<p><strong>ಬಾದಾಮಿ</strong>: ವಿಶ್ವ ಪರಂಪರೆ ತಾಣ ಪಟ್ಟದಕಲ್ಲು ಸ್ಮಾರಕ ಮತ್ತು ಬಾದಾಮಿ ಮೇಣಬಸದಿ ಆವರಣದಲ್ಲಿ ವಾಹನಗಳ ನಿಲುಗಡೆಗೆ ಚಾಲಕರು ನಿತ್ಯ ಪರದಾಡುವಂತಾಗಿದೆ.</p>.<p>ಬಾದಾಮಿ ಮತ್ತು ವಿಶ್ವ ಪರಂಪರೆಯ ತಾಣ ಪಟ್ಟದಕಲ್ಲಿನಲ್ಲಿ ಪ್ರವಾಸಿಗರು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ನವೆಂಬರ್ನಿಂದ ಜನವರಿಯವರೆಗೆ ಪ್ರವಾಸಿಗರು ಮತ್ತು ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ಬರುತ್ತಾರೆ.</p>.<p>ಪಟ್ಟದಕಲ್ಲಿನಲ್ಲಿ ವಾಹನ ನಿಲುಗಡೆಗೆ ಪ್ರವಾಸೋದ್ಯಮ ಇಲಾಖೆ ಎರಡು ಎಕರೆ ಖರೀದಿಸಿ ದಶಕಗಳು ಕಳೆದಿವೆ. ಕಾರು ಪಾರ್ಕಿಂಗ್ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಚಾಲಕರು ರಸ್ತೆಯಲ್ಲಿಯೇ ವಾಹನಗಳನ್ನು ನಿಲುಗಡೆ ಮಾಡುವರು. ದಟ್ಟಣೆಯಿಂದ ವಾಹನಗಳ ಸಂಚಾರ ಇಲ್ಲಿ ಅಸ್ತವ್ಯಸ್ತವಾಗಿರುವುದನ್ನು ಕಾಣಬಹುದು.</p>.<p>’ಪಟ್ಟದಕಲ್ಲಿನಲ್ಲಿ ವಾಹನ ನಿಲುಗಡೆಗೆ ಪ್ರವಾಸೋದ್ಯಮದ ನಿವೇಶನ ಖಾಲಿ ಇದೆ. ಮುಳ್ಳುಗಳು ಬೆಳೆದಿವೆ. ಚಾಲಕರು ನಿತ್ಯ ಪರದಾಡುವರು. ಅವರಿಗೊಂದು ಸೂಕ್ತ ಪಾರ್ಕಿಂಗ್ ವ್ಯವಸ್ಥೆಯನ್ನು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕಲ್ಪಿಸಬೇಕು ’ ಎಂದು ಸ್ಥಳೀಯರಾದ ಸಿದ್ದಪ್ಪ ಒತ್ತಾಯಿಸಿದರು.</p>.<p>ಬಾದಾಮಿಯಲ್ಲಿ ವಾಹನಗಳ ನಿಲುಗಡೆಗೆ ಪ್ರವಾಸೋದ್ಯಮ ಇಲಾಖೆಯು 9 ಎಕರೆ ಜಮೀನು ಖರೀದಿಸಿ ಎರಡು ವರ್ಷಗಳಾಗಿವೆ. ಆದರೆ ಕಾರ್ ಪಾರ್ಕಿಂಗ್ ಕಾಮಗಾರಿ ಆರಂಭವಾಗದೇ ಇಲ್ಲಿಯು ಸಹ ವಾಹನ ಚಾಲಕರು ಪರದಾಡುವಂತಾಗಿದೆ.</p>.<p>‘ಪಾರ್ಕಿಂಗ್ ಮಾಡಲು ಜಾಗವಿಲ್ಲದ ಕಾರಣದಿಂದ ಅಟೊ ಚಾಲಕರು ಪ್ರವಾಸಿಗರನ್ನು ಆಟೊದಲ್ಲಿ ಕರೆದೊಯ್ದು ಅವರಿಂದ ಹೆಚ್ಚಿನ ಹಣವನ್ನು ವಸೂಲಿ ಮಾಡುವರು.ಆಟೊ ಚಾಲಕರಿಗೆ ದರದ ನಿಗದಿಯಿಲ್ಲ. ಅಧಿಕಾರಿಗಳು ಸೂಕ್ತ ಕ್ರಮವನ್ನು ಕೈಗೊಳ್ಳಬೇಕಿದೆ ’ ಎಂದು ನಗರ ಅಭಿವೃದ್ಧಿ ಹೋರಾಟ ಸಮಿತಿ ಕಾರ್ಯದರ್ಶಿ ಇಷ್ಟಲಿಂಗ ನರೇಗಲ್ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.</p>.<p>‘ಬಾದಾಮಿ ಮತ್ತು ಪಟ್ಟದಕಲ್ಲಿನಲ್ಲಿ ಕಾರ್ ನಿಲ್ಲಿಸಲು ಜಾಗವಿಲ್ಲ ಇಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಅಭಿವೃದ್ಧಿ ಮಾಡಲು ಇಚ್ಛಾ ಶಕ್ತಿ ಬೇಕಿದೆ ’ ಎಂದು ತುಮಕೂರ ಪ್ರವಾಸಿ ಕೊಟ್ರೇಶ್ ಪ್ರತಿಕ್ರಿಯಿಸಿದರು.</p>.<p>ರಾಜ್ಯದ ವಿವಿಧ ಜಿಲ್ಲೆಗಳಿಂದ ಚಾಲುಕ್ಯರ ಪ್ರವಾಸಿ ತಾಣಗಳಾದ ಬಾದಾಮಿ, ಮಹಾಕೂಟ, ಪಟ್ಟದಕಲ್ಲು, ಐಹೊಳೆ , ಹುಲಿಗೆಮ್ಮನಕೊಳ್ಳ ಮತ್ತು ಧಾರ್ಮಿಕ ಕ್ಷೇತ್ರಗಳಾದ ಬನಶಂಕರಿ ಮತ್ತು ಶಿವಯೋಗಮಂದಿರಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಮತ್ತು ವಿದೇಶಿ ಪ್ರವಾಸಿಗರು ನಿತ್ಯ ಆಗಮಿಸುತ್ತಾರೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸೂಕ್ತ ಕ್ರಮವನ್ನು ಕೈಗೊಳ್ಳುವರೇ ಎಂದು ಪ್ರವಾಸಿಗರು ನಿರೀಕ್ಷೆಯಲ್ಲಿದ್ದಾರೆ.</p>.<p>‘ ಪಟ್ಟದಕಲ್ಲಿನಲ್ಲಿರುವ ಎರಡು ಎಕರೆ ಜಮೀನನ್ನು ಕೆ.ಎಸ್.ಟಿ.ಡಿ.ಸಿ ಗೆ ಹಸ್ತಾಂತರ ಮಾಡಲಾಗಿದೆ.ಅವರೇ ಕಾರ್ ಪಾರ್ಕಿಂಗ್ ಮಾಡುವರು. ಬಾದಾಮಿಯಲ್ಲಿ ಪಾರ್ಕಿಂಗ್ ಪ್ಲಾಜಾ ನಿರ್ಮಿಸಲು ಎಪಿಎಂಸಿಯ 9 ಎಕರೆ ಪ್ರವಾಸೋದ್ಯಮ ಇಲಾಖೆ ಖರೀದಿಸಿದೆ. ಎಂಜಿನಿಯರ್ ಬಂದು ವೀಕ್ಷಣೆ ಮಾಡಿದ್ದಾರೆ ’ ಎಂದು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಜಿ.