ನಗರದ ಇಸ್ಲಾಂಪುರದಲ್ಲಿ ಮುಸ್ಲಿಮರು ಕೂಡ ರಥವನ್ನು ಸ್ವಾಗತಿಸಿದರು. ಬಜರಂಗದಳ ಸ್ಥಾಪನೆಯಾಗಿ 60 ವರ್ಷ ಪೂರೈಸಿರುವ ಈ ಸಂದರ್ಭದಲ್ಲಿ ನಡೆಯುತ್ತಿರುವ ಐತಿಹಾಸಿಕ ರಥಯಾತ್ರೆ 90ರ ದಶಕದಲ್ಲಿ ನಡೆದ ರಾಮಮಂದಿರ ರಥಯಾತ್ರೆಯಷ್ಟೇ ಪ್ರಮುಖವಾಗಿದೆ. ಚಿತ್ರದುರ್ಗದಲ್ಲಿ ಸೆ.25ರಂದು ಆರಂಭವಾಗಿದ್ದು ಅ.10ರಂದು ಉಡುಪಿಯಲ್ಲಿ ಸಮಾರೋಪಗೊಳ್ಳಲಿದೆ ಎಂದು ಬಜರಂಗದಳ ಮುಖಂಡರು ತಿಳಿಸಿದ್ದಾರೆ.