ಗುಂಪು ಗುಂಪುಗಳಲ್ಲಿ ಜನರು ಲಗ್ಗೇಜ್ಗಳೊಂದಿಗೆ ಅತ್ತಿಬೆಲೆ ಗಡಿಯಲ್ಲಿ ಸಾಗುತ್ತಿದ್ದ ದೃಶ್ಯ ಬೆಳಗ್ಗೆಯಿಂದಲೂ ಕಂಡು ಬಂದಿತು. ಹೊಸೂರು, ಕೃಷ್ಣಗಿರಿ, ಧರ್ಮಪುರಿ ಸೇರಿದಂತೆ ತಮಿಳುನಾಡಿನ ವಿವಿಧೆಡೆಗೆ ತೆರಳುವ ಬಸ್ಗಳು ಅತ್ತಿಬೆಲೆಯಲ್ಲಿ ಬಂದು ನಿಲ್ಲುತ್ತಿದ್ದಂತೆ ಜನಜಂಗುಳಿ ಕೆಲವೇ ನಿಮಿಷಗಳಲ್ಲಿ ತುಂಬುತ್ತಿದ್ದ ದೃಶ್ಯ ಕಂಡು ಬಂದಿತು.