<p><strong>ತೆಕ್ಕಲಕೋಟೆ:</strong> ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಲೊಕೇಷನ್ ಟ್ಯಾಗ್ ಗೊಂದಲದಿಂದಾಗಿ ಶಿಕ್ಷಕ ಕಾಡಿನ ಕುರಿಹಟ್ಟಿಗೆ ತಲುಪಿದ ಘಟನೆ ಗುರುವಾರ ನಡೆದಿದೆ.</p>.<p>ಇದರಿಂದ ಉಪ್ಪಾರ ಹೊಸಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮಂಜಪ್ಪ ಎಸ್. ಗೊಂದಲಕ್ಕೆ ಒಳಗಾದವರು.</p>.<p>ಪಟ್ಟಣದ ಹೊರವಲಯದ ದೇವಿನಗರದ19ನೇ ವಾರ್ಡಿನ ರೇವಣಸಿದ್ದಪ್ಪ ಬಡಾವಣೆಗೆ ಲೊಕೇಷನ್ ಟ್ಯಾಗ್ ಮೂಲಕ ತೆರಳಿದ ಶಿಕ್ಷಕ ಅಲ್ಲಿನ ಎರಡು ಮನೆಗಳ ನಂತರ ಮುಂದಿನ ಮನೆಗೆ ಲೊಕೆಷನ್ ಹಾಕಿದಾಗ 2-3 ಕಿಮೀ ದೂರದ ಹೊಲಗದ್ದೆಗಳ ನಡುವಿನ ಕುರಿ ಹಟ್ಟಿಗೆ ಕರೆದುಕೊಂಡು ಹೋಗಿದೆ.</p>.<p>ಅಲ್ಲಿ ಯಾವುದೇ ಯುಎಚ್ ಐಡಿ ಅಥವಾ ಯಾರೂ ವಾಸ ಇಲ್ಲದ ಕಾರಣ ವಾಪಸ್ ಬಂದಿದ್ದಾರೆ. ತಾವು ಅನುಭವಿಸಿದ ಮುಜುಗರ ಕುರಿತು ಫೋಟೊ ಮೂಲಕ ಹಂಚಿಕೊಂಡಿದ್ದು, ಅತಿಹೆಚ್ಚು ಹಂಚಿಕೆಯಾಗಿದೆ.</p>.<p>'ಮೂರು ಕಿಮೀ ನಡೆದುಕೊಂಡು ಹೋದರೆ ಅಲ್ಲಿ ಕುರಿಹಟ್ಟಿ ಇದೆ. ಮ್ಯಾಪಿಂಗ್ ಸಮಸ್ಯೆಯಿಂದ ನಿಯೋಜಿಸಿರುವ ಮನೆಗಳು ಲೋಕೆಷನ್ ನಲ್ಲಿ ಸಿಗದೇ ಮುಜುಗರ ಪಡುವಂತಾಗಿದೆ’ ಎಂದು ಶಿಕ್ಷಕ ಮಂಜಪ್ಪ ತಿಳಿಸಿದರು.</p>.<div><blockquote>ಸಮೀಕ್ಷೆಯ 1.34 ಆ್ಯಪ್ ನ ಹೊಸ ಆವೃತ್ತಿಯ ತಾಂತ್ರಿಕ ಸಮಸ್ಯೆಯಿಂದಾಗಿ ಈ ಗೊಂದಲ ಉಂಟಾಗಿರಬಹುದು. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಶೀಘ್ರವೇ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ </blockquote><span class="attribution">ಮಲ್ಲಿಕಾರ್ಜುನ ಕೆ. ಸಿರುಗುಪ್ಪ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೆಕ್ಕಲಕೋಟೆ:</strong> ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಲೊಕೇಷನ್ ಟ್ಯಾಗ್ ಗೊಂದಲದಿಂದಾಗಿ ಶಿಕ್ಷಕ ಕಾಡಿನ ಕುರಿಹಟ್ಟಿಗೆ ತಲುಪಿದ ಘಟನೆ ಗುರುವಾರ ನಡೆದಿದೆ.</p>.<p>ಇದರಿಂದ ಉಪ್ಪಾರ ಹೊಸಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮಂಜಪ್ಪ ಎಸ್. ಗೊಂದಲಕ್ಕೆ ಒಳಗಾದವರು.</p>.<p>ಪಟ್ಟಣದ ಹೊರವಲಯದ ದೇವಿನಗರದ19ನೇ ವಾರ್ಡಿನ ರೇವಣಸಿದ್ದಪ್ಪ ಬಡಾವಣೆಗೆ ಲೊಕೇಷನ್ ಟ್ಯಾಗ್ ಮೂಲಕ ತೆರಳಿದ ಶಿಕ್ಷಕ ಅಲ್ಲಿನ ಎರಡು ಮನೆಗಳ ನಂತರ ಮುಂದಿನ ಮನೆಗೆ ಲೊಕೆಷನ್ ಹಾಕಿದಾಗ 2-3 ಕಿಮೀ ದೂರದ ಹೊಲಗದ್ದೆಗಳ ನಡುವಿನ ಕುರಿ ಹಟ್ಟಿಗೆ ಕರೆದುಕೊಂಡು ಹೋಗಿದೆ.</p>.<p>ಅಲ್ಲಿ ಯಾವುದೇ ಯುಎಚ್ ಐಡಿ ಅಥವಾ ಯಾರೂ ವಾಸ ಇಲ್ಲದ ಕಾರಣ ವಾಪಸ್ ಬಂದಿದ್ದಾರೆ. ತಾವು ಅನುಭವಿಸಿದ ಮುಜುಗರ ಕುರಿತು ಫೋಟೊ ಮೂಲಕ ಹಂಚಿಕೊಂಡಿದ್ದು, ಅತಿಹೆಚ್ಚು ಹಂಚಿಕೆಯಾಗಿದೆ.</p>.<p>'ಮೂರು ಕಿಮೀ ನಡೆದುಕೊಂಡು ಹೋದರೆ ಅಲ್ಲಿ ಕುರಿಹಟ್ಟಿ ಇದೆ. ಮ್ಯಾಪಿಂಗ್ ಸಮಸ್ಯೆಯಿಂದ ನಿಯೋಜಿಸಿರುವ ಮನೆಗಳು ಲೋಕೆಷನ್ ನಲ್ಲಿ ಸಿಗದೇ ಮುಜುಗರ ಪಡುವಂತಾಗಿದೆ’ ಎಂದು ಶಿಕ್ಷಕ ಮಂಜಪ್ಪ ತಿಳಿಸಿದರು.</p>.<div><blockquote>ಸಮೀಕ್ಷೆಯ 1.34 ಆ್ಯಪ್ ನ ಹೊಸ ಆವೃತ್ತಿಯ ತಾಂತ್ರಿಕ ಸಮಸ್ಯೆಯಿಂದಾಗಿ ಈ ಗೊಂದಲ ಉಂಟಾಗಿರಬಹುದು. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಶೀಘ್ರವೇ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ </blockquote><span class="attribution">ಮಲ್ಲಿಕಾರ್ಜುನ ಕೆ. ಸಿರುಗುಪ್ಪ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>