<p><strong>ಆನೇಕಲ್: </strong>ತಾಲೂಕಿನ ಚಂದಾಪುರದ ಶಿವಾಲಯ ನಾಟ್ಯಮಂದಿರದ 12ನೇ ವಾರ್ಷಿಕೋತ್ಸವ ಸಮರ್ಪಣಾಮ್ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳು ಆಕರ್ಷಕ ಭರತನಾಟ್ಯ ನೃತ್ಯವನ್ನು ಪ್ರದರ್ಶಿಸಿದರು.</p>.<p>ಶಿವಾಲಯ ನಾಟ್ಯಮಂದಿರದ ವಿದ್ಯಾರ್ಥಿಗಳ ದಶಾವತಾರ ನೃತ್ಯ ಪ್ರದರ್ಶನ ಪ್ರೇಕ್ಷಕರ ಕಣ್ಮನ ಸೆಳೆಯಿತು. ದಶಾವತಾರದ ಒಂದೊಂದು ಅವತಾರವು ನೃತ್ಯರೂಪಕದಲ್ಲಿ ಪ್ರದರ್ಶನವಾಗುತ್ತಿದ್ದಂತೆ ಪ್ರೇಕ್ಷಕರು ಚಪ್ಪಾಳೆ ತಟ್ಟಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಮತ್ಸ್ಯಾ, ವರಹ ಮತ್ತು ನರಸಿಂಹ ಅವತಾರ ನೋಡುಗರಲ್ಲಿ ಭಕ್ತಿ, ಭಾವ ಮೂಡಿಸಿತು.</p>.<p>ಭರತನಾಟ್ಯ ಕೇವಲ ವೃತ್ತಿವಲ್ಲ, ಭಕ್ತಿ ಮತ್ತು ಧ್ಯಾನದ ರೂಪಕವಾಗಿದೆ. ವಿದ್ಯಾರ್ಥಿಗಳು ಸಂಸ್ಕೃತಿಯನ್ನು ಸಂರಕ್ಷಿಸುವ ಸಲುವಾಗಿ ಭರತನಾಟ್ಯ, ಕರ್ನಾಟಿಕ್ ಸಂಗೀತ, ಸಾಹಿತ್ಯ, ಸಂಗೀತ ಸೇರಿದಂತೆ ವಿವಿಧ ಕಲೆಗಳನ್ನು ಅಭ್ಯಾಸ ಮಾಡಬೇಕು ಎಂದು ಶಿವಾಲಯ ನಾಟ್ಯಮಂದಿರದ ಮುಖ್ಯಸ್ಥೆ ಮಂಜುಳಾ ಹೇಳಿದರು.</p>.<p>ನೃತ್ಯ ಕಲಾವಿದರಾದ ಡಾ.ಸಂಧ್ಯಾ ರವಿ, ಭಾನುಪ್ರಿಯ ರಾಕೇಶ್, ಶಿವಾಲಯ ಆರ್ಟ್ಸ್ ಅಂಡ್ ಕಲ್ಚರಲ್ ಟ್ರಸ್ಟ್ ನ ಅಧ್ಯಕ್ಷ ಜಗದೀಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆನೇಕಲ್: </strong>ತಾಲೂಕಿನ ಚಂದಾಪುರದ ಶಿವಾಲಯ ನಾಟ್ಯಮಂದಿರದ 12ನೇ ವಾರ್ಷಿಕೋತ್ಸವ ಸಮರ್ಪಣಾಮ್ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳು ಆಕರ್ಷಕ ಭರತನಾಟ್ಯ ನೃತ್ಯವನ್ನು ಪ್ರದರ್ಶಿಸಿದರು.</p>.<p>ಶಿವಾಲಯ ನಾಟ್ಯಮಂದಿರದ ವಿದ್ಯಾರ್ಥಿಗಳ ದಶಾವತಾರ ನೃತ್ಯ ಪ್ರದರ್ಶನ ಪ್ರೇಕ್ಷಕರ ಕಣ್ಮನ ಸೆಳೆಯಿತು. ದಶಾವತಾರದ ಒಂದೊಂದು ಅವತಾರವು ನೃತ್ಯರೂಪಕದಲ್ಲಿ ಪ್ರದರ್ಶನವಾಗುತ್ತಿದ್ದಂತೆ ಪ್ರೇಕ್ಷಕರು ಚಪ್ಪಾಳೆ ತಟ್ಟಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಮತ್ಸ್ಯಾ, ವರಹ ಮತ್ತು ನರಸಿಂಹ ಅವತಾರ ನೋಡುಗರಲ್ಲಿ ಭಕ್ತಿ, ಭಾವ ಮೂಡಿಸಿತು.</p>.<p>ಭರತನಾಟ್ಯ ಕೇವಲ ವೃತ್ತಿವಲ್ಲ, ಭಕ್ತಿ ಮತ್ತು ಧ್ಯಾನದ ರೂಪಕವಾಗಿದೆ. ವಿದ್ಯಾರ್ಥಿಗಳು ಸಂಸ್ಕೃತಿಯನ್ನು ಸಂರಕ್ಷಿಸುವ ಸಲುವಾಗಿ ಭರತನಾಟ್ಯ, ಕರ್ನಾಟಿಕ್ ಸಂಗೀತ, ಸಾಹಿತ್ಯ, ಸಂಗೀತ ಸೇರಿದಂತೆ ವಿವಿಧ ಕಲೆಗಳನ್ನು ಅಭ್ಯಾಸ ಮಾಡಬೇಕು ಎಂದು ಶಿವಾಲಯ ನಾಟ್ಯಮಂದಿರದ ಮುಖ್ಯಸ್ಥೆ ಮಂಜುಳಾ ಹೇಳಿದರು.</p>.<p>ನೃತ್ಯ ಕಲಾವಿದರಾದ ಡಾ.ಸಂಧ್ಯಾ ರವಿ, ಭಾನುಪ್ರಿಯ ರಾಕೇಶ್, ಶಿವಾಲಯ ಆರ್ಟ್ಸ್ ಅಂಡ್ ಕಲ್ಚರಲ್ ಟ್ರಸ್ಟ್ ನ ಅಧ್ಯಕ್ಷ ಜಗದೀಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>