ ಹಿಂದೆ ಮ್ಯೂಸಿಯಂ ರಸ್ತೆಯನ್ನು ದುರಸ್ತಿ ಮಾಡಲಾಗಿತ್ತು. ಸಾರ್ವಜನಿಕರು ಸಹಕಾರ ಕೊಡದ ಕಾರಣ ಅರ್ಧಕ್ಕೆ ಕಾಮಗಾಗಿ ಸ್ಥಗಿತವಾಗಿತ್ತು. ಜನರ ಸಹಕಾರದಿಂದ ರಸ್ತೆ ಕಾಮಗಾರಿ ಆರಂಭಿಸಲಾಗಿದೆ’ ಎಂದು ಪುರಸಭೆ ಅಧ್ಯಕ್ಷ ಪಾಂಡಪ್ಪ ಕಟ್ಟಿಮನಿ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>