<p><strong>ದೊಡ್ಡಬಳ್ಳಾಪುರ: </strong>ನಗರದ ಜಯಚಾಮರಾಜೇಂದ್ರ ವೃತ್ತದಲ್ಲಿ ವರನಟ ಡಾ.ರಾಜ್ಕುಮಾರ್ ಕಂಚಿನ ಪುತ್ಥಳಿಯನ್ನು ಭಾನುವಾರ ನಟ ಶಿವರಾಜ್ಕುಮಾರ್ ಅನಾವರಣಗೊಳಿಸಿದರು.</p>.<p>ದೊಡ್ಡಬಳ್ಳಾಪುರ ನಗರಸಭೆ ಅನುದಾನದಲ್ಲಿ ತಾಲ್ಲೂಕು ಶಿವರಾಜ್ಕುಮಾರ್ ಕನ್ನಡ ಸೇನಾ ಸಮಿತಿ ನೇತೃತ್ವದಲ್ಲಿ ಈ ಪುತ್ಥಳಿಯನ್ನು ನವೀಕರಿಸಲಾಗಿದೆ. </p>.<p>‘ದೊಡ್ಡಬಳ್ಳಾಪುರ ಹಾಗೂ ನಮ್ಮ ಕುಟುಂಬಕ್ಕೆ ಅವಿನಾಭಾವ ಸಂಬಂಧ ಇದೆ. ನಮ್ಮ ಕುಟುಂಬದ ಮೇಲಿನ ನೀವು ಇಟ್ಟಿರುವ ಪ್ರೀತಿ ದೊಡ್ಡಬಳ್ಳಾಪುರ ನಗರಕ್ಕೆ ನನ್ನನ್ನು ಕರೆತಂದಿದೆ. ಇಲ್ಲಿನ ಕೆಸಿಎನ್ ಗೌಡರನ್ನು ಅಪ್ಪಾಜಿ ಅನ್ನದಾತರು ಎಂದು ಕರೆಯುತ್ತಿದ್ದರು‘ ಎಂದರು.</p>.<p>‘ದೊಡ್ಡಬಳ್ಳಾಪುರ ನನಗೆ ಹೊಸದಲ್ಲ. ‘ಮನಮೆಚ್ಚಿದ ಹುಡುಗಿ’, ‘ತವರಿಗೆ ಬಾ ತಂಗಿ’, ‘ವಾಲ್ಮೀಕಿ’ ಸಿನಿಮಾ ಶೂಟಿಂಗ್ ಇಲ್ಲಿ ಮಾಡಿದ್ದೇನೆ. ದೊಡ್ಡಬಳ್ಳಾಪುರದ ಮೇಲಿನ ಪ್ರೀತಿ, ಅಭಿಮಾನ ದೊಡ್ಡದು. ನಿಮ್ಮ ಪ್ರೀತಿಗೆ ನಾನು ಚಿರಋಣಿ’ ಎಂದು ಹೇಳಿದರು.</p>.<p>ಬಳಿಕ ಸಿನಿಮಾ ಸಂಭಾಷಣೆ, ಹಾಡು ಹೇಳಿ ಅಭಿಮಾನಿಗಳನ್ನು ರಂಜಿಸಿದರು. ಹಾಡಿನ ಜೊತೆಗೆ ಒಂದೆರೆಡು ಹೆಜ್ಜೆ ಹಾಕಿದರು. ಶಿವಣ್ಣ ಹಾಡಿಗೆ ಅಭಿಮಾನಿಗಳು ಶಿಳ್ಳೆ, ಚಪ್ಪಾಳೆ ಹೊಡೆದರು. ಅವರ ಹಾಡಿಗೆ ತಾವೂ ಧ್ವನಿಗೂಡಿಸಿದರು. </p>.<p>ಶಿವರಾಜ್ ಕುಮಾರ್ ಮತ್ತು ಗೀತಾ ದಂಪತಿಗೆ ಪೌರ ಸನ್ಮಾನ ನೀಡಲಾಯಿತು. ಬಳಿಕ ಬಾಗಿನ ಅರ್ಪಿಸಲಾಯಿತು.</p>.<p>ಡಾ.ರಾಜ್ಕುಮಾರ್ ಅವರು ಕರ್ನಾಟಕ ಮತ್ತು ಕನ್ನಡಿಗರ ಶಕ್ತಿ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಸದಭಿರುಚಿಯ ಚಿತ್ರಗಳನ್ನು ನೀಡಿದರು. ರಾಜ್ ಕುಟುಂಬ ಕಲೆಗಾಗಿ ತಮ್ಮ ಜೀವನ ಸಮರ್ಪಿಸಿಕೊಂಡಿದ್ದಾರೆ ಎಂದು ಶಾಸಕ ಧೀರಜ್ ಮುನಿರಾಜು ಮಾತನಾಡಿ, </p>.<p>ನಗರಸಭೆ ಅಧ್ಯಕ್ಷೆ ಸುಮಿತ್ರ ಆನಂದ್, ಉಪಾಧ್ಯಕ್ಷ ಎಂ.ಮಲ್ಲೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್.ರವಿಕುಮಾರ್, ಪೌರಾಯುಕ್ತ ಆರ್.ಕಾರ್ತಿಕೇಶ್ವರ, ನಗರಸಭೆ ಕಾರ್ಯಪಾಲಕ ಎಂಜಿನಿಯರ್ ರಾಮೇಗೌಡ, ನಗರಸಭೆ ಸದಸ್ಯ, ಚಿತ್ರ ನಿರ್ಮಾಪಕ ಕೆ.ಪಿ.ಶ್ರೀಕಾಂತ್, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ರವಿ ಮಾವಿನಕುಂಟೆ ಭಾಗವಹಿಸಿದ್ದರು.</p>.<p>ಹರೀಶ್ಗೌಡ, ಎಸ್.ಆರ್.ಮುನಿರಾಜು, ರವಿ ಹಸನ್ಘಟ್ಟ, ಡಿ.ಪಿ.ಆಂಜನೇಯ, ತಾಲ್ಲೂಕು ಶಿವರಾಜ್ ಕುಮಾರ್ ಕನ್ನಡ ಸೇನಾ ಸಮಿತಿ ಅಧ್ಯಕ್ಷ ಜೆ.ಆರ್.ರಮೇಶ್, ಗೌರವ ಅಧ್ಯಕ್ಷ ಕೆ.ಆನಂದ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎನ್.ಎಸ್.ಗುರುರಾಜ್. ಕಾರ್ಯಾಧ್ಯಕ್ಷ ಎ.ನಾರಾಯಣಸ್ವಾಮಿ, ಉಪಾಧ್ಯಕ್ಷ ಜಿ.ರಾಮು, ಸಮಿತಿಯ ಸಂಜಿವ, ರಂಗಸ್ವಾಮಿ, ಮಂಜುನಾಥ್, ಜೆ.ಆರ್.ರಾಘವೇಂದ್ರ ಇದ್ದರು.</p>.<div><blockquote>ನಾಡು ನುಡಿ ಅಭಿಮಾನಕ್ಕೆ ಡಾ.ರಾಜ್ಕುಮಾರ್ ಪ್ರೇರಣೆ ಆಗಬೇಕು. ಪ್ರತಿಯೊಬ್ಬರಿಗೂ ಕನ್ನಡದ ಅಭಿಮಾನ ಇರಬೇಕು.</blockquote><span class="attribution">ಡಾ.ಶಿವರಾಜ್ ಕುಮಾರ್ ನಟ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೊಡ್ಡಬಳ್ಳಾಪುರ: </strong>ನಗರದ ಜಯಚಾಮರಾಜೇಂದ್ರ ವೃತ್ತದಲ್ಲಿ ವರನಟ ಡಾ.ರಾಜ್ಕುಮಾರ್ ಕಂಚಿನ ಪುತ್ಥಳಿಯನ್ನು ಭಾನುವಾರ ನಟ ಶಿವರಾಜ್ಕುಮಾರ್ ಅನಾವರಣಗೊಳಿಸಿದರು.</p>.<p>ದೊಡ್ಡಬಳ್ಳಾಪುರ ನಗರಸಭೆ ಅನುದಾನದಲ್ಲಿ ತಾಲ್ಲೂಕು ಶಿವರಾಜ್ಕುಮಾರ್ ಕನ್ನಡ ಸೇನಾ ಸಮಿತಿ ನೇತೃತ್ವದಲ್ಲಿ ಈ ಪುತ್ಥಳಿಯನ್ನು ನವೀಕರಿಸಲಾಗಿದೆ. </p>.<p>‘ದೊಡ್ಡಬಳ್ಳಾಪುರ ಹಾಗೂ ನಮ್ಮ ಕುಟುಂಬಕ್ಕೆ ಅವಿನಾಭಾವ ಸಂಬಂಧ ಇದೆ. ನಮ್ಮ ಕುಟುಂಬದ ಮೇಲಿನ ನೀವು ಇಟ್ಟಿರುವ ಪ್ರೀತಿ ದೊಡ್ಡಬಳ್ಳಾಪುರ ನಗರಕ್ಕೆ ನನ್ನನ್ನು ಕರೆತಂದಿದೆ. ಇಲ್ಲಿನ ಕೆಸಿಎನ್ ಗೌಡರನ್ನು ಅಪ್ಪಾಜಿ ಅನ್ನದಾತರು ಎಂದು ಕರೆಯುತ್ತಿದ್ದರು‘ ಎಂದರು.</p>.<p>‘ದೊಡ್ಡಬಳ್ಳಾಪುರ ನನಗೆ ಹೊಸದಲ್ಲ. ‘ಮನಮೆಚ್ಚಿದ ಹುಡುಗಿ’, ‘ತವರಿಗೆ ಬಾ ತಂಗಿ’, ‘ವಾಲ್ಮೀಕಿ’ ಸಿನಿಮಾ ಶೂಟಿಂಗ್ ಇಲ್ಲಿ ಮಾಡಿದ್ದೇನೆ. ದೊಡ್ಡಬಳ್ಳಾಪುರದ ಮೇಲಿನ ಪ್ರೀತಿ, ಅಭಿಮಾನ ದೊಡ್ಡದು. ನಿಮ್ಮ ಪ್ರೀತಿಗೆ ನಾನು ಚಿರಋಣಿ’ ಎಂದು ಹೇಳಿದರು.</p>.<p>ಬಳಿಕ ಸಿನಿಮಾ ಸಂಭಾಷಣೆ, ಹಾಡು ಹೇಳಿ ಅಭಿಮಾನಿಗಳನ್ನು ರಂಜಿಸಿದರು. ಹಾಡಿನ ಜೊತೆಗೆ ಒಂದೆರೆಡು ಹೆಜ್ಜೆ ಹಾಕಿದರು. ಶಿವಣ್ಣ ಹಾಡಿಗೆ ಅಭಿಮಾನಿಗಳು ಶಿಳ್ಳೆ, ಚಪ್ಪಾಳೆ ಹೊಡೆದರು. ಅವರ ಹಾಡಿಗೆ ತಾವೂ ಧ್ವನಿಗೂಡಿಸಿದರು. </p>.<p>ಶಿವರಾಜ್ ಕುಮಾರ್ ಮತ್ತು ಗೀತಾ ದಂಪತಿಗೆ ಪೌರ ಸನ್ಮಾನ ನೀಡಲಾಯಿತು. ಬಳಿಕ ಬಾಗಿನ ಅರ್ಪಿಸಲಾಯಿತು.</p>.<p>ಡಾ.ರಾಜ್ಕುಮಾರ್ ಅವರು ಕರ್ನಾಟಕ ಮತ್ತು ಕನ್ನಡಿಗರ ಶಕ್ತಿ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಸದಭಿರುಚಿಯ ಚಿತ್ರಗಳನ್ನು ನೀಡಿದರು. ರಾಜ್ ಕುಟುಂಬ ಕಲೆಗಾಗಿ ತಮ್ಮ ಜೀವನ ಸಮರ್ಪಿಸಿಕೊಂಡಿದ್ದಾರೆ ಎಂದು ಶಾಸಕ ಧೀರಜ್ ಮುನಿರಾಜು ಮಾತನಾಡಿ, </p>.<p>ನಗರಸಭೆ ಅಧ್ಯಕ್ಷೆ ಸುಮಿತ್ರ ಆನಂದ್, ಉಪಾಧ್ಯಕ್ಷ ಎಂ.ಮಲ್ಲೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್.ರವಿಕುಮಾರ್, ಪೌರಾಯುಕ್ತ ಆರ್.ಕಾರ್ತಿಕೇಶ್ವರ, ನಗರಸಭೆ ಕಾರ್ಯಪಾಲಕ ಎಂಜಿನಿಯರ್ ರಾಮೇಗೌಡ, ನಗರಸಭೆ ಸದಸ್ಯ, ಚಿತ್ರ ನಿರ್ಮಾಪಕ ಕೆ.ಪಿ.ಶ್ರೀಕಾಂತ್, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ರವಿ ಮಾವಿನಕುಂಟೆ ಭಾಗವಹಿಸಿದ್ದರು.</p>.<p>ಹರೀಶ್ಗೌಡ, ಎಸ್.ಆರ್.ಮುನಿರಾಜು, ರವಿ ಹಸನ್ಘಟ್ಟ, ಡಿ.ಪಿ.ಆಂಜನೇಯ, ತಾಲ್ಲೂಕು ಶಿವರಾಜ್ ಕುಮಾರ್ ಕನ್ನಡ ಸೇನಾ ಸಮಿತಿ ಅಧ್ಯಕ್ಷ ಜೆ.ಆರ್.ರಮೇಶ್, ಗೌರವ ಅಧ್ಯಕ್ಷ ಕೆ.ಆನಂದ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎನ್.ಎಸ್.ಗುರುರಾಜ್. ಕಾರ್ಯಾಧ್ಯಕ್ಷ ಎ.ನಾರಾಯಣಸ್ವಾಮಿ, ಉಪಾಧ್ಯಕ್ಷ ಜಿ.ರಾಮು, ಸಮಿತಿಯ ಸಂಜಿವ, ರಂಗಸ್ವಾಮಿ, ಮಂಜುನಾಥ್, ಜೆ.ಆರ್.ರಾಘವೇಂದ್ರ ಇದ್ದರು.</p>.<div><blockquote>ನಾಡು ನುಡಿ ಅಭಿಮಾನಕ್ಕೆ ಡಾ.ರಾಜ್ಕುಮಾರ್ ಪ್ರೇರಣೆ ಆಗಬೇಕು. ಪ್ರತಿಯೊಬ್ಬರಿಗೂ ಕನ್ನಡದ ಅಭಿಮಾನ ಇರಬೇಕು.</blockquote><span class="attribution">ಡಾ.ಶಿವರಾಜ್ ಕುಮಾರ್ ನಟ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>