ಭಾವಪರವಶತೆಗೆ ಒಳಗಾದ ಸಂದರ್ಭದಲ್ಲಿ ಸಹಜವಾಗಿ ನರನಾಡಿಗಳು ಬಿಗಿಯಲ್ಪಡುತ್ತವೆ. ಇದರಿಂದಾಗಿ ಕೈ – ಕಾಲುಗಳಲ್ಲಿ ನಡುಕ ಕಾಣಬರುವುದು ಸಹಜ. ಮಿದುಳಿನಲ್ಲಿನ ರಾಸಾಯನಿಕ ಪ್ರಕ್ರಿಯೆಗಳ ಏರಿಳಿತದಿಂದಾಗಿ ಕೆಲ ಕ್ಷಣಗಳ ವರೆಗೆ ಇಂತಹ ಭಾವೋದ್ವೇಗಕ್ಕೆ ವ್ಯಕ್ತಿಗಳು ಒಳಗಾಗುತ್ತಾರೆ. ಆನಂದ ಬಾಷ್ಪ ಸುರಿಯುವುದೂ ಇಂತಹದೇ ಪ್ರಕ್ರಿಯ ಭಾಗ.