ಸಾಗಾಟದ ಬಾಡಿಗೆಯೇ ರೈತರಿಗೆ ಹೊರೆಯಾಗಲಿದೆ. ಇದರಲ್ಲಿ ರೈತರಿಗೆ ಉಳಿಯುವುದು ಏನು. ನೋಂದಣಿ ಕೇಂದ್ರಗಳಲ್ಲೇ ಖರೀದಿ ಆಗಬೇಕು. ಒಂದು ವೇಳೆ ಧಾರವಾಡಕ್ಕೆ ಹೋದ ಬಳಿಕ ತೇವಾಂಶ ಹೆಚ್ಚಿದೆ ಎಂದು ನಿರಾಕರಿಸಿದರೆ ಆಗ ರೈತ ಏನು ಮಾಡಬೇಕು?
-ಮಾಧವ ರೆಡ್ಡಿ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ
ಒಕ್ಕೂಟಗಳಿಗೆ ಕೆಎಂಎಫ್ ನೀಡಿದ ಸೂಚನೆಯಂತೆ ರೈತರಿಂದ ಮೆಕ್ಕೆ ಜೋಳ ಖರೀದಿಗೆ ನೋಂದಣಿ ಮಾಡಿಕೊಳ್ಳಲಾಗಿದೆ. ಫಸಲು ಸಾಗಣೆ ಬಗ್ಗೆ ಕೆಎಂಎಫ್ನಿಂದ ಯಾವುದೇ ಸೂಚನೆ ಬಂದಿಲ್ಲ. ಸೂಚನೆ ಬಂದರೆ ಅದರಂತೆ ನಡೆದುಕೊಳ್ಳಲಾಗುವುದು.