<p>ಪ್ರಜಾವಾಣಿ ವಾರ್ತೆ</p>.<p><strong>ಅನುಗೊಂಡನಹಳ್ಳಿ(ಹೊಸಕೋಟೆ):</strong> ಹೋಬಳಿಯ ಮುತ್ಸಂದ್ರ ಬಳಿಯ ದಿ ಗ್ರೀನ್ ಸ್ಕೂಲ್ ಬೆಂಗಳೂರು (ಟಿಜಿಎಸ್ಬಿ) ಶಾಲೆಯ ವಿದ್ಯಾರ್ಥಿಗಳು ನವರಾತ್ರಿ ಉತ್ಸವ ಪ್ರಯುಕ್ತ ಹಳೆಯ ಬಟ್ಟೆಗಳಿಂದ ಗೊಂಬೆ ತಯಾರಿಸಿ ನವರಾತ್ರಿ ಗೊಂಬೆ ಪ್ರದರ್ಶನಕ್ಕೆ ಸಿದ್ಧರಾಗುತ್ತಿದ್ದಾರೆ.</p>.<p>ಶಾಲೆಯ ವಿದ್ಯಾರ್ಥಿಗಳು ನವರಾತ್ರಿ ಆಚರಣೆಗಾಗಿ ಹಳೆಯ ಬಟ್ಟೆಗಳಿಂದ ಗೊಂಬೆಗಳನ್ನು ಸಿದ್ಧಪಡಿಸುವ ಮೂಲಕ ಪರಿಸರ ಸ್ನೇಹಿ ಮತ್ತು ತಮ್ಮ ಕರಕುಶಲ ಸೃಜನಶೀಲತೆ ಪ್ರದರ್ಶಿಸಿದ್ದಾರೆ ಶಾಲೆಯ ಪ್ರಾಂಶುಪಾಲೆ ಉಷಾ ಅಯ್ಯರ್ ತಿಳಿಸಿದರು.</p>.<p>ಹಳೆಹತ್ತಿ, ಬಟ್ಟೆಗಳನ್ನು ಬಳಸಿ ಗೊಂಬೆಗಳನ್ನು ತಯಾರಿಸುತ್ತಿದ್ದಾರೆ. ಕಪ್, ತೆಂಗಿನ ಚಿಪ್ಪು, ಬಾಟಲಿ ಮೂಲಕ ಅವುಗಳಿಗೆ ಜೀವ ತುಂಬುತ್ತಿದ್ದಾರೆ.</p>.<p>ಪ್ರತಿ ವರ್ಷ ಟನ್ಗಳಷ್ಟು ಜವಳಿ ತ್ಯಾಜ್ಯ ಸೃಷ್ಟಿಯಾಗುತ್ತೆ. ಅದರಲ್ಲಿ ಹೆಚ್ಚಿನ ಪ್ರಮಾಣ ಮನೆಯ ಬಟ್ಟೆಯ ತ್ಯಾಜ್ಯ ಮತ್ತು ಉಡುಪು ಉದ್ಯಮದಿಂದಲೇ ಉತ್ಪಾದನೆಯಾಗುತ್ತಿದೆ. ಹೀಗಾಗಿ ಈ ವರ್ಷ ಶಾಲೆಯ ಮಕ್ಕಳಿಗೆ ಬಟ್ಟೆಯ ಮರುಬಳಕೆ ಮಾಡುವುದು ಹೇಗೆ ಎಂಬುದನ್ನು ಕಲಿಸಿಕೊಡುವ ಮೂಲಕ ಪರಿಸರ ಸ್ನೇಹಿ ವಾತಾವರಣ ರೂಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.</p>.<p>Quote - ಪ್ಲಾಸ್ಟಿಕ್ ವಿಷಕಾರಕ ತ್ಯಾಜ್ಯ. ಅದನ್ನು ತಪ್ಪಿಸಲು ಶಾಲೆಯಲ್ಲಿ ನಾವು ಬಳಸಿ ಬೀಸಾಡುವ ಹಳೆಯ ಬಟ್ಟೆಗಳಿಂದ ಅಲಂಕಾರಿಕ ಗೊಂಬೆಗಳನ್ನು ತಯಾರಿಸಿ ಈ ಸಲ ನವರಾತ್ರಿ ಹಬ್ಬ ಮಾಡುತ್ತೇವೆ ದಿನೇಶ್ ಚೆಟ್ರಿ ವಿದ್ಯಾರ್ಥಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪ್ರಜಾವಾಣಿ ವಾರ್ತೆ</p>.<p><strong>ಅನುಗೊಂಡನಹಳ್ಳಿ(ಹೊಸಕೋಟೆ):</strong> ಹೋಬಳಿಯ ಮುತ್ಸಂದ್ರ ಬಳಿಯ ದಿ ಗ್ರೀನ್ ಸ್ಕೂಲ್ ಬೆಂಗಳೂರು (ಟಿಜಿಎಸ್ಬಿ) ಶಾಲೆಯ ವಿದ್ಯಾರ್ಥಿಗಳು ನವರಾತ್ರಿ ಉತ್ಸವ ಪ್ರಯುಕ್ತ ಹಳೆಯ ಬಟ್ಟೆಗಳಿಂದ ಗೊಂಬೆ ತಯಾರಿಸಿ ನವರಾತ್ರಿ ಗೊಂಬೆ ಪ್ರದರ್ಶನಕ್ಕೆ ಸಿದ್ಧರಾಗುತ್ತಿದ್ದಾರೆ.</p>.<p>ಶಾಲೆಯ ವಿದ್ಯಾರ್ಥಿಗಳು ನವರಾತ್ರಿ ಆಚರಣೆಗಾಗಿ ಹಳೆಯ ಬಟ್ಟೆಗಳಿಂದ ಗೊಂಬೆಗಳನ್ನು ಸಿದ್ಧಪಡಿಸುವ ಮೂಲಕ ಪರಿಸರ ಸ್ನೇಹಿ ಮತ್ತು ತಮ್ಮ ಕರಕುಶಲ ಸೃಜನಶೀಲತೆ ಪ್ರದರ್ಶಿಸಿದ್ದಾರೆ ಶಾಲೆಯ ಪ್ರಾಂಶುಪಾಲೆ ಉಷಾ ಅಯ್ಯರ್ ತಿಳಿಸಿದರು.</p>.<p>ಹಳೆಹತ್ತಿ, ಬಟ್ಟೆಗಳನ್ನು ಬಳಸಿ ಗೊಂಬೆಗಳನ್ನು ತಯಾರಿಸುತ್ತಿದ್ದಾರೆ. ಕಪ್, ತೆಂಗಿನ ಚಿಪ್ಪು, ಬಾಟಲಿ ಮೂಲಕ ಅವುಗಳಿಗೆ ಜೀವ ತುಂಬುತ್ತಿದ್ದಾರೆ.</p>.<p>ಪ್ರತಿ ವರ್ಷ ಟನ್ಗಳಷ್ಟು ಜವಳಿ ತ್ಯಾಜ್ಯ ಸೃಷ್ಟಿಯಾಗುತ್ತೆ. ಅದರಲ್ಲಿ ಹೆಚ್ಚಿನ ಪ್ರಮಾಣ ಮನೆಯ ಬಟ್ಟೆಯ ತ್ಯಾಜ್ಯ ಮತ್ತು ಉಡುಪು ಉದ್ಯಮದಿಂದಲೇ ಉತ್ಪಾದನೆಯಾಗುತ್ತಿದೆ. ಹೀಗಾಗಿ ಈ ವರ್ಷ ಶಾಲೆಯ ಮಕ್ಕಳಿಗೆ ಬಟ್ಟೆಯ ಮರುಬಳಕೆ ಮಾಡುವುದು ಹೇಗೆ ಎಂಬುದನ್ನು ಕಲಿಸಿಕೊಡುವ ಮೂಲಕ ಪರಿಸರ ಸ್ನೇಹಿ ವಾತಾವರಣ ರೂಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.</p>.<p>Quote - ಪ್ಲಾಸ್ಟಿಕ್ ವಿಷಕಾರಕ ತ್ಯಾಜ್ಯ. ಅದನ್ನು ತಪ್ಪಿಸಲು ಶಾಲೆಯಲ್ಲಿ ನಾವು ಬಳಸಿ ಬೀಸಾಡುವ ಹಳೆಯ ಬಟ್ಟೆಗಳಿಂದ ಅಲಂಕಾರಿಕ ಗೊಂಬೆಗಳನ್ನು ತಯಾರಿಸಿ ಈ ಸಲ ನವರಾತ್ರಿ ಹಬ್ಬ ಮಾಡುತ್ತೇವೆ ದಿನೇಶ್ ಚೆಟ್ರಿ ವಿದ್ಯಾರ್ಥಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>