‘ಚಿಕ್ಕೋಡಿ, ಕಾಗವಾಡ, ಅಥಣಿ, ರಾಯಬಾಗ ತಾಲ್ಲೂಕುಗಳಲ್ಲಿ ತಲಾ 10, ನಿಪ್ಪಾಣಿಯಲ್ಲಿ 12, ಗೋಕಾಕದಲ್ಲಿ 18, ಮೂಡಲಗಿಯಲ್ಲಿ 15, ಹುಕ್ಕೇರಿಯಲ್ಲಿ 17 ಹಾಗೂ ಖಾನಾಪುರದಲ್ಲಿ 4 ಗ್ರಾಮಗಳನ್ನು ಸ್ಥಳಾಂತರಿಸಲಾಗಿದೆ. ಕಾಗವಾಡ ತಾಲ್ಲೂಕಿನಲ್ಲಿ ಅತಿಹೆಚ್ಚು ಅಂದರೆ 7,409 ಮಂದಿಯನ್ನು ಸ್ಥಳಾಂತರಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದ್ದಾರೆ.