ತರಕಾರಿ, ದಿನಸಿ, ಸಿಲಿಂಡರ್ ಬೆಲೆ, ಹೀಗೆ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗಿದೆ. ಬೇಸಿಗೆಯಲ್ಲಿ ತಯಾರಿಸಿದ ಚಟ್ನಿ, ಇಡ್ಲಿ, ದೋಸೆ ರುಚಿ ಕೆಡುತ್ತಿವೆ. ಹೆಚ್ಚು ಸಮಯ ಇಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಹೊಟೇಲ್ನಲ್ಲಿ 15 ಮಂದಿ ಕಾರ್ಮಿಕರಿದ್ದಾರೆ. ಅವರಿಗೆ ತಿಂಗಳಿಗೆ ಸರಿಯಾಗಿ ವೇತನ ಕೊಡಬೇಕು. ವಿದ್ಯುತ್, ನೀರು ಮತ್ತು ಕಟ್ಟಡ ಬಾಡಿಗೆ ಕಟ್ಟಬೇಕು. ಇವುಗಳ ನಿರ್ವಹಣೆಗೆ ಈಗ ಆಗುತ್ತಿರುವ ವ್ಯಾಪಾರ ಸಾಲುತ್ತಿಲ್ಲ. ನಷ್ಟದ ನಡುವೆ ಕೈಯಿಂದ ಈ ಬಿಲ್ಗಳನ್ನು ಕಟ್ಟಬೇಕಿದೆ ಎನ್ನುತ್ತಾರೆ ಹೊಟೇಲ್ ಮಾಲೀಕ ಶಾಂತಾರಾಮ್.