ಈ ಜಮೀನು ಸ್ವಾಧೀನಪಡಿಸಿಕೊಂಡಲ್ಲಿ, ಈ ಹೋಬಳಿಯ 1,800ಕ್ಕೂ ಹೆಚ್ಚು ಹಿಡುವಳಿದಾರರು ಭೂರಹಿತರಾಗಲಿದ್ದಾರೆ. ತರಕಾರಿ, ಹೂವು, ಹಣ್ಣಿಗಾಗಿ ಬೆಂಗಳೂರು ಮಹಾನಗರವು ಹೆಚ್ಚು ಅವಲಂಬಿಸಿರುವುದು ಇದೇ ದೇವನಹಳ್ಳಿ ತಾಲ್ಲೂಕನ್ನು. ಸಂಪದ್ಭರಿತ ಕೃಷಿ ಜಮೀನು ಕೈಗಾರಿಕೆ ಹೆಸರಿನಲ್ಲಿ ನಾಶವಾದರೆ, ಬೆಂಗಳೂರಿನ ಆಹಾರದ ಬಟ್ಟಲಿಗೇ ಕುತ್ತು ಬರಲಿದೆ.