ಗುರುವಾರ, 16 ಅಕ್ಟೋಬರ್ 2025
×
ADVERTISEMENT
ADVERTISEMENT

ಸದಸ್ಯರ ಕಿರುಕುಳದಿಂದ ಸಾವು: ಪುರಸಭೆ ಎದುರು ಪವನ್ ಜೋಷಿ ಶವ ಇಟ್ಟು ಪ್ರತಿಭಟನೆ

Published : 16 ಅಕ್ಟೋಬರ್ 2025, 2:04 IST
Last Updated : 16 ಅಕ್ಟೋಬರ್ 2025, 2:04 IST
ಫಾಲೋ ಮಾಡಿ
Comments
ಪ್ರತಿಭಟನೆ ವೇಳೆ ಕುಟುಂಬಸ್ಥರು ಮತ್ತು ಪೊಲೀಸರ ನಡುವೆ ಮಾತಿಕ ಚಕಮಕಿ
ಪ್ರತಿಭಟನೆ ವೇಳೆ ಕುಟುಂಬಸ್ಥರು ಮತ್ತು ಪೊಲೀಸರ ನಡುವೆ ಮಾತಿಕ ಚಕಮಕಿ
ಅಕ್ರಮ ಖಾತೆಗಳನ್ನು ಮಾಡಕೊಡದಿದ್ದರೆ ನಿಮ್ಮನ್ನು ಬೇರೆ ಕಡೆ ವರ್ಗಾಯಿಸಲಾಗುವುದು ಎಂದು ನನ್ನ ಗಂಡನಿಗೆ ಧಮ್ಕಿ ಹಾಕಿದ್ದರು. ಈ ಕಾರಣಕ್ಕೆ ತನ್ನ ಗಂಡ ಒತ್ತಡಕ್ಕೆ ಮಣಿದು ಸಾವನ್ನಪ್ಪಿದ್ದಾನೆ
ಅನನ್ಯ ಮೃತನ ಪತ್ನಿ
ಪೊಲೀಸರೊಂದಿಗೆ ಮಾತಿನ ಚಕಮಕಿ
ಪುರಸಭೆ ಬಾಗಿಲು ಎದುರು ಶವ ಇಟ್ಟು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕೆಲಕಾಲ ಪೊಲೀಸರು ಮತ್ತು ಮೃತ ಸಂಬಂಧಿಕರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಪುರಸಭೆ ಆವರಣದಲ್ಲಿ ಶವ ಇಟ್ಟು ಸಾರ್ವಜನಿಕರಿಗೆ ತೊಂದರೆ ನೀಡಬಾರದು. ಇಲ್ಲಿಂದ ಕೂಡಲೇ ಶವವನ್ನು ತೆರವುಗೊಳಿಸುವಂತೆ ಸಂಬಂಧಿಕರಿಗೆ ಪೊಲೀಸರು ಸೂಚಿಸಿದಾಗ ಸಂಬಂಧಿಕರು ಹಾಗೂ ಸ್ಥಳೀಯರು ಮೃತ ಪವನ್ ಜೋಷಿ ಸಾವಿಗೆ ಕಾರಣರಾದ ವ್ಯಕ್ತಿಗಳ ವಿರುದ್ಧ ಪೊಲೀಸರು ಕೂಡಲೇ ಎಫ್‍ಐಆರ್ ದಾಖಲಿಸಬೇಕು ಎಂದು ಪಟ್ಟು ಹಿಡಿದರು. ಎಫ್‍ಐಆರ್ ದಾಖಲಿಸಲಾಗುವುದು ಎಂದು ಸಂಬಂಧಿಕರಿಗೆ ಭರವಸೆ ನೀಡಿದ ಪೊಲೀಸರು ಸ್ಥಳಕ್ಕೆ ಆ್ಯಂಬುಲೆನ್ಸ್ ತರಿಸಿ ಶವವನ್ನು ಪುರಸಭೆಯಿಂದ ತೆಗೆದುಕೊಂಡು ಹೋದರು.
ಎಲ್ಲವೂ ಮೊಬೈಲ್‍ನಲ್ಲಿ ರೆಕಾರ್ಡಿಂಗ್
‘ತಮ್ಮ ಪತಿ ಪವನ್ ಜೋಷಿ ಬಳಸುತ್ತಿದ್ದ ಮೊಬೈಲ್ ನಲ್ಲಿ ಪ್ರತಿಯೊಂದು ರೆಕಾರ್ಡಿಂಗ್ ಆಗಿದ್ದು ಮೊಬೈಲ್ ಎಲ್ಲಾ ವಿಷಯಗಳ ಬಗ್ಗೆಯೂ ಸಂಪೂರ್ಣ ಮಾಹಿತಿ ಇದೆ. ಈಗ ಕಾಣದಾಗಿರುವ ಆ ಮೊಬೈಲ್ ಅನ್ನು ವಶಪಡಿಸಿಕೊಂಡು ತನಿಖೆಗೆ ಒಳ ಪಡಿಸಿದಾಗ ಎಲ್ಲಾ ಸತ್ಯ ಬಹಿರಂಗವಾಗಲಿದೆ’ ಎಂದು ಮೃತ ಪತ್ನಿ ಅನನ್ಯ ತಿಳಿಸಿದರು. ಪುರಸಭೆ ಸದಸ್ಯತ್ವ ರದ್ದುಪಡಿಸಲು ಒತ್ತಾಯ ಖಾಸಗಿ ಜಮೀನು ಪುರಸಭೆ ಸ್ವತ್ತುಗಳಿಗೆ ಅಕ್ರಮವಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಪುರಸಭೆ ಅಧಿಕಾರಿಗಳಿಗೆ ಧಮ್ಕಿ ಹಾಕಿ ಕಿರುಕುಳ ನೀಡುತ್ತಿರುವ ಪುರಸಭೆ ಸದಸ್ಯ ಹನೀಫುಲ್ಲಾ ಅವರ ಸದಸ್ಯತ್ವವನ್ನು ಈ ಕೂಡಲೇ ರದ್ದುಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪುರಸಭೆಯ ಅಧಿಕಾರಿಗಳಿಗೆ ಬ್ಲಾಕ್ ಮೇಲ್ ಮಾಡುತ್ತಿರುವ ಮುನಿರಾಜು ಜೆ.ಎನ್.ಶ್ರೀನಿವಾಸ್ ಛತ್ರಪತಿಮಹೇಶ್ ಅವರಿಂದ ಪುರಸಭೆಯಲ್ಲಿ ಸಾಕಷ್ಟು ಅಕ್ರಮಗಳು ನಡೆದಿದ್ದು ಅವರ ವಿರುದ್ಧ ಪೊಲೀಸರು ಸಂಬಂಧಪಟ್ಟ ಅಧಿಕಾರಿಗಳು ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT