ಬಂಡ್ರಾಳು ಗ್ರಾಮದ ತಮ್ಮ 5ಎಕರೆ ತೊಗರಿ ಬೆಳೆಗೆ ಔಷಧಿಗಾಗಿ 3 ಕೆಜಿ ಹಸಿ ಶುಂಠಿ 3 ಕೆಜಿ ಬೆಳ್ಳುಳ್ಳಿ 3 ಕೆಜಿ ಹಸಿಮೆಣಸಿನ ಕಾಯಿ ಹಾಗೂ 3 ಕೆಜಿ ಉಳ್ಳಾಗಡ್ಡಿ ಇವುಗಳ ಮಿಶ್ರಣವನ್ನು ಮಾಡಿ 10 ಲೀಟರ್ ಗೋಮೂತ್ರದಲ್ಲಿ ನೆನೆ ಹಾಕಿ ಎಕರೆಗೆ 2.5 ಲೀಟರ್ ನಂತೆ ಡ್ರೋನ್ ಬಳಸಿ ಔಷಧಿ ಸಿಂಪರಣೆ ಮಾಡಲಾಗಿದೆ. ಔಷಧಿ ತಯಾರಿಕೆಗಾಗಿ ಕೇವಲ ₹400 ಖರ್ಚಾಗಿದೆ. ರಾಸಾಯನಿಕ ಗೊಬ್ಬರ ಕನಿಷ್ಟ 5 ರಿಂದ 6 ಸಾವಿರ ಖರ್ಚಾಗುತ್ತದೆ ಎನ್ನುತ್ತಾರೆ ರೈತ ವೀರೇಶ.