<p><strong>ಲೋಕಾಪುರ:</strong> ’ಜಿಲ್ಲೆಯ ಸಹಕಾರ ಸಕ್ಕರೆ ಕಾರ್ಖಾನೆ ಅಭಿವೃದ್ಧಿಗೆ ಕಾರ್ಮಿಕರ ಕೊಡುಗೆ ಅಪಾರ‘ ಎಂದು ಕಾಂಗ್ರೆಸ್ ಮುಖಂಡ ಬೀಳಗಿ ಶುಗರ್ಸ್ ಅಧ್ಯಕ್ಷ ಎಸ್.ಆರ್.ಪಾಟೀಲ ಹೇಳಿದರು.</p>.<p>ಸಮೀಪದ ತಿಮ್ಮಾಪೂರ ಗ್ರಾಮದ ರೈತರ ಸಹಕಾರ ಸಕ್ಕರೆ ಕಾರ್ಖಾನೆ ಆವರಣದಲ್ಲಿ ವಿಶ್ವ ಪರಿಸರ, ಕಾರ್ಮಿಕ ಕುಟುಂಬ ದಿನಾಚರಣೆ ಮತ್ತು ಗೀತಾಂಜಲಿ ತಾರಾ ಬಳಗ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.</p>.<p>‘ಕಾರ್ಖಾನೆಯ ಆರ್ಥಿಕ ಪರಿಸ್ಧಿತಿ ಸದೃಢಗೊಳ್ಳಲು ಎಲ್ಲ ಕಾರ್ಮಿಕರ ಪರಿಶ್ರಮ ಅಪಾರವಾಗಿದೆ. ಕಾರ್ಖಾನೆಯ ಆರ್ಥಿಕ ಸ್ಧಿತಿ ಬಲಗೊಂಡಾಗ ಮಾತ್ರ ಸಹಕಾರ ಕ್ಷೇತ್ರಕ್ಕೆ ಬಲ ಬರುತ್ತದೆ’ ಎಂದರು. </p>.<p>ಮಾನವ ಸಂಪನ್ಮೂಲ ಅಭಿವೃದ್ದಿ ಅಧಿಕಾರಿ ಮಾಧವರಾವ ಜೋಷಿ ಮಾತನಾಡಿ, ‘ಮುಚ್ಚಿದ್ದ ಕಾರ್ಖಾನೆಯನ್ನು ಎಸ್.ಆರ್. ಪಾಟೀಲ ಅವರ ನೇತೃತ್ವದಲ್ಲಿ ಪುನಚ್ಚೇತನಗೊಳಿಸಿ ರೈತರ, ಕಾರ್ಮಿಕರ ಹಿತ ಕಾಪಾಡಲಾಗಿದೆ’ ಎಂದು ತಿಳಿಸಿದರು. </p>.<p>ಬೀಳಗಿ ಶುಗರ್ಸ ನಿರ್ದೇಶ ಸುರೇಶಗೌಡ ಪಾಟೀಲ, ಹಣಮಂತಗೌಡ ಪಾಟೀಲ, ವಿಠಲ್ ತುಂಬರಮಟ್ಟಿ, ಮಂಜುನಾಥ ಅರಳಿಕಟ್ಟಿ, ಕಾರ್ಖಾನೆ ಅಧಿಕಾರಿಗಳಾದ ಆರ್.ಎಂ.ಪಾಟೀಲ, ಬಸವರಾಜ ಹುಣಸಿ, ಕಾರ್ಮಿಕ ಒಕ್ಕೂಟದ ಅಧ್ಯಕ್ಷ ಬಿ.ಜಿ.ಪಾಟೀಲ, ಕಾರ್ಯದರ್ಶಿ ಪ್ರಕಾಶ ಕಬ್ಬೂರ, ಎಸ್.ಜಿ.ಗುರವ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲೋಕಾಪುರ:</strong> ’ಜಿಲ್ಲೆಯ ಸಹಕಾರ ಸಕ್ಕರೆ ಕಾರ್ಖಾನೆ ಅಭಿವೃದ್ಧಿಗೆ ಕಾರ್ಮಿಕರ ಕೊಡುಗೆ ಅಪಾರ‘ ಎಂದು ಕಾಂಗ್ರೆಸ್ ಮುಖಂಡ ಬೀಳಗಿ ಶುಗರ್ಸ್ ಅಧ್ಯಕ್ಷ ಎಸ್.ಆರ್.ಪಾಟೀಲ ಹೇಳಿದರು.</p>.<p>ಸಮೀಪದ ತಿಮ್ಮಾಪೂರ ಗ್ರಾಮದ ರೈತರ ಸಹಕಾರ ಸಕ್ಕರೆ ಕಾರ್ಖಾನೆ ಆವರಣದಲ್ಲಿ ವಿಶ್ವ ಪರಿಸರ, ಕಾರ್ಮಿಕ ಕುಟುಂಬ ದಿನಾಚರಣೆ ಮತ್ತು ಗೀತಾಂಜಲಿ ತಾರಾ ಬಳಗ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.</p>.<p>‘ಕಾರ್ಖಾನೆಯ ಆರ್ಥಿಕ ಪರಿಸ್ಧಿತಿ ಸದೃಢಗೊಳ್ಳಲು ಎಲ್ಲ ಕಾರ್ಮಿಕರ ಪರಿಶ್ರಮ ಅಪಾರವಾಗಿದೆ. ಕಾರ್ಖಾನೆಯ ಆರ್ಥಿಕ ಸ್ಧಿತಿ ಬಲಗೊಂಡಾಗ ಮಾತ್ರ ಸಹಕಾರ ಕ್ಷೇತ್ರಕ್ಕೆ ಬಲ ಬರುತ್ತದೆ’ ಎಂದರು. </p>.<p>ಮಾನವ ಸಂಪನ್ಮೂಲ ಅಭಿವೃದ್ದಿ ಅಧಿಕಾರಿ ಮಾಧವರಾವ ಜೋಷಿ ಮಾತನಾಡಿ, ‘ಮುಚ್ಚಿದ್ದ ಕಾರ್ಖಾನೆಯನ್ನು ಎಸ್.ಆರ್. ಪಾಟೀಲ ಅವರ ನೇತೃತ್ವದಲ್ಲಿ ಪುನಚ್ಚೇತನಗೊಳಿಸಿ ರೈತರ, ಕಾರ್ಮಿಕರ ಹಿತ ಕಾಪಾಡಲಾಗಿದೆ’ ಎಂದು ತಿಳಿಸಿದರು. </p>.<p>ಬೀಳಗಿ ಶುಗರ್ಸ ನಿರ್ದೇಶ ಸುರೇಶಗೌಡ ಪಾಟೀಲ, ಹಣಮಂತಗೌಡ ಪಾಟೀಲ, ವಿಠಲ್ ತುಂಬರಮಟ್ಟಿ, ಮಂಜುನಾಥ ಅರಳಿಕಟ್ಟಿ, ಕಾರ್ಖಾನೆ ಅಧಿಕಾರಿಗಳಾದ ಆರ್.ಎಂ.ಪಾಟೀಲ, ಬಸವರಾಜ ಹುಣಸಿ, ಕಾರ್ಮಿಕ ಒಕ್ಕೂಟದ ಅಧ್ಯಕ್ಷ ಬಿ.ಜಿ.ಪಾಟೀಲ, ಕಾರ್ಯದರ್ಶಿ ಪ್ರಕಾಶ ಕಬ್ಬೂರ, ಎಸ್.ಜಿ.ಗುರವ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>