<p><strong>ಆನೇಕಲ್: </strong>ತಾಲ್ಲೂಕಿನ ಕಲ್ಲುಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೈಸೂರಮ್ಮನ ದೊಡ್ಡಿ ಕೆರೆಯಲ್ಲಿ ಶನಿವಾರ ಮೀನುಗಳ ಮಾರಣಹೋಮವಾಗಿದ್ದು, ತ್ಯಾಜ್ಯ ಮತ್ತು ಕಲುಷಿತ ನೀರಿನಿಂದಾಗಿ ಮೀನುಗಳು ಮೃತಪಟ್ಟಿವೆ ಎಂದು ಶಂಕಿಸಲಾಗಿದೆ.</p>.<p>ಮೈಸೂರಮ್ಮನ ದೊಡ್ಡಿಯ ಕೆರೆಯಲ್ಲಿ ಅಪಾರ್ಟ್ಮೆಂಟ್ಗಳ ತ್ಯಾಜ್ಯ ನೀರು ಮತ್ತು ಕಲುಷಿತ ನೀರು ಹರಿದಿದ್ದರಿಂದ ಮೀನುಗಳು ಮರಣ ಹೊಂದಿವೆ ಎಂದು ಶಂಕಿಸಲಾಗಿದೆ. ನೂರಾರು ಮೀನುಗಳು ಕೆರೆಯಲ್ಲಿ ಮೃತಪಟ್ಟಿವೆ. ಸ್ಥಳೀಯರು ಮೀನುಗಳು ಕೆರೆಯಿಂದ ಹೊರ ತೆಗೆಯುತ್ತಿದ್ದ ದೃಶ್ಯ ಕಂಡು ಬಂದಿತು.</p>.<p>ಮೀನುಗಳ ಮಾರಣಹೋಮದಿಂದ ಗ್ರಾಮಸ್ಥರು ಆಕ್ರೋಶಗೊಂಡಿದ್ದು, ಮೈಸೂರಮ್ಮನ ದೊಡ್ಡಿ ಕೆರೆಯು ಜಿಗಣಿ ಕೈಗಾರಿಕೆಗೆ ಸಮೀಪದಲ್ಲಿದೆ. ಕೆರೆಗೆ ತ್ಯಾಜ್ಯ ಮತ್ತು ಕಲುಷಿತ ನೀರು ಹರಿಯುತ್ತಿರುವುದರಿಂದ ಕೆರೆಯು ಜಲಚರಗಳ ಮೃತ್ಯೂಕೂಪವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.</p>.<p>ಮೈಸೂರಮ್ಮನ ದೊಡ್ಡಿ ಕೆರೆಯು ಸುತ್ತಮುತ್ತಲ ಕೃಷಿ ಜಮೀನುಗಳಿಗೆ ಜಲಮೂಲವಾಗಿತ್ತು. ಜಾನುವಾರುಗಳಿಗೆ ನೀರು ನೀಡುತ್ತಿತ್ತು. ಆದರೆ ಕೆರೆಗೆ ತ್ಯಾಜ್ಯ ನೀರು ಹರಿಯುತ್ತಿರುವುದರಿಂದ ಮೀನುಗಳು ಸತ್ತಿವೆ. ಮೀನುಗಳು ಸತ್ತಿರುವುದರಿಂದ ಸುತ್ತಮುತ್ತ ದುರ್ವಾಸನೆ ಬೀರುತ್ತಿದೆ. ಇದರಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆನೇಕಲ್: </strong>ತಾಲ್ಲೂಕಿನ ಕಲ್ಲುಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೈಸೂರಮ್ಮನ ದೊಡ್ಡಿ ಕೆರೆಯಲ್ಲಿ ಶನಿವಾರ ಮೀನುಗಳ ಮಾರಣಹೋಮವಾಗಿದ್ದು, ತ್ಯಾಜ್ಯ ಮತ್ತು ಕಲುಷಿತ ನೀರಿನಿಂದಾಗಿ ಮೀನುಗಳು ಮೃತಪಟ್ಟಿವೆ ಎಂದು ಶಂಕಿಸಲಾಗಿದೆ.</p>.<p>ಮೈಸೂರಮ್ಮನ ದೊಡ್ಡಿಯ ಕೆರೆಯಲ್ಲಿ ಅಪಾರ್ಟ್ಮೆಂಟ್ಗಳ ತ್ಯಾಜ್ಯ ನೀರು ಮತ್ತು ಕಲುಷಿತ ನೀರು ಹರಿದಿದ್ದರಿಂದ ಮೀನುಗಳು ಮರಣ ಹೊಂದಿವೆ ಎಂದು ಶಂಕಿಸಲಾಗಿದೆ. ನೂರಾರು ಮೀನುಗಳು ಕೆರೆಯಲ್ಲಿ ಮೃತಪಟ್ಟಿವೆ. ಸ್ಥಳೀಯರು ಮೀನುಗಳು ಕೆರೆಯಿಂದ ಹೊರ ತೆಗೆಯುತ್ತಿದ್ದ ದೃಶ್ಯ ಕಂಡು ಬಂದಿತು.</p>.<p>ಮೀನುಗಳ ಮಾರಣಹೋಮದಿಂದ ಗ್ರಾಮಸ್ಥರು ಆಕ್ರೋಶಗೊಂಡಿದ್ದು, ಮೈಸೂರಮ್ಮನ ದೊಡ್ಡಿ ಕೆರೆಯು ಜಿಗಣಿ ಕೈಗಾರಿಕೆಗೆ ಸಮೀಪದಲ್ಲಿದೆ. ಕೆರೆಗೆ ತ್ಯಾಜ್ಯ ಮತ್ತು ಕಲುಷಿತ ನೀರು ಹರಿಯುತ್ತಿರುವುದರಿಂದ ಕೆರೆಯು ಜಲಚರಗಳ ಮೃತ್ಯೂಕೂಪವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.</p>.<p>ಮೈಸೂರಮ್ಮನ ದೊಡ್ಡಿ ಕೆರೆಯು ಸುತ್ತಮುತ್ತಲ ಕೃಷಿ ಜಮೀನುಗಳಿಗೆ ಜಲಮೂಲವಾಗಿತ್ತು. ಜಾನುವಾರುಗಳಿಗೆ ನೀರು ನೀಡುತ್ತಿತ್ತು. ಆದರೆ ಕೆರೆಗೆ ತ್ಯಾಜ್ಯ ನೀರು ಹರಿಯುತ್ತಿರುವುದರಿಂದ ಮೀನುಗಳು ಸತ್ತಿವೆ. ಮೀನುಗಳು ಸತ್ತಿರುವುದರಿಂದ ಸುತ್ತಮುತ್ತ ದುರ್ವಾಸನೆ ಬೀರುತ್ತಿದೆ. ಇದರಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>