ಭರಣಿ ಮಳೆ ಅಲ್ಲಲ್ಲಿ ತುಂತುರು ಮಳೆಯ ಹನಿಗಳನ್ನು ಸುರಿಸಲಿಕ್ಕಷ್ಟೇ ಸೀಮಿತವಾಗಿ ಈಗ ಕೃತ್ತಿಕಾ ಮಳೆ ವೇಳೆ ಭೂಮಿ ಹದಗೊಳಿಸುವುದು ವಾಡಿಕೆ. ಆದರೆ, ಬಿತ್ತನೆ ಆರಂಭವಾಗುವುದಕ್ಕೂ ಮುನ್ನ ಮಳೆಯಾಗದ ಕಾರಣ ಇದುವರೆಗೂ ಸಿದ್ಧತೆಗಳು ನಡೆದಿಲ್ಲ. ಭೂಮಿಯನ್ನು ಹದಗೊಳಿಸಿಕೊಂಡು ಬಿತ್ತನೆ ಆರಂಭಿಸಲು ಇನ್ನೂ 15 ದಿನ ಸಮಯಾವಕಾಶವಿದೆ. ಭೂಮಿಯನ್ನು ಹದಗೊಳಿಸುವ ಕಾರ್ಯ ಅರ್ಧ ಭಾಗದಷ್ಟೂ ಆಗಿಲ್ಲ. ಈ ಬಾರಿಯೂ ಬೆಳೆಗಳು ಕುಂಠಿತಗೊಳ್ಳಬಹುದೆಂಬ ಆತಂಕ ಈಗಿನಿಂದಲೇ ಕಾಡಲಾರಂಭಿಸಿದೆ ಎಂದು ರೈತ ನಾರಾಯಣಸ್ವಾಮಿ ತಿಳಿಸುತ್ತಾರೆ.