ಎಸ್. ಹಿತ್ತಲಮನಿ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾದಾಮಿ</strong>: ವಿಶ್ವ ಪರಂಪರೆ ತಾಣ ಪಟ್ಟದಕಲ್ಲು ಸ್ಮಾರಕ ಮತ್ತು ಬಾದಾಮಿ ಮೇಣಬಸದಿ ಆವರಣದಲ್ಲಿ ವಾಹನಗಳ ನಿಲುಗಡೆಗೆ ಚಾಲಕರು ನಿತ್ಯ ಪರದಾಡುವಂತಾಗಿದೆ.</p>.<p>ಬಾದಾಮಿ ಮತ್ತು ವಿಶ್ವ ಪರಂಪರೆಯ ತಾಣ ಪಟ್ಟದಕಲ್ಲಿನಲ್ಲಿ ಪ್ರವಾಸಿಗರು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ನವೆಂಬರ್ನಿಂದ ಜನವರಿಯವರೆಗೆ ಪ್ರವಾಸಿಗರು ಮತ್ತು ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ಬರುತ್ತಾರೆ.</p>.<p>ಪಟ್ಟದಕಲ್ಲಿನಲ್ಲಿ ವಾಹನ ನಿಲುಗಡೆಗೆ ಪ್ರವಾಸೋದ್ಯಮ ಇಲಾಖೆ ಎರಡು ಎಕರೆ ಖರೀದಿಸಿ ದಶಕಗಳು ಕಳೆದಿವೆ. ಕಾರು ಪಾರ್ಕಿಂಗ್ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಚಾಲಕರು ರಸ್ತೆಯಲ್ಲಿಯೇ ವಾಹನಗಳನ್ನು ನಿಲುಗಡೆ ಮಾಡುವರು. ದಟ್ಟಣೆಯಿಂದ ವಾಹನಗಳ ಸಂಚಾರ ಇಲ್ಲಿ ಅಸ್ತವ್ಯಸ್ತವಾಗಿರುವುದನ್ನು ಕಾಣಬಹುದು.</p>.<p>’ಪಟ್ಟದಕಲ್ಲಿನಲ್ಲಿ ವಾಹನ ನಿಲುಗಡೆಗೆ ಪ್ರವಾಸೋದ್ಯಮದ ನಿವೇಶನ ಖಾಲಿ ಇದೆ. ಮುಳ್ಳುಗಳು ಬೆಳೆದಿವೆ. ಚಾಲಕರು ನಿತ್ಯ ಪರದಾಡುವರು. ಅವರಿಗೊಂದು ಸೂಕ್ತ ಪಾರ್ಕಿಂಗ್ ವ್ಯವಸ್ಥೆಯನ್ನು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕಲ್ಪಿಸಬೇಕು ’ ಎಂದು ಸ್ಥಳೀಯರಾದ ಸಿದ್ದಪ್ಪ ಒತ್ತಾಯಿಸಿದರು.</p>.<p>ಬಾದಾಮಿಯಲ್ಲಿ ವಾಹನಗಳ ನಿಲುಗಡೆಗೆ ಪ್ರವಾಸೋದ್ಯಮ ಇಲಾಖೆಯು 9 ಎಕರೆ ಜಮೀನು ಖರೀದಿಸಿ ಎರಡು ವರ್ಷಗಳಾಗಿವೆ. ಆದರೆ ಕಾರ್ ಪಾರ್ಕಿಂಗ್ ಕಾಮಗಾರಿ ಆರಂಭವಾಗದೇ ಇಲ್ಲಿಯು ಸಹ ವಾಹನ ಚಾಲಕರು ಪರದಾಡುವಂತಾಗಿದೆ.</p>.<p>‘ಪಾರ್ಕಿಂಗ್ ಮಾಡಲು ಜಾಗವಿಲ್ಲದ ಕಾರಣದಿಂದ ಅಟೊ ಚಾಲಕರು ಪ್ರವಾಸಿಗರನ್ನು ಆಟೊದಲ್ಲಿ ಕರೆದೊಯ್ದು ಅವರಿಂದ ಹೆಚ್ಚಿನ ಹಣವನ್ನು ವಸೂಲಿ ಮಾಡುವರು.ಆಟೊ ಚಾಲಕರಿಗೆ ದರದ ನಿಗದಿಯಿಲ್ಲ. ಅಧಿಕಾರಿಗಳು ಸೂಕ್ತ ಕ್ರಮವನ್ನು ಕೈಗೊಳ್ಳಬೇಕಿದೆ ’ ಎಂದು ನಗರ ಅಭಿವೃದ್ಧಿ ಹೋರಾಟ ಸಮಿತಿ ಕಾರ್ಯದರ್ಶಿ ಇಷ್ಟಲಿಂಗ ನರೇಗಲ್ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.</p>.<p>‘ಬಾದಾಮಿ ಮತ್ತು ಪಟ್ಟದಕಲ್ಲಿನಲ್ಲಿ ಕಾರ್ ನಿಲ್ಲಿಸಲು ಜಾಗವಿಲ್ಲ ಇಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಅಭಿವೃದ್ಧಿ ಮಾಡಲು ಇಚ್ಛಾ ಶಕ್ತಿ ಬೇಕಿದೆ ’ ಎಂದು ತುಮಕೂರ ಪ್ರವಾಸಿ ಕೊಟ್ರೇಶ್ ಪ್ರತಿಕ್ರಿಯಿಸಿದರು.</p>.<p>ರಾಜ್ಯದ ವಿವಿಧ ಜಿಲ್ಲೆಗಳಿಂದ ಚಾಲುಕ್ಯರ ಪ್ರವಾಸಿ ತಾಣಗಳಾದ ಬಾದಾಮಿ, ಮಹಾಕೂಟ, ಪಟ್ಟದಕಲ್ಲು, ಐಹೊಳೆ , ಹುಲಿಗೆಮ್ಮನಕೊಳ್ಳ ಮತ್ತು ಧಾರ್ಮಿಕ ಕ್ಷೇತ್ರಗಳಾದ ಬನಶಂಕರಿ ಮತ್ತು ಶಿವಯೋಗಮಂದಿರಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಮತ್ತು ವಿದೇಶಿ ಪ್ರವಾಸಿಗರು ನಿತ್ಯ ಆಗಮಿಸುತ್ತಾರೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸೂಕ್ತ ಕ್ರಮವನ್ನು ಕೈಗೊಳ್ಳುವರೇ ಎಂದು ಪ್ರವಾಸಿಗರು ನಿರೀಕ್ಷೆಯಲ್ಲಿದ್ದಾರೆ.</p>.<p>‘ ಪಟ್ಟದಕಲ್ಲಿನಲ್ಲಿರುವ ಎರಡು ಎಕರೆ ಜಮೀನನ್ನು ಕೆ.ಎಸ್.ಟಿ.ಡಿ.ಸಿ ಗೆ ಹಸ್ತಾಂತರ ಮಾಡಲಾಗಿದೆ.ಅವರೇ ಕಾರ್ ಪಾರ್ಕಿಂಗ್ ಮಾಡುವರು. ಬಾದಾಮಿಯಲ್ಲಿ ಪಾರ್ಕಿಂಗ್ ಪ್ಲಾಜಾ ನಿರ್ಮಿಸಲು ಎಪಿಎಂಸಿಯ 9 ಎಕರೆ ಪ್ರವಾಸೋದ್ಯಮ ಇಲಾಖೆ ಖರೀದಿಸಿದೆ. ಎಂಜಿನಿಯರ್ ಬಂದು ವೀಕ್ಷಣೆ ಮಾಡಿದ್ದಾರೆ ’ ಎಂದು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಜಿ.ಎಸ್. ಹಿತ್ತಲಮನಿ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>