<p><strong>ಕುರುಗೋಡು:</strong> ಠಾಣಾ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಟ್ರಾಕ್ಟರ್ ಬ್ಯಾಟರಿಗಳನ್ನು ಕಳುವು ಮಾಡಿದ್ದ ಕಳ್ಳರನ್ನು ಬಂಧಿಸುವಲ್ಲಿ ಕುರುಗೋಡು ಪೊಲೀಸರು ಯಶಸ್ವಿಯಾಗಿದ್ದಾರೆ.</p>.<p>ಕುರುಗೋಡಿನ ಯೇಸು ಸ್ವಾಮಿ ಮತ್ತು ಜಡೇಶ, ವದ್ದಟ್ಟಿ ಗ್ರಾಮದ ಶಿವಪ್ಪ ಮತ್ತು ಸಿದ್ದಮ್ಮನಹಳ್ಳಿ ಗಾಮದ ತಿಪ್ಪಣ್ಣ ಬಂಧಿತರು.</p>.<p>27 ಬ್ಯಾಟರಿ, 1 ಅಪ್ಪಿಆಟೋ, 2 ಮೋಟರ್ ಬೈಕ್ ಸೇರಿ ₹೬.೫೦ ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.</p>.<p>ಪೊಲೀಸರು ಶುಕ್ರವಾರ ರಾತ್ರಿ ಗಸ್ತು ನಡೆಸುತ್ತಿರುವ ಸಂದರ್ಭದಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಇವರನ್ನು ಠಾಣೆಗೆ ಕರೆತಂದು ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಪ್ರಕರಣ ಬಯಲಾಗಿದೆ.</p>.<p>ಗೆಣಿಕೆಹಾಳು, ಬಾದನಹಟ್ಟಿ ಮತ್ತು ಎಚ್.ವೀರಾಪುರ ಗ್ರಾಮಗಳಲ್ಲಿ ಬ್ಯಾಟರಿ ಕಳ್ಳತನವಾದ ಕುರಿತು ಕುರುಗೋಡು ಮತ್ತು ಸಿರಿಗೇರಿ ಪೊಲೀಸ್ ಠಾಣೆಗಳಲ್ಲಿ ತಲಾ ೩ ಪ್ರಕರಣ ದಾಖಲಾಗಿದ್ದವು. ಪ್ರಕರಣ ಪತ್ತೆಹಚ್ಚಲು ತಂಡ ಸಚಿಸಲಾಗಿತ್ತು.</p>.<p>ಡಿವೈಎಸ್ಪಿ ಪ್ರಸಾದ್ ಗೋಖಲೆ, ಸಿಪಿಐ. ವಿಶ್ವನಾಥ ಕೆ.ಹಿರೇಗೌಡರ್, ಪಿಎಸ್ಐ ಸುಪ್ರಿತ್, ಮಹಿಳಾ ಪಿಎಸ್ಐ ಕರೆಮ್ಮ, ಸಿಬ್ಬಂದಿ ಶೇಕ್ಷಾವಲಿ, ಕುಮಾರಸ್ವಾಮಿ, ರಾಜಶೇಖರ, ವಿಜಯಕುಮಾರ್, ರೇವಣಶಿದ್ದೇಶ್ವರ ಆಂಜನೇಯ, ರಾಮಚಂದ್ರ, ಇರ್ಫಾನ್, ಪಕ್ಕೀರಪ್ಪ ಮತ್ತು ಶರಣಪ್ಪ ತಂಡ ಪ್ರಕರಣ ಪತ್ತೆಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುರುಗೋಡು:</strong> ಠಾಣಾ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಟ್ರಾಕ್ಟರ್ ಬ್ಯಾಟರಿಗಳನ್ನು ಕಳುವು ಮಾಡಿದ್ದ ಕಳ್ಳರನ್ನು ಬಂಧಿಸುವಲ್ಲಿ ಕುರುಗೋಡು ಪೊಲೀಸರು ಯಶಸ್ವಿಯಾಗಿದ್ದಾರೆ.</p>.<p>ಕುರುಗೋಡಿನ ಯೇಸು ಸ್ವಾಮಿ ಮತ್ತು ಜಡೇಶ, ವದ್ದಟ್ಟಿ ಗ್ರಾಮದ ಶಿವಪ್ಪ ಮತ್ತು ಸಿದ್ದಮ್ಮನಹಳ್ಳಿ ಗಾಮದ ತಿಪ್ಪಣ್ಣ ಬಂಧಿತರು.</p>.<p>27 ಬ್ಯಾಟರಿ, 1 ಅಪ್ಪಿಆಟೋ, 2 ಮೋಟರ್ ಬೈಕ್ ಸೇರಿ ₹೬.೫೦ ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.</p>.<p>ಪೊಲೀಸರು ಶುಕ್ರವಾರ ರಾತ್ರಿ ಗಸ್ತು ನಡೆಸುತ್ತಿರುವ ಸಂದರ್ಭದಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಇವರನ್ನು ಠಾಣೆಗೆ ಕರೆತಂದು ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಪ್ರಕರಣ ಬಯಲಾಗಿದೆ.</p>.<p>ಗೆಣಿಕೆಹಾಳು, ಬಾದನಹಟ್ಟಿ ಮತ್ತು ಎಚ್.ವೀರಾಪುರ ಗ್ರಾಮಗಳಲ್ಲಿ ಬ್ಯಾಟರಿ ಕಳ್ಳತನವಾದ ಕುರಿತು ಕುರುಗೋಡು ಮತ್ತು ಸಿರಿಗೇರಿ ಪೊಲೀಸ್ ಠಾಣೆಗಳಲ್ಲಿ ತಲಾ ೩ ಪ್ರಕರಣ ದಾಖಲಾಗಿದ್ದವು. ಪ್ರಕರಣ ಪತ್ತೆಹಚ್ಚಲು ತಂಡ ಸಚಿಸಲಾಗಿತ್ತು.</p>.<p>ಡಿವೈಎಸ್ಪಿ ಪ್ರಸಾದ್ ಗೋಖಲೆ, ಸಿಪಿಐ. ವಿಶ್ವನಾಥ ಕೆ.ಹಿರೇಗೌಡರ್, ಪಿಎಸ್ಐ ಸುಪ್ರಿತ್, ಮಹಿಳಾ ಪಿಎಸ್ಐ ಕರೆಮ್ಮ, ಸಿಬ್ಬಂದಿ ಶೇಕ್ಷಾವಲಿ, ಕುಮಾರಸ್ವಾಮಿ, ರಾಜಶೇಖರ, ವಿಜಯಕುಮಾರ್, ರೇವಣಶಿದ್ದೇಶ್ವರ ಆಂಜನೇಯ, ರಾಮಚಂದ್ರ, ಇರ್ಫಾನ್, ಪಕ್ಕೀರಪ್ಪ ಮತ್ತು ಶರಣಪ್ಪ ತಂಡ ಪ್ರಕರಣ ಪತ್ತೆಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>