ಕಳೆದ ವರ್ಷ ಕೆಲವೆಡೆ ಮುಸುಕಿನ ಜೋಳಕ್ಕೆ ಸೈನಿಕ ಹುಳುವಿನ ಬಾಧೆ ಕಾಡಿತ್ತು. ಆದರೆ, ಈ ಬಾರಿ ನೆಲಮಂಗಲ ತಾಲ್ಲೂಕಿನ ಉದ್ದಕ್ಕೂ ವ್ಯಾಪಿಸಿಕೊಂಡಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಪೂರ್ವಮುಂಗಾರು ಮಳೆ ಪ್ರತಿವರ್ಷಕ್ಕಿಂತ ಸರಾಸರಿ ಕಡಿಮೆ ಪ್ರಮಾಣದಲ್ಲಿ ಬಿದ್ದಿದೆ. ಹಲವು ರೈತರು ಒಂದೆರಡು ಮಳೆಗೆ ಭೂಮಿ ಹಸನು ಮಾಡಿಕೊಂಡು ಜಾನುವಾರುಗಳ ಮೇವಿಗಾಗಿ ಮುಸುಕಿನ ಜೋಳ ಬಿತ್ತನೆ ಮಾಡಿದ್ದರು.