<p><strong>ಬಳ್ಳಾರಿ:</strong> ನಗರದ 17ನೇ ವಾರ್ಡ್ನ ಹನುಮಾನ್ ನಗರದಲ್ಲಿ ಶುಕ್ರವಾರ ಬೀದಿ ನಾಯಿಗಳು ಮೂವರ ಮೇಲೆ ದಾಳಿ ನಡೆಸಿ ಗಾಯಗೊಳಿಸಿವೆ.</p>.<p>ಬೀದಿಯಲ್ಲಿ ನಡೆದು ಹೋಗುವ ಚಿಕ್ಕಮಕ್ಕಳನ್ನೇ ಗುರಿಯಾಗಿಸಿ ನಾಯಿಗಳು ದಾಳಿ ನಡೆಸಿರುವುದು ಶಂಕರ್ ಎಂಬುವವರ ಮನೆಯ ಸಿಸಿ ಕ್ಯಾಮೆರಾದ ದೃಶ್ಯಾವಳಿಗಳಿಂದ ಗೊತ್ತಾಗಿದೆ. ವಿಷಯ ತಿಳಿಯುತ್ತಲೇ ಪಾಲಿಕೆಯ ತಂಡವೊಂದು ಸ್ಥಳಕ್ಕೆ ಆಗಮಿಸಿ ಸಮಸ್ಯಾತ್ಮಕವಾಗಿದ್ದ ನಾಯಿಗಳನ್ನು ಸೆರೆಹಿಡಿದಿದ್ದಾರೆ. </p>.<p>ನಾಯಿಗಳ ಹಾವಳಿಗೆ ಆಕ್ರೋಶ ವ್ಯಕ್ತಪಡಿಸಿರುವ ಸಾರ್ವಜನಿಕರು, ಅವುಗಳನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಪಾಲಿಕೆಯನ್ನು ಆಗ್ರಹಿಸಿದರು. </p>.<p>ಇನ್ನು ಈ ಕುರಿತು ಪ್ರಜಾವಾಣಿಗೆ ಪ್ರತಿಕ್ರಿಯಿಸಿರುವ ಪಾಲಿಕೆ ಆಯುಕ್ತ ಮಂಜುನಾಥ್, ‘ನಗರದಲ್ಲಿ ಒಟ್ಟು 8 ಸಾವಿರ ನಾಯಿಗಳನ್ನು ಹಿಡಿದು ಅವುಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿ, ಲಸಿಕೆ ಹಾಕಿಸಿ ಬಿಡುವ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿದೆ. ನಿತ್ಯ ಈ ಕಾರ್ಯ ನಡೆಯುತ್ತಿದೆ. ಇಂದು ನಡೆದ ಘಟನೆ ಗಂಭೀರವಾಗಿದ್ದ ಕಾರಣ ಕೂಡಲೇ ತಂಡವೊಂದನ್ನು ಸ್ಥಳಕ್ಕೆ ಕಳುಹಿಸಿ ನಿರ್ದಿಷ್ಠ ನಾಯಿಗಳನ್ನು ಹಿಡಿಸಲಾಗಿದೆ. ನಾಯಿಗಳ ನಿಯಂತ್ರಣಕ್ಕೆ ಪಾಲಿಕೆ ಶ್ರಮಿಸುತ್ತಿದೆ’ ಎಂದು ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ:</strong> ನಗರದ 17ನೇ ವಾರ್ಡ್ನ ಹನುಮಾನ್ ನಗರದಲ್ಲಿ ಶುಕ್ರವಾರ ಬೀದಿ ನಾಯಿಗಳು ಮೂವರ ಮೇಲೆ ದಾಳಿ ನಡೆಸಿ ಗಾಯಗೊಳಿಸಿವೆ.</p>.<p>ಬೀದಿಯಲ್ಲಿ ನಡೆದು ಹೋಗುವ ಚಿಕ್ಕಮಕ್ಕಳನ್ನೇ ಗುರಿಯಾಗಿಸಿ ನಾಯಿಗಳು ದಾಳಿ ನಡೆಸಿರುವುದು ಶಂಕರ್ ಎಂಬುವವರ ಮನೆಯ ಸಿಸಿ ಕ್ಯಾಮೆರಾದ ದೃಶ್ಯಾವಳಿಗಳಿಂದ ಗೊತ್ತಾಗಿದೆ. ವಿಷಯ ತಿಳಿಯುತ್ತಲೇ ಪಾಲಿಕೆಯ ತಂಡವೊಂದು ಸ್ಥಳಕ್ಕೆ ಆಗಮಿಸಿ ಸಮಸ್ಯಾತ್ಮಕವಾಗಿದ್ದ ನಾಯಿಗಳನ್ನು ಸೆರೆಹಿಡಿದಿದ್ದಾರೆ. </p>.<p>ನಾಯಿಗಳ ಹಾವಳಿಗೆ ಆಕ್ರೋಶ ವ್ಯಕ್ತಪಡಿಸಿರುವ ಸಾರ್ವಜನಿಕರು, ಅವುಗಳನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಪಾಲಿಕೆಯನ್ನು ಆಗ್ರಹಿಸಿದರು. </p>.<p>ಇನ್ನು ಈ ಕುರಿತು ಪ್ರಜಾವಾಣಿಗೆ ಪ್ರತಿಕ್ರಿಯಿಸಿರುವ ಪಾಲಿಕೆ ಆಯುಕ್ತ ಮಂಜುನಾಥ್, ‘ನಗರದಲ್ಲಿ ಒಟ್ಟು 8 ಸಾವಿರ ನಾಯಿಗಳನ್ನು ಹಿಡಿದು ಅವುಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿ, ಲಸಿಕೆ ಹಾಕಿಸಿ ಬಿಡುವ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿದೆ. ನಿತ್ಯ ಈ ಕಾರ್ಯ ನಡೆಯುತ್ತಿದೆ. ಇಂದು ನಡೆದ ಘಟನೆ ಗಂಭೀರವಾಗಿದ್ದ ಕಾರಣ ಕೂಡಲೇ ತಂಡವೊಂದನ್ನು ಸ್ಥಳಕ್ಕೆ ಕಳುಹಿಸಿ ನಿರ್ದಿಷ್ಠ ನಾಯಿಗಳನ್ನು ಹಿಡಿಸಲಾಗಿದೆ. ನಾಯಿಗಳ ನಿಯಂತ್ರಣಕ್ಕೆ ಪಾಲಿಕೆ ಶ್ರಮಿಸುತ್ತಿದೆ’ ಎಂದು ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>