‘ಗ್ರಾಮ ಪಂಚಾಯಿತಿಯವರು ಸಮಯ ಸಿಕ್ಕಾಗ ನೀರಿನ ಟ್ಯಾಂಕರ್ ತಂದು ಪ್ಲಾಟ್ನಲ್ಲಿ ನಿಲ್ಲಿಸುತ್ತಾರೆ. ಕೂಲಿ ಕೆಲಸಕ್ಕೆ ಹೋಗುವ ಜನರಿಗೆ ನೀರು ಸಿಗುವುದಿಲ್ಲ. ಅವರು ಹತ್ತಿರದ ಹೊಲ, ಗದ್ದೆಗಳಿಗೆ ಹೋಗಿ ನೀರು ತರುವಂತಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ ಸಮರ್ಪಕ ಕುಡಿಯುವ ನೀರು ಪೂರೈಕೆ ಮಾಡಬೇಕು’ ಎಂದು ಪ್ಲಾಟ್ ನಿವಾಸಿಗಳಾದ ವೀರೇಶ, ವಿ.ಬಿ.ಶರಣಪ್ಪ, ಅಂಕಮ್ಮನಹಳ್ಳಿ ಕೊಟ್ರೇಶ ಆಗ್ರಹಿಸಿದ್ದಾರೆ.