<p><strong>ಬೆಳಗಾವಿ</strong>: ನಗರವೂ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಗುರುವಾರ ಈದ್ ಉಲ್ ಫಿತ್ರ್ ಸಂಭ್ರಮ ಕಳೆಗಟ್ಟಿತ್ತು. ಮಕ್ಕಳು, ಹಿರಿಯರಾದಿಯಾಗಿ ಎಲ್ಲರೂ ಹೊಸ ಬಟ್ಟೆಗಳನ್ನು ಧರಿಸಿ, ಅತ್ತರ್ನ ಘಮಲು ಪೂಸಿಕೊಂಡು ಸಂಭ್ರಮಿಸಿದರು. ಬೆಳಿಗ್ಗೆಯೇ ಈದ್ಗಾ ಮೈದಾನಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.</p><p>ಈ ಬಾರಿ ಬರಗಾಲದ ಬವಣೆಯಿಂದ ಜನರನ್ನು ರಕ್ಷಿಸು ಎಂದು ಧರ್ಮಗುರುಗಳು ಅಲ್ಲಾಹುನಲ್ಲಿ ಪ್ರಾರ್ಥನೆ ಮಾಡಿದರು. ಉಪವಾಸ ವೃತ ಮಾಡಿದ ಹಲವು ಮಕ್ಕಳು ಕೂಡ ಜುಬ್ಬಾ, ಟೋಪಿಗಳನ್ನು ಧರಿಸಿ ಗಮನ ಸೆಳೆದರು.</p><p>ರಂಜಾನ್ ಅಂಗವಾಗಿ ಒಂದು ತಿಂಗಳ ಉಪವಾಸ ಆಚರಿಸಿದ ಮುಸ್ಲಿಮರು, ಹಬ್ಬದ ಕೊನೆಯ ದಿನವನ್ನು ಶ್ರದ್ಧೆಯಿಂದ ಕಳೆದರು. ಹಿಂದೂ, ಕ್ರೈಸ್ತ ಸಮುದಾಯದ ಹಲವು ಮುಖಂಡರು ಕೂಡ ಶುಭಾಶಯ ಕೋರಿ ಸಹಬಾಳ್ವೆಯ ಸಂದೇಶ ಸಾರಿದರು.</p><p>ಮಸೀದಿಗಳಿಗೆ ತೆರಳಿದ ಪುರುಷರು, ಮಕ್ಕಳು ನಮಾಜ್ ಮಾಡಿದರು. ಇಲ್ಲಿನ ನ್ಯಾಯಾಲಯ ಬಳಿ ಇರುವ ಈದ್ಗಾ ಮೈದಾನ, ಕೋಟೆ ಆವರಣದಲ್ಲಿರುವ ಪುರಾತನ ಕಾಲದ ಮಸೀದಿಯಲ್ಲಿ ಅಪಾರ ಸಂಖ್ಯೆಯ ಜನ ಸೇರಿದ್ದರು. ಎಲ್ಲ ಸಣ್ಣಪುಟ್ಟ ಮಸೀದಿ, ದರ್ಗಾಗಳಲ್ಲೂ ಮುಸ್ಲಿಮ್ ಧರ್ಮೀಯರ ಸಂಭ್ರಮ ಮನೆ ಮಾಡಿತು.</p><p>ಹೊಸ ಬಟ್ಟೆ ತೊಟ್ಟು ಬಂದಿದ್ದ ಮುಸ್ಲಿಂ ಯುವಕರು, ಹಿರಿಯರು, ಮಕ್ಕಳು ಈದ್ಗಾ ಮೈದಾನಕ್ಕೆ ತಂಡೋಪ ತಂಡವಾಗಿ ಬಂದರು. ನಮಾಜ್ ನಂತರ ಪರಸ್ಪರರು ಅಪ್ಪಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಹಬ್ಬದ ಪ್ರಯುಕ್ತ ಚಿಣ್ಣರ ಉತ್ಸಾಹವೂ ಇಮ್ಮಡಿಯಾಗಿತ್ತು.</p><p>ಎಲ್ಲರ ಬದುಕಿನಲ್ಲಿ ಶಾಂತಿ, ಸಹಬಾಳ್ವೆ ಮೂಡಲಿ, ಬರದ ಸಂಕಷ್ಟಗಳಿಂದ ಹೊರಬರಲಿ ಎಂದು ಪ್ರಾರ್ಥಿಸಿದ್ದಾಗಿ ಮೌಲ್ವಿಗಳು ತಿಳಿಸಿದರು. ವಿವಿಧ ರಾಜಕೀಯ ಪಕ್ಷಗಳ ನಾಯಕರೂ ಈದ್ಗಾಗೆ ತೆರಳಿ ಹಬ್ಬದ ಶುಭಾಶಯ ಕೋರಿದರು.</p><p>ಚಿಕ್ಕೋಡಿ, ಗೋಕಾಕ, ಬೈಲಹೊಂಗಲ, ಖಾನಾಪುರ, ರಾಮದುರ್ಗ, ಸವದತ್ತಿ, ಹಿರೇಬಾಗೇವಾಡಿ, ರಾಯಬಾಗ, ನಿಪ್ಪಾಣಿ ಸೇರಿದಂತೆ ಎಲ್ಲ ಪಟ್ಟಣ ಹಾಗೂ ಹಳ್ಳಿಗಳಲ್ಲೂ ಪ್ರಾರ್ಥನೆಗೆ ಬರುವವರ ದಟ್ಟಣೆ ಹೆಚ್ಚಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ</strong>: ನಗರವೂ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಗುರುವಾರ ಈದ್ ಉಲ್ ಫಿತ್ರ್ ಸಂಭ್ರಮ ಕಳೆಗಟ್ಟಿತ್ತು. ಮಕ್ಕಳು, ಹಿರಿಯರಾದಿಯಾಗಿ ಎಲ್ಲರೂ ಹೊಸ ಬಟ್ಟೆಗಳನ್ನು ಧರಿಸಿ, ಅತ್ತರ್ನ ಘಮಲು ಪೂಸಿಕೊಂಡು ಸಂಭ್ರಮಿಸಿದರು. ಬೆಳಿಗ್ಗೆಯೇ ಈದ್ಗಾ ಮೈದಾನಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.</p><p>ಈ ಬಾರಿ ಬರಗಾಲದ ಬವಣೆಯಿಂದ ಜನರನ್ನು ರಕ್ಷಿಸು ಎಂದು ಧರ್ಮಗುರುಗಳು ಅಲ್ಲಾಹುನಲ್ಲಿ ಪ್ರಾರ್ಥನೆ ಮಾಡಿದರು. ಉಪವಾಸ ವೃತ ಮಾಡಿದ ಹಲವು ಮಕ್ಕಳು ಕೂಡ ಜುಬ್ಬಾ, ಟೋಪಿಗಳನ್ನು ಧರಿಸಿ ಗಮನ ಸೆಳೆದರು.</p><p>ರಂಜಾನ್ ಅಂಗವಾಗಿ ಒಂದು ತಿಂಗಳ ಉಪವಾಸ ಆಚರಿಸಿದ ಮುಸ್ಲಿಮರು, ಹಬ್ಬದ ಕೊನೆಯ ದಿನವನ್ನು ಶ್ರದ್ಧೆಯಿಂದ ಕಳೆದರು. ಹಿಂದೂ, ಕ್ರೈಸ್ತ ಸಮುದಾಯದ ಹಲವು ಮುಖಂಡರು ಕೂಡ ಶುಭಾಶಯ ಕೋರಿ ಸಹಬಾಳ್ವೆಯ ಸಂದೇಶ ಸಾರಿದರು.</p><p>ಮಸೀದಿಗಳಿಗೆ ತೆರಳಿದ ಪುರುಷರು, ಮಕ್ಕಳು ನಮಾಜ್ ಮಾಡಿದರು. ಇಲ್ಲಿನ ನ್ಯಾಯಾಲಯ ಬಳಿ ಇರುವ ಈದ್ಗಾ ಮೈದಾನ, ಕೋಟೆ ಆವರಣದಲ್ಲಿರುವ ಪುರಾತನ ಕಾಲದ ಮಸೀದಿಯಲ್ಲಿ ಅಪಾರ ಸಂಖ್ಯೆಯ ಜನ ಸೇರಿದ್ದರು. ಎಲ್ಲ ಸಣ್ಣಪುಟ್ಟ ಮಸೀದಿ, ದರ್ಗಾಗಳಲ್ಲೂ ಮುಸ್ಲಿಮ್ ಧರ್ಮೀಯರ ಸಂಭ್ರಮ ಮನೆ ಮಾಡಿತು.</p><p>ಹೊಸ ಬಟ್ಟೆ ತೊಟ್ಟು ಬಂದಿದ್ದ ಮುಸ್ಲಿಂ ಯುವಕರು, ಹಿರಿಯರು, ಮಕ್ಕಳು ಈದ್ಗಾ ಮೈದಾನಕ್ಕೆ ತಂಡೋಪ ತಂಡವಾಗಿ ಬಂದರು. ನಮಾಜ್ ನಂತರ ಪರಸ್ಪರರು ಅಪ್ಪಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಹಬ್ಬದ ಪ್ರಯುಕ್ತ ಚಿಣ್ಣರ ಉತ್ಸಾಹವೂ ಇಮ್ಮಡಿಯಾಗಿತ್ತು.</p><p>ಎಲ್ಲರ ಬದುಕಿನಲ್ಲಿ ಶಾಂತಿ, ಸಹಬಾಳ್ವೆ ಮೂಡಲಿ, ಬರದ ಸಂಕಷ್ಟಗಳಿಂದ ಹೊರಬರಲಿ ಎಂದು ಪ್ರಾರ್ಥಿಸಿದ್ದಾಗಿ ಮೌಲ್ವಿಗಳು ತಿಳಿಸಿದರು. ವಿವಿಧ ರಾಜಕೀಯ ಪಕ್ಷಗಳ ನಾಯಕರೂ ಈದ್ಗಾಗೆ ತೆರಳಿ ಹಬ್ಬದ ಶುಭಾಶಯ ಕೋರಿದರು.</p><p>ಚಿಕ್ಕೋಡಿ, ಗೋಕಾಕ, ಬೈಲಹೊಂಗಲ, ಖಾನಾಪುರ, ರಾಮದುರ್ಗ, ಸವದತ್ತಿ, ಹಿರೇಬಾಗೇವಾಡಿ, ರಾಯಬಾಗ, ನಿಪ್ಪಾಣಿ ಸೇರಿದಂತೆ ಎಲ್ಲ ಪಟ್ಟಣ ಹಾಗೂ ಹಳ್ಳಿಗಳಲ್ಲೂ ಪ್ರಾರ್ಥನೆಗೆ ಬರುವವರ ದಟ್ಟಣೆ ಹೆಚ್ಚಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>