ತಾಲ್ಲೂಕಿನಲ್ಲಿ ನೆರೆ ಹಾವಳಿ, ಅತಿವೃಷ್ಟಿ, ಬೆಲೆ ಏರಿಳಿತಗಳಿಂದ ನಲುಗಿ ಹೋಗಿದ್ದ ರೈತರು ಈಗ ಬಂದೆರೆಗಿರುವ ಕೊರೊನಾ ಕಂಟಕದಿಂದಾಗಿ ಮತ್ತೆ ನಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ಈಚೆಗೆ ಕೃಷಿ ಉತ್ಪನ್ನಗಳ ಸಾಗಣೆ ಮತ್ತು ಮಾರಾಟಕ್ಕೆ ಅನುಕೂಲ ಕಲ್ಪಿಸಿದೆ. ಆದರೆ, ಹೂವು, ಹಣ್ಣು, ತರಕಾರಿ ಮೊದಲಾದ ಕೃಷಿ ಉತ್ಪನ್ನಗಳು ಮಾರಾಟ ಆಗದೆ ಇರುವುದರಿಂದ ಅನೇಕ ರೈತರು ಅವುಗಳನ್ನು ನಾಶಪಡಿಸುತ್ತಿದ್ದಾರೆ.