‘ಸದ್ಹಿದ್ ಹಾಗೂ ಇತರ ನಾಲ್ವರು ಗೆಳೆಯರು ಈದ್ ಮಿಲಾದ್ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಜೊತೆಯಾಗಿ ಬಂದಿದ್ದರು. ಮೆರವಣಿಗೆ ಮುಂದೆ ಸಾಗಿದಾಗ ಸದ್ಹಿದ್ ಮಾತ್ರ ಹಿಂದೆ ಉಳಿದ. ಹಿಂದಿನಿಂದ ಓಡುವ ವೇಳೆ ಆಯತಪ್ಪಿ ಬಾವಿಗೆ ಬಿದ್ದ. ಇದನ್ನು ಗಮನಿಸಿದ ವ್ಯಕ್ತಿ ಬಾಲಕನ ರಕ್ಷಣೆಗಾಗಿ ಬಾವಿಗೆ ಜಿಗಿದರು.
ಆದರೆ, ಅವರಿಗೂ ಬಹಳ ಹೊತ್ತು ಈಜಲು ಸಾಧ್ಯವಾಗದ ಕಾರಣ ಚೀರಾಟ ಶುರು ಮಾಡಿದರು. ಇದನ್ನು ಕೇಳಿದ ಜನ ಬಾವಿಯಲ್ಲಿ ಇಣುಕಿದಾಗ ವಿಷಯ ಗೊತ್ತಾಯಿತು. ಹಗ್ಗದ ನೆರವಿನಿಂದ ಇಬ್ಬರನ್ನೂ ಮೇಲಕ್ಕೆ ತಂದು, ಜಿಲ್ಲಾಸ್ಪತ್ರೆಗೆ ಸಾಗಿಸಿದರು. ಆದರೆ, ಅಷ್ಟರೊಳಗೆ ಬಾಲಕ ಕೊನೆಯುಸಿರೆಳೆದಿದ್ದ’ ಎಂದು ಟಿಳಕವಾಡಿ ಠಾಣೆಯ ಸಿಪಿಐ ದಯಾನಂದ ಶೇಗುಣಸಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.