<p><strong>ಹೊಸಪೇಟೆ (ವಿಜಯನಗರ): </strong>ಹೊನ್ನೂರು ಸ್ವಾಮಿ ತಂಡದ ಸದಸ್ಯರು 'ಕಿತ್ತೂರು ದಂಗೆ' ನಾಟಕವನ್ನು ಸೋಮವಾರ ನಗರ ಹೊರವಲಯದ ಕಾರಿಗನೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರದರ್ಶಿಸಿದರು.</p>.<p>ಖಡಕ್ ಸಂಭಾಷಣೆ, ಪಾತ್ರಾಭಿನಯ ಎಲ್ಲರ ಗಮನ ಸೆಳೆಯಿತು. ಕಿತ್ತೂರು ದಂಗೆಯ ಪ್ರತಿಯೊಂದು ಕ್ಷಣವನ್ನು ಮೆಲುಕು ಹಾಕುವಂತೆ ಮಾಡಿದರು.</p>.<p>ಇದಕ್ಕೂ ಮುನ್ನ ಕೃತಿ ಆಕೃತಿ ಕಲಾ ಟ್ರಸ್ಟ್ ಮಾರ್ಗದರ್ಶಕ ಆನಂದ್ ಪುರೋಹಿತ್ ಮಾತನಾಡಿ, ‘ಐತಿಹಾಸಿಕ ಹೋರಾಟಗಳನ್ನು ನಾಟಕಗಳ ಮೂಲಕ ಪ್ರಸ್ತುತ ಪಡಿಸಿದಾಗ ಜನರಿಗೆ ನಮ್ಮ ಚರಿತ್ರೆ ಪರಿಚಯಿಸಿ ಕೊಟ್ಟಂತಾಗುತ್ತದೆ. ಹಾಗಾಗಿ ಐತಿಹಾಸಿಕ ರಂಗ ಪ್ರಯೋಗಗಳಿಗೆ ಹೆಚ್ಚಿನ ಒತ್ತು ಕೊಡಲಾಗುತ್ತಿದೆ’ ಎಂದು ತಿಳಿಸಿದರು.</p>.<p>‘ಜಾನಪದ ಹಾಗೂ ಇತರ ಕಲೆಗಳು ಪ್ರಸ್ತುತ ದಿನಗಳಲ್ಲಿ ಮರೆಯಾಗುತ್ತಿವೆ. ಕಲಾಸಕ್ತರಿಗೆ ಸದಭಿರುಚಿ ಜೊತೆಗೆ ಸಂದೇಶಗಳನ್ನು ತಲುಪಿಸಲು ಬೀದಿ ನಾಟಕ, ತೊಗಲು ಗೊಂಬೆ, ಯಕ್ಷಗಾನ ಮುಂತಾದ ಕಲಾ ಪ್ರಕಾರಗಳನ್ನು ಪ್ರದರ್ಶಿಸಿ ಉಳಿಸಬೇಕಿದೆ’ ಎಂದರು.</p>.<p>ತೊಗಲುಗೊಂಬೆ ಕಲಾವಿದ ನಾರಾಯಣಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಭಾರ ಮುಖ್ಯಶಿಕ್ಷಕ ಎಚ್.ಹೊನ್ನಪ್ಪ, ಎಸ್.ಡಿ.ಎಂ.ಸಿ. ಅಧ್ಯಕ್ಷ ಬಸವರಾಜ್, ಸೋಮಶೇಖರ್, ಭರತ್ಕುಮಾರ್.ಸಿ.ಆರ್, ನಾಗೇಂದ್ರ ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ (ವಿಜಯನಗರ): </strong>ಹೊನ್ನೂರು ಸ್ವಾಮಿ ತಂಡದ ಸದಸ್ಯರು 'ಕಿತ್ತೂರು ದಂಗೆ' ನಾಟಕವನ್ನು ಸೋಮವಾರ ನಗರ ಹೊರವಲಯದ ಕಾರಿಗನೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರದರ್ಶಿಸಿದರು.</p>.<p>ಖಡಕ್ ಸಂಭಾಷಣೆ, ಪಾತ್ರಾಭಿನಯ ಎಲ್ಲರ ಗಮನ ಸೆಳೆಯಿತು. ಕಿತ್ತೂರು ದಂಗೆಯ ಪ್ರತಿಯೊಂದು ಕ್ಷಣವನ್ನು ಮೆಲುಕು ಹಾಕುವಂತೆ ಮಾಡಿದರು.</p>.<p>ಇದಕ್ಕೂ ಮುನ್ನ ಕೃತಿ ಆಕೃತಿ ಕಲಾ ಟ್ರಸ್ಟ್ ಮಾರ್ಗದರ್ಶಕ ಆನಂದ್ ಪುರೋಹಿತ್ ಮಾತನಾಡಿ, ‘ಐತಿಹಾಸಿಕ ಹೋರಾಟಗಳನ್ನು ನಾಟಕಗಳ ಮೂಲಕ ಪ್ರಸ್ತುತ ಪಡಿಸಿದಾಗ ಜನರಿಗೆ ನಮ್ಮ ಚರಿತ್ರೆ ಪರಿಚಯಿಸಿ ಕೊಟ್ಟಂತಾಗುತ್ತದೆ. ಹಾಗಾಗಿ ಐತಿಹಾಸಿಕ ರಂಗ ಪ್ರಯೋಗಗಳಿಗೆ ಹೆಚ್ಚಿನ ಒತ್ತು ಕೊಡಲಾಗುತ್ತಿದೆ’ ಎಂದು ತಿಳಿಸಿದರು.</p>.<p>‘ಜಾನಪದ ಹಾಗೂ ಇತರ ಕಲೆಗಳು ಪ್ರಸ್ತುತ ದಿನಗಳಲ್ಲಿ ಮರೆಯಾಗುತ್ತಿವೆ. ಕಲಾಸಕ್ತರಿಗೆ ಸದಭಿರುಚಿ ಜೊತೆಗೆ ಸಂದೇಶಗಳನ್ನು ತಲುಪಿಸಲು ಬೀದಿ ನಾಟಕ, ತೊಗಲು ಗೊಂಬೆ, ಯಕ್ಷಗಾನ ಮುಂತಾದ ಕಲಾ ಪ್ರಕಾರಗಳನ್ನು ಪ್ರದರ್ಶಿಸಿ ಉಳಿಸಬೇಕಿದೆ’ ಎಂದರು.</p>.<p>ತೊಗಲುಗೊಂಬೆ ಕಲಾವಿದ ನಾರಾಯಣಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಭಾರ ಮುಖ್ಯಶಿಕ್ಷಕ ಎಚ್.ಹೊನ್ನಪ್ಪ, ಎಸ್.ಡಿ.ಎಂ.ಸಿ. ಅಧ್ಯಕ್ಷ ಬಸವರಾಜ್, ಸೋಮಶೇಖರ್, ಭರತ್ಕುಮಾರ್.ಸಿ.ಆರ್, ನಾಗೇಂದ್ರ ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>