<p><strong>ತೆಕ್ಕಲಕೋಟೆ</strong>: ‘ಪಟ್ಟಣ ವ್ಯಾಪ್ತಿಯ ಬಂಗಾರಾಜು ಕ್ಯಾಂಪ್ನಲ್ಲಿ 10 ದಿನಗಳಿಂದ ಕುಡಿಯುವ ನೀರು ಸರಬರಾಜಾಗದೆ ತೊಂದರೆ ಉಂಟಾಗಿದೆ’ ಎಂದಯ ಸ್ಥಳೀಯ ನಿವಾಸಿಗಳು ಆರೋಪಿಸಿದರು.</p>.<p>‘ಬಲಕುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕ್ಯಾ೦ಪ್ನಲ್ಲಿ ಜಲಜೀವನ್ ಮಿಷನ್ ಅಡಿ ಜುಲೈನಲ್ಲಿ ನೀರು ಸರಬರಾಜು ಆರಂಭಿಸಿದ್ದರೂ, ಈ ಯೋಜನೆಗೆ ಗ್ರಾಮ ಪಂಚಾಯಿತಿಯು ಆರ್ಆರ್ ಸಂಖ್ಯೆ ಪಡೆಯದ ಕಾರಣ ಜೆಸ್ಕಾಂ ವಿದ್ಯುತ್ ಸಂಪರ್ಕ ಕಡಿತಗೊಳಿಸಿದೆ. ಇದರಿಂದಾಗಿ ಕುಡಿಯಲು ನೀರು ಇಲ್ಲದೆ ಪರದಾಡುವಂತಾಗಿದೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.</p>.<p>‘ನೀರಿನ ಸರಬರಾಜು ವ್ಯವಸ್ಥೆಗೆ ವಿದ್ಯುತ್ ಸಂಪರ್ಕವನ್ನು ಅಧಿಕಾರಿಗಳು ಕಡಿತಗೊಳಿಸಿದ್ದು, ಇದರಿಂದ ನಮಗೆ ಬೋರ್ವೆಲ್ ನೀರೇ ಗತಿಯಾಗಿದೆ. ಅಧಿಕಾರಿಗಳು ಜವಾಬ್ದಾರಿ ಮರೆತು, ಸಾರ್ವಜನಿಕರಿಗೆ ಸಮಸ್ಯೆ ಮಾಡುವುದು ಸರಿಯೇ’ ಎಂದು ಗಾಮಸ್ಥೆ ಅಂಬಮ್ಮ ಪ್ರಶ್ನಿಸಿದರು.</p>.<p>ಕುಡಿಯುವ ನೀರು ಸರಬರಾಜು ಮಾಡುವಲ್ಲಿ ಶೀಗ್ರ ಕ್ರಮ ಕೈಗೊಳ್ಳದಿದ್ದರೆ ಗ್ರಾಮ ಪಂಚಾಯಿತಿ ಮುಂದೆ ಧರಣಿ ನಡೆಸಲಾಗುವುದು ಎಂದೂ ಗ್ರಾಮಸ್ಥರು ಎಚ್ಚರಿಸಿದ್ದಾರೆ.</p>.<p>ಗ್ರಾಮಸ್ಥರಾದ ಡಿ. ದೇವೀರಮ್ಮ, ಟಿ. ಚಂದ್ರಮ್ಮ, ಗೊರವರ ನಾಗಮ್ಮ, ಈರಮ್ಮ, ಟಿ. ಬಸವರಾಜ, ಕೆ. ಕಾಳಿಂಗ, ರಾಮರಾಜು, ಕೆ. ವೀರೇಶ, ರಾಘವೇಂದ್ರ, ವೀರೇಶ ಡಿ. ಇದ್ದರು.</p>.<div><blockquote>ವಿದ್ಯುತ್ ಸಮಸ್ಯೆ ಕುರಿತು ತಾಲ್ಲೂಕು ಪಂಚಾಯಿತಿ ಇ.ಒ. ಹಾಗೂ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಗಮನಕ್ಕೆ ತರಲಾಗಿದೆ</blockquote><span class="attribution">ವೀರಪ್ಪ ಪಿಡಿಒ ಬಲಕುಂದಿ ಗ್ರಾಮ ಪಂಚಾಯಿತಿ </span></div>.<div><blockquote>ಗ್ರಾಮ ಪಂಚಾಯಿತಿಯವರು ಈವರೆಗೆ ಆರ್.ಆರ್. ನಂಬರ್ ಪಡೆಯದೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದಾರೆ. ಅರ್ಜಿ ಸಲ್ಲಿಸಿದರೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು</blockquote><span class="attribution">ಯಲ್ಲಪ್ಪ ಜೆಸ್ಕಾಂ ಸಹಾಯಕ ಎಂಜಿನಿಯರ್ ತೆಕ್ಕಲಕೋಟೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೆಕ್ಕಲಕೋಟೆ</strong>: ‘ಪಟ್ಟಣ ವ್ಯಾಪ್ತಿಯ ಬಂಗಾರಾಜು ಕ್ಯಾಂಪ್ನಲ್ಲಿ 10 ದಿನಗಳಿಂದ ಕುಡಿಯುವ ನೀರು ಸರಬರಾಜಾಗದೆ ತೊಂದರೆ ಉಂಟಾಗಿದೆ’ ಎಂದಯ ಸ್ಥಳೀಯ ನಿವಾಸಿಗಳು ಆರೋಪಿಸಿದರು.</p>.<p>‘ಬಲಕುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕ್ಯಾ೦ಪ್ನಲ್ಲಿ ಜಲಜೀವನ್ ಮಿಷನ್ ಅಡಿ ಜುಲೈನಲ್ಲಿ ನೀರು ಸರಬರಾಜು ಆರಂಭಿಸಿದ್ದರೂ, ಈ ಯೋಜನೆಗೆ ಗ್ರಾಮ ಪಂಚಾಯಿತಿಯು ಆರ್ಆರ್ ಸಂಖ್ಯೆ ಪಡೆಯದ ಕಾರಣ ಜೆಸ್ಕಾಂ ವಿದ್ಯುತ್ ಸಂಪರ್ಕ ಕಡಿತಗೊಳಿಸಿದೆ. ಇದರಿಂದಾಗಿ ಕುಡಿಯಲು ನೀರು ಇಲ್ಲದೆ ಪರದಾಡುವಂತಾಗಿದೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.</p>.<p>‘ನೀರಿನ ಸರಬರಾಜು ವ್ಯವಸ್ಥೆಗೆ ವಿದ್ಯುತ್ ಸಂಪರ್ಕವನ್ನು ಅಧಿಕಾರಿಗಳು ಕಡಿತಗೊಳಿಸಿದ್ದು, ಇದರಿಂದ ನಮಗೆ ಬೋರ್ವೆಲ್ ನೀರೇ ಗತಿಯಾಗಿದೆ. ಅಧಿಕಾರಿಗಳು ಜವಾಬ್ದಾರಿ ಮರೆತು, ಸಾರ್ವಜನಿಕರಿಗೆ ಸಮಸ್ಯೆ ಮಾಡುವುದು ಸರಿಯೇ’ ಎಂದು ಗಾಮಸ್ಥೆ ಅಂಬಮ್ಮ ಪ್ರಶ್ನಿಸಿದರು.</p>.<p>ಕುಡಿಯುವ ನೀರು ಸರಬರಾಜು ಮಾಡುವಲ್ಲಿ ಶೀಗ್ರ ಕ್ರಮ ಕೈಗೊಳ್ಳದಿದ್ದರೆ ಗ್ರಾಮ ಪಂಚಾಯಿತಿ ಮುಂದೆ ಧರಣಿ ನಡೆಸಲಾಗುವುದು ಎಂದೂ ಗ್ರಾಮಸ್ಥರು ಎಚ್ಚರಿಸಿದ್ದಾರೆ.</p>.<p>ಗ್ರಾಮಸ್ಥರಾದ ಡಿ. ದೇವೀರಮ್ಮ, ಟಿ. ಚಂದ್ರಮ್ಮ, ಗೊರವರ ನಾಗಮ್ಮ, ಈರಮ್ಮ, ಟಿ. ಬಸವರಾಜ, ಕೆ. ಕಾಳಿಂಗ, ರಾಮರಾಜು, ಕೆ. ವೀರೇಶ, ರಾಘವೇಂದ್ರ, ವೀರೇಶ ಡಿ. ಇದ್ದರು.</p>.<div><blockquote>ವಿದ್ಯುತ್ ಸಮಸ್ಯೆ ಕುರಿತು ತಾಲ್ಲೂಕು ಪಂಚಾಯಿತಿ ಇ.ಒ. ಹಾಗೂ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಗಮನಕ್ಕೆ ತರಲಾಗಿದೆ</blockquote><span class="attribution">ವೀರಪ್ಪ ಪಿಡಿಒ ಬಲಕುಂದಿ ಗ್ರಾಮ ಪಂಚಾಯಿತಿ </span></div>.<div><blockquote>ಗ್ರಾಮ ಪಂಚಾಯಿತಿಯವರು ಈವರೆಗೆ ಆರ್.ಆರ್. ನಂಬರ್ ಪಡೆಯದೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದಾರೆ. ಅರ್ಜಿ ಸಲ್ಲಿಸಿದರೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು</blockquote><span class="attribution">ಯಲ್ಲಪ್ಪ ಜೆಸ್ಕಾಂ ಸಹಾಯಕ ಎಂಜಿನಿಯರ್ ತೆಕ್ಕಲಕೋಟೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